ETV Bharat / state

ವಿಜಯನಗರ, ವಿಜಯಪುರದಲ್ಲಿ ಬಿರುಗಾಳಿ, ಮಳೆ: ಸಿಡಿಲು ಬಡಿದು ಕುಷ್ಟಗಿಯಲ್ಲಿ ತೆಂಗಿನ ಮರಕ್ಕೆ ಬೆಂಕಿ

author img

By

Published : Apr 28, 2022, 9:46 PM IST

ವಿಜಯಪುರ, ವಿಜಯನಗರ ಮತ್ತು ಕುಷ್ಟಗಿಯಲ್ಲಿ ಭಾರಿ ಮಳೆಯಾಗಿದೆ. ರೇಷ್ಮೆ ಮನೆಯ ಗೋಡೆ ಬಿದ್ದು ಶೇಖರ್ ಎಂಬ ಯುವಕ ವಿಜಯನಗರದಲ್ಲಿ ಮೃತಪಟ್ಟಿದ್ದಾರೆ. ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸಿಡಿಲಿಗೆ ತೆಂಗಿನ ಮರ ಆಹುತಿಯಾಗಿದೆ.

Windy rain in Vijayanagar, Vijayapura
ವಿಜಯನಗರ, ವಿಜಯಪುರದಲ್ಲಿ ಬೀರುಗಾಳಿ ಸಹಿತ ಮಳೆ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಗುರುವಾರ ಭಾರಿ ಗಾಳಿಯೊಂದಿಗೆ ಆಲಿಕಲ್ಲಿನ ಮಳೆ ಸುರಿದಿದೆ. ಸತತ 4 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ತಾಲೂಕಿನ ಬಲ್ಲಾಹುಣಿಸಿ ಗ್ರಾಮದಲ್ಲಿ ಕಾಮಗಾರಿ ಹಂತದಲ್ಲಿರುವ ರೇಷ್ಮೆ ಮನೆಯ ಗೋಡೆ ಬಿದ್ದು ಶೇಖರ್ (25) ಎಂಬ ಯುವಕ ಸಾವಿಗೀಡಾಗಿದ್ದಾನೆ. ಜೊತೆಗಿದ್ದ ಬಸವರಾಜ ಎಂಬುವರ ಕಾಲು ಮುರಿದಿದೆ.


ಸಿಡಿಲಿಗೆ ತೆಂಗಿನ ಮರ ಆಹುತಿ: ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸಿಡಿಲಿಗೆ ತೆಂಗಿನ ಮರ ಆಹುತಿಯಾಗಿದೆ. ಹನುಮಸಾಗರದ‌ ಶಂಕರಪ್ಪ ಪರಸಪ್ಪ ಹುಲಮನಿ ಮನೆಯ ಮುಂಭಾಗ ತೆಂಗಿನ ಮರಕ್ಕೆ ಸಿಡಿಲು‌ ಎರಗಿ, ಧಗಧಗನೇ ಹೊತ್ತಿ ಉರಿದಿದೆ. ಈ ಬೆಳವಣಿಗೆ ಕೆಲವು ಕ್ಷಣ ಆತಂಕ ಸೃಷ್ಟಿಸಿತ್ತು.

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಬಿರುಗಾಳಿಸಮೇತ ಗುಡುಗು, ಮಿಂಚು ಸೇರಿ ಭಾರಿ ಮಳೆಯಾಗಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಬಳಿ ವಿಜಯಪುರ- ಅಥಣಿ ಮುಖ್ಯರಸ್ತೆ ಮೇಲೆ ಬೃಹತ್ ಮರವೊಂದು ಬಿದ್ದು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಭಾರಿ ಗಾತ್ರದ ಮರ ನೆಲಕ್ಕುರುಳಿದೆ.

ಇದನ್ನೂ ಓದಿ: ಯುವತಿ ಸಾವಿನ ವಿಚಾರ ಮುಚ್ಚಿಟ್ಟಿದ್ದಕ್ಕೆ ಪಾಲಕರ ವಿರುದ್ಧ ಪ್ರಕರಣ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಗುರುವಾರ ಭಾರಿ ಗಾಳಿಯೊಂದಿಗೆ ಆಲಿಕಲ್ಲಿನ ಮಳೆ ಸುರಿದಿದೆ. ಸತತ 4 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ತಾಲೂಕಿನ ಬಲ್ಲಾಹುಣಿಸಿ ಗ್ರಾಮದಲ್ಲಿ ಕಾಮಗಾರಿ ಹಂತದಲ್ಲಿರುವ ರೇಷ್ಮೆ ಮನೆಯ ಗೋಡೆ ಬಿದ್ದು ಶೇಖರ್ (25) ಎಂಬ ಯುವಕ ಸಾವಿಗೀಡಾಗಿದ್ದಾನೆ. ಜೊತೆಗಿದ್ದ ಬಸವರಾಜ ಎಂಬುವರ ಕಾಲು ಮುರಿದಿದೆ.


ಸಿಡಿಲಿಗೆ ತೆಂಗಿನ ಮರ ಆಹುತಿ: ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸಿಡಿಲಿಗೆ ತೆಂಗಿನ ಮರ ಆಹುತಿಯಾಗಿದೆ. ಹನುಮಸಾಗರದ‌ ಶಂಕರಪ್ಪ ಪರಸಪ್ಪ ಹುಲಮನಿ ಮನೆಯ ಮುಂಭಾಗ ತೆಂಗಿನ ಮರಕ್ಕೆ ಸಿಡಿಲು‌ ಎರಗಿ, ಧಗಧಗನೇ ಹೊತ್ತಿ ಉರಿದಿದೆ. ಈ ಬೆಳವಣಿಗೆ ಕೆಲವು ಕ್ಷಣ ಆತಂಕ ಸೃಷ್ಟಿಸಿತ್ತು.

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಬಿರುಗಾಳಿಸಮೇತ ಗುಡುಗು, ಮಿಂಚು ಸೇರಿ ಭಾರಿ ಮಳೆಯಾಗಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಬಳಿ ವಿಜಯಪುರ- ಅಥಣಿ ಮುಖ್ಯರಸ್ತೆ ಮೇಲೆ ಬೃಹತ್ ಮರವೊಂದು ಬಿದ್ದು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಭಾರಿ ಗಾತ್ರದ ಮರ ನೆಲಕ್ಕುರುಳಿದೆ.

ಇದನ್ನೂ ಓದಿ: ಯುವತಿ ಸಾವಿನ ವಿಚಾರ ಮುಚ್ಚಿಟ್ಟಿದ್ದಕ್ಕೆ ಪಾಲಕರ ವಿರುದ್ಧ ಪ್ರಕರಣ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.