ETV Bharat / state

ಕೇಂದ್ರ ಸರ್ಕಾರ ತುಂಬಾ ಸಹಾಯ ಮಾಡಿದೆ: ಉಕ್ರೇನ್​ನಿಂದ ಮರಳಿದ ವಿಜಯಪುರ ವಿದ್ಯಾರ್ಥಿ ಕೃತಜ್ಞತೆ

author img

By

Published : Mar 6, 2022, 3:56 PM IST

ಮೂರು ದಿನಗಳ ಕಾಲ ರೊಮೇನಿಯಾದಲ್ಲಿ ಇರಬೇಕಾಯಿತು. ಆಗ ಭಾರತೀಯ ರಾಯಭಾರ ಕಚೇರಿಯವರು ಊಟ ವಸತಿ ವ್ಯವಸ್ಥೆ ಮಾಡಿದ್ದರು. ಮಾರ್ಚ್​ 4ರಂದು ದೆಹಲಿಯನ್ನು ತಲುಪಿದೆ. ಅಲ್ಲಿಂದ ಬೆಂಗಳೂರಿಗೆ ವ್ಯವಸ್ಥಿತವಾಗಿ ಸರ್ಕಾರ ಕಳುಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಉತ್ತಮವಾಗಿ ಸ್ಪಂದಿಸಿವೆ ಎಂದು ವಿಜಯಪುರದ ವಿದ್ಯಾರ್ಥಿ ಧನ್ಯವಾದ ತಿಳಿಸಿದ್ದಾರೆ.

The Government of India has helped so much
ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ

ವಿಜಯಪುರ: ಯುದ್ಧ ಪೀಡಿತ ಉಕ್ರೇನ್​ನಿಂದ ಸುರಕ್ಷಿತವಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್​ನಿಂದ ವಾಪಸಾಗಿ ಇಂದು ಮನೆ ಸೇರಿದ್ದಾರೆ.

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ

ಮೆಡಿಕಲ್ ವಿದ್ಯಾರ್ಥಿಯಾಗಿರುವ ಸಿದ್ದು ಪೂಜಾರಿ ಉಕ್ರೇನ್​ನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದರು. ಮನೆಗೆ ವಾಪಸಾದ ಸಿದ್ದುಗೆ ಪೋಷಕರು ದೃಷ್ಟಿ ತೆಗೆದು ಮನೆಯೊಳಗೆ ಕರೆದುಕೊಂಡಿದ್ದಾರೆ. ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ ಮಾತನಾಡಿ, ಕಳೆದ ಫೆಬ್ರುವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ. ಅಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡೆ. ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಊಟ ವಸತಿಯ ವ್ಯವಸ್ಥೆ ಮಾಡಿದರು. ರೊಮೇನಿಯಾದಿಂದ ಬಂದು ಮಾರ್ಚ್​ 4ರಂದು ದೆಹಲಿ ತಲುಪಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ನಮ್ಮೂರಿಗೆ ಬಂದಿದ್ದೇನೆ. ಸುರಕ್ಷತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದರು.

ಸಿದ್ದು ಪೂಜಾರಿ ಮನೆಗೆ ಬಸವನಬಾಗೇವಾಡಿ ತಹಶೀಲ್ದಾರ್​ ವಿಜಯಕುಮಾರ್ ಕಡಕೋಳ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: ಉಕ್ರೇನ್​ನಿಂದ ಬೆಂಗಳೂರಿಗೆ 9 ವಿದ್ಯಾರ್ಥಿಗಳ ಆಗಮನ

ವಿಜಯಪುರ: ಯುದ್ಧ ಪೀಡಿತ ಉಕ್ರೇನ್​ನಿಂದ ಸುರಕ್ಷಿತವಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್​ನಿಂದ ವಾಪಸಾಗಿ ಇಂದು ಮನೆ ಸೇರಿದ್ದಾರೆ.

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ

ಮೆಡಿಕಲ್ ವಿದ್ಯಾರ್ಥಿಯಾಗಿರುವ ಸಿದ್ದು ಪೂಜಾರಿ ಉಕ್ರೇನ್​ನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದರು. ಮನೆಗೆ ವಾಪಸಾದ ಸಿದ್ದುಗೆ ಪೋಷಕರು ದೃಷ್ಟಿ ತೆಗೆದು ಮನೆಯೊಳಗೆ ಕರೆದುಕೊಂಡಿದ್ದಾರೆ. ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ ಮಾತನಾಡಿ, ಕಳೆದ ಫೆಬ್ರುವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ. ಅಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡೆ. ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಊಟ ವಸತಿಯ ವ್ಯವಸ್ಥೆ ಮಾಡಿದರು. ರೊಮೇನಿಯಾದಿಂದ ಬಂದು ಮಾರ್ಚ್​ 4ರಂದು ದೆಹಲಿ ತಲುಪಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ನಮ್ಮೂರಿಗೆ ಬಂದಿದ್ದೇನೆ. ಸುರಕ್ಷತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದರು.

ಸಿದ್ದು ಪೂಜಾರಿ ಮನೆಗೆ ಬಸವನಬಾಗೇವಾಡಿ ತಹಶೀಲ್ದಾರ್​ ವಿಜಯಕುಮಾರ್ ಕಡಕೋಳ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: ಉಕ್ರೇನ್​ನಿಂದ ಬೆಂಗಳೂರಿಗೆ 9 ವಿದ್ಯಾರ್ಥಿಗಳ ಆಗಮನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.