ETV Bharat / state

ವಿಜಯಪುರ ಗೋಲ​ಗುಂಬಜ್ ಮ್ಯಾರಥಾನ್‍ಗೆ ಎಂ.ಬಿ ಪಾಟೀಲ್​ ಚಾಲನೆ

author img

By

Published : Aug 4, 2019, 5:18 PM IST

ಗುಮ್ಮಟನಗರಿಯ ಗೋಲ​ಗುಂಬಜ್ ಮ್ಯಾರಥಾನ್‍ಗೆ ಮಾಜಿ ಸಚಿವ ಎಂ.ಬಿ ಪಾಟೀಲ್​ ಚಾಲನೆ ನೀಡಿದರು. 21 ಕಿ. ಮೀ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಈ ಮ್ಯಾರಥಾನ್‌ಗೆ​ ರಾಯಭಾರಿಯಾಗಿರುವ ಚಿತ್ರನಟ ರಾಕಿಂಗ್ ಸ್ಟಾರ್ ಯಶ್​ ಇಂದು ಗೈರಾಗಿದ್ದರು.

ಗೋಲ​ಗುಂಬಜ್ ಮ್ಯಾರಥಾನ್‍ಗೆ ಎಂ. ಬಿ. ಪಾಟೀಲ್​ ಚಾಲನೆ

ವಿಜಯಪುರ: ಇಲ್ಲಿನ ಐತಿಹಾಸಿಕ ಗೋಲ​ಗುಂಬಜ್ ಮ್ಯಾರಥಾನ್‍ಗೆ ಮಾಜಿ ಸಚಿವ ಎಂ. ಬಿ. ಪಾಟೀಲ್​ ಚಾಲನೆ ಕೊಟ್ಟರು.

ಮ್ಯಾರಥಾನ್‍ನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಬೆಳಗಿನ ಜಾವ 5 ಗಂಟೆಗೆ ಗೋಲಗುಂಬಜ್ ಆವರಣದಿಂದ 21 ಕಿ. ಮೀ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಮಾಜಿ ಸಚಿವ ಎಂ. ಬಿ. ಪಾಟೀಲ್​ ಚಾಲನೆ ನೀಡಿದರು. ಗೋಲಗುಂಬಜ್‍ನಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಎಸ್. ಪಿ. ಕಚೇರಿ ಮುಖಾಂತರ ಬಿಎಲ್​ಡಿಇ ಆವರಣಕ್ಕೆ ಸ್ಪರ್ಧಿಗಳು ಆಗಮಿಸಿದರು.

ಸ್ಪರ್ಧೆಯಲ್ಲಿ ಕೀನ್ಯಾ ದೇಶದ 6 ಪ್ರತಿನಿಧಿಗಳು, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಸೇರಿದಂತೆ ಭಾರತೀಯ ಸೇನೆ, ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಆಟಗಾರರಿಗೆ ಮಾರ್ಗದುದ್ದಕ್ಕೂ ಸ್ಥಳೀಯರು ಪಾನೀಯ ವಿತರಿಸಿ, ಪ್ರೋತ್ಸಾಹಿಸಿದರು. ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗೋಲ​ಗುಂಬಜ್ ಮ್ಯಾರಥಾನ್‍ಗೆ ಎಂ. ಬಿ. ಪಾಟೀಲ್​ ಚಾಲನೆ

ಯಶ್​ ಗೈರು

ವೃಕ್ಷ ಅಭಿಯಾನದಡಿ ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ಮ್ಯಾರಥಾನ್​ ರಾಯಭಾರಿಯಾಗಿರುವ ಚಿತ್ರನಟ ರಾಕಿಂಗ್ ಸ್ಟಾರ್ ಯಶ್​ ಹವಾಮಾನ ವೈಪರೀತ್ಯ ಹಿನ್ನೆಲೆ ವಿಜಯಪುರಕ್ಕೆ ಬರದೇ ಗೈರಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ವಿಜಯಪುರ: ಇಲ್ಲಿನ ಐತಿಹಾಸಿಕ ಗೋಲ​ಗುಂಬಜ್ ಮ್ಯಾರಥಾನ್‍ಗೆ ಮಾಜಿ ಸಚಿವ ಎಂ. ಬಿ. ಪಾಟೀಲ್​ ಚಾಲನೆ ಕೊಟ್ಟರು.

ಮ್ಯಾರಥಾನ್‍ನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಉತ್ಸಾಹಿಗಳು ಭಾಗವಹಿಸಿದ್ದರು. ಬೆಳಗಿನ ಜಾವ 5 ಗಂಟೆಗೆ ಗೋಲಗುಂಬಜ್ ಆವರಣದಿಂದ 21 ಕಿ. ಮೀ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆಗೆ ಮಾಜಿ ಸಚಿವ ಎಂ. ಬಿ. ಪಾಟೀಲ್​ ಚಾಲನೆ ನೀಡಿದರು. ಗೋಲಗುಂಬಜ್‍ನಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಎಸ್. ಪಿ. ಕಚೇರಿ ಮುಖಾಂತರ ಬಿಎಲ್​ಡಿಇ ಆವರಣಕ್ಕೆ ಸ್ಪರ್ಧಿಗಳು ಆಗಮಿಸಿದರು.

ಸ್ಪರ್ಧೆಯಲ್ಲಿ ಕೀನ್ಯಾ ದೇಶದ 6 ಪ್ರತಿನಿಧಿಗಳು, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಸೇರಿದಂತೆ ಭಾರತೀಯ ಸೇನೆ, ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಆಟಗಾರರಿಗೆ ಮಾರ್ಗದುದ್ದಕ್ಕೂ ಸ್ಥಳೀಯರು ಪಾನೀಯ ವಿತರಿಸಿ, ಪ್ರೋತ್ಸಾಹಿಸಿದರು. ಒಟ್ಟು ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗೋಲ​ಗುಂಬಜ್ ಮ್ಯಾರಥಾನ್‍ಗೆ ಎಂ. ಬಿ. ಪಾಟೀಲ್​ ಚಾಲನೆ

ಯಶ್​ ಗೈರು

ವೃಕ್ಷ ಅಭಿಯಾನದಡಿ ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ಮ್ಯಾರಥಾನ್​ ರಾಯಭಾರಿಯಾಗಿರುವ ಚಿತ್ರನಟ ರಾಕಿಂಗ್ ಸ್ಟಾರ್ ಯಶ್​ ಹವಾಮಾನ ವೈಪರೀತ್ಯ ಹಿನ್ನೆಲೆ ವಿಜಯಪುರಕ್ಕೆ ಬರದೇ ಗೈರಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.