ವಿಜಯಪುರ : ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಗರದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಟೆಕ್ವಾಂಡೋ ಸ್ಪರ್ಧೆ ಆರಂಭವಾಗಿದೆ. ಶಿವಮೊಗ್ಗ, ದಾವಣಗೇರಿ, ವಿಜಯಪುರ ಸೇರಿದಂತೆ ಪದವಿ ಪೂರ್ವ ಕಾಲೇಜುಗಳ 25ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಇಲ್ಲಿನ ಅಂಬೇಡ್ಕರ್ ಒಳಾಂಗಣದಲ್ಲಿ ಟೆಕ್ವಾಂಡೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಬ್ಬರು ಕ್ರೀಡಾಪಟುಗಳು ಒಬ್ಬರಿಗೊಬ್ಬರು ಕಿಕ್ ಹೊಡೆಯುವುದು ಈ ಕ್ರೀಡೆಯ ವಿಶೇಷವಾಗಿದೆ. ಕರಾಟೆ, ಕಬಡ್ಡಿಗಿಂತ ಅಪಾಯಕಾರಿಯಾದ ಈ ಕ್ರೀಡೆಯಲ್ಲಿ ಕ್ರೀಡಾಪಟುಗಳು ಗಾಯಗೊಂಡರು.
ರೆಫ್ರಿ ವಿವಾದ :ಸ್ಪರ್ಧೆಯ ಮೊದಲ ದಿನ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ರಾಷ್ಟ್ರೀಯ ರೆಫ್ರಿ ಬದಲಿಗೆ ರಾಜ್ಯಮಟ್ಟದ ರೆಫ್ರಿಗಳು ಭಾಗವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು.
ಇದನ್ನೂ ಓದಿ : ಬಣಜಿಗ ಸಮಾಜಕ್ಕೆ ಅವಹೇಳನ ಆರೋಪ: ವಿಷಾದ ವ್ಯಕ್ತ ಪಡಿಸಿದ ವಿಜಯಾನಂದ ಕಾಶಪ್ಪನವರ್