ETV Bharat / state

ರಾಜ್ಯಮಟ್ಟದ ಸೈಕ್ಲಿಂಗ್​ ಸ್ಪರ್ಧೆ... 3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ!

ಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಹಳ್ಳಿ ಹುಡುಗಿಯೊಬ್ಬಳು ಮೂರು ಚಿನ್ನ ಗೆದ್ದು ಅಪರೂಪದ ಸಾಧನೆ ಮಾಡಿದ್ದಾಳೆ. ಮುಂದಿನ ತಿಂಗಳು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.

author img

By

Published : Sep 15, 2019, 9:01 PM IST

3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ

ವಿಜಯಪುರ: ಅಪ್ಪಟ ಹಳ್ಳಿ ಪ್ರತಿಭೆಯೊಬ್ಬಳು ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸಿ, ಸೌಮ್ಯ ಅಂತಾಪುರ ಅಪರೂಪದ ಸಾಧನೆ ಮಾಡಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದವರಾದ ಸೌಮ್ಯ, ವಿಜಯಪುರದಲ್ಲಿ ನಡೆದ ಮೌಂಟನ್ ಸೈಕಲ್ ಚಾಂಪಿಯನ್​ಷಿಪ್​ನಲ್ಲಿ ಲ್ಯಾಪ್ 1ರ ವೈಯಕ್ತಿಕ ಟೈಮ್ ಟ್ರಾಯಲ್​ನಲ್ಲಿ ಕೇವಲ 11.14 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನ ಬಾಚಿದ್ದಾಳೆ. ಇನ್ನು 18 ವರ್ಷದ ಒಳಗಿನ ಲ್ಯಾಪ್​ 1ರ ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ 11.09 ಸೆಕೆಂಡ್​ನಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಕ್ಕಿದ್ದಅಳೆ. ಇದರ ಜತೆ ಲ್ಯಾಪ್ 2ರ ವೈಯಕ್ತಿಕ ಟೈಮ್ ಟ್ರಯಲ್​ನಲ್ಲಿ 24.59 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಬಾಚಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ

ಸಾಧನೆಯ ಹಿಂದೆ ತಂದೆ...

ಸೌಮ್ಯ ಅಂತಾಪುರ ಸಾಧನೆ ಹಿಂದೆ ಅವರಿಗೆ ಬೆನ್ನೆಲುಬಾಗಿ ತಂದೆ ಚಿದಾನಂದ ಅಂತಾಪುರ ನಿಂತಿದ್ದಾರೆ. ಕೇವಲ 6 ವರ್ಷಗಳ ಹಿಂದೆಯಷ್ಟೆ ಸೈಕ್ಲಿಸ್ಟ್​​​​​ ಆಗಬೇಕೆಂದು ಹಟ ತೊಟ್ಟು, ಅಭ್ಯಾಸ ಆರಂಭಿಸಿದ ಸೌಮ್ಯಗೆ ಕುಟುಂಬ ವರ್ಗ ಮಾತ್ರವಲ್ಲದೇ ಕೋಚ್​ಗಳು ಮಾಡಿದ ಪ್ರೋತ್ಸಾಹವೇ ಇಂದಿನ ಸಾಧನೆಗೆ ಕಾರಣವಂತೆ.

ಕೃಷಿಕನಾಗಿರೋ ತಂದೆ ಚಿದಾನಂದ, ಮಗಳ ಸೈಕಲ್ ಪ್ರೀತಿ ನೋಡಿ ಸಾಲ ಮಾಡಿ ರೋಡ್ ಟ್ರ್ಯಾಕಿಂಗ್ ಸೈಕಲ್ ಕೊಡಿಸಿದ್ದರು. ಅದರ ಮೇಲೆ ಸತತ ಪ್ರಾಕ್ಟೀಸ್​ ಮಾಡಿ ಇಂದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾಳೆ ಸೌಮ್ಯ. ಆದರೆ ಬಡತನದ ಹಿನ್ನೆಲೆ ಹೊಂದಿರುವ ಸೌಮ್ಯಗೆ ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಲು ಆಧುನಿಕ ಸೈಕಲ್ ಇಲ್ಲದ ಕಾರಣ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆ ಇದ್ದಾಗ ಸೈಕ್ಲಿಂಗ್​​ ಅಸೋಸಿಯೇಷನ್ ಅವರು ಒಂದು ವಾರ ಮುಂಚೆ ನೀಡುವ ಸೈಕಲ್ಅನ್ನೇ ಅವಲಂಬಿಸಬೇಕಾಗಿದೆ.

ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.

ವಿಜಯಪುರ: ಅಪ್ಪಟ ಹಳ್ಳಿ ಪ್ರತಿಭೆಯೊಬ್ಬಳು ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸಿ, ಸೌಮ್ಯ ಅಂತಾಪುರ ಅಪರೂಪದ ಸಾಧನೆ ಮಾಡಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದವರಾದ ಸೌಮ್ಯ, ವಿಜಯಪುರದಲ್ಲಿ ನಡೆದ ಮೌಂಟನ್ ಸೈಕಲ್ ಚಾಂಪಿಯನ್​ಷಿಪ್​ನಲ್ಲಿ ಲ್ಯಾಪ್ 1ರ ವೈಯಕ್ತಿಕ ಟೈಮ್ ಟ್ರಾಯಲ್​ನಲ್ಲಿ ಕೇವಲ 11.14 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಚಿನ್ನ ಬಾಚಿದ್ದಾಳೆ. ಇನ್ನು 18 ವರ್ಷದ ಒಳಗಿನ ಲ್ಯಾಪ್​ 1ರ ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ 11.09 ಸೆಕೆಂಡ್​ನಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಕ್ಕಿದ್ದಅಳೆ. ಇದರ ಜತೆ ಲ್ಯಾಪ್ 2ರ ವೈಯಕ್ತಿಕ ಟೈಮ್ ಟ್ರಯಲ್​ನಲ್ಲಿ 24.59 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಬಾಚಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.

3 ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಗ್ರಾಮೀಣ ಪ್ರತಿಭೆ

ಸಾಧನೆಯ ಹಿಂದೆ ತಂದೆ...

ಸೌಮ್ಯ ಅಂತಾಪುರ ಸಾಧನೆ ಹಿಂದೆ ಅವರಿಗೆ ಬೆನ್ನೆಲುಬಾಗಿ ತಂದೆ ಚಿದಾನಂದ ಅಂತಾಪುರ ನಿಂತಿದ್ದಾರೆ. ಕೇವಲ 6 ವರ್ಷಗಳ ಹಿಂದೆಯಷ್ಟೆ ಸೈಕ್ಲಿಸ್ಟ್​​​​​ ಆಗಬೇಕೆಂದು ಹಟ ತೊಟ್ಟು, ಅಭ್ಯಾಸ ಆರಂಭಿಸಿದ ಸೌಮ್ಯಗೆ ಕುಟುಂಬ ವರ್ಗ ಮಾತ್ರವಲ್ಲದೇ ಕೋಚ್​ಗಳು ಮಾಡಿದ ಪ್ರೋತ್ಸಾಹವೇ ಇಂದಿನ ಸಾಧನೆಗೆ ಕಾರಣವಂತೆ.

ಕೃಷಿಕನಾಗಿರೋ ತಂದೆ ಚಿದಾನಂದ, ಮಗಳ ಸೈಕಲ್ ಪ್ರೀತಿ ನೋಡಿ ಸಾಲ ಮಾಡಿ ರೋಡ್ ಟ್ರ್ಯಾಕಿಂಗ್ ಸೈಕಲ್ ಕೊಡಿಸಿದ್ದರು. ಅದರ ಮೇಲೆ ಸತತ ಪ್ರಾಕ್ಟೀಸ್​ ಮಾಡಿ ಇಂದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾಳೆ ಸೌಮ್ಯ. ಆದರೆ ಬಡತನದ ಹಿನ್ನೆಲೆ ಹೊಂದಿರುವ ಸೌಮ್ಯಗೆ ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆಯಲ್ಲಿ ಭಾಗವಹಿಸಲು ಆಧುನಿಕ ಸೈಕಲ್ ಇಲ್ಲದ ಕಾರಣ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮೌಂಟನ್ ಸೈಕ್ಲಿಂಗ್​​ ಸ್ಪರ್ಧೆ ಇದ್ದಾಗ ಸೈಕ್ಲಿಂಗ್​​ ಅಸೋಸಿಯೇಷನ್ ಅವರು ಒಂದು ವಾರ ಮುಂಚೆ ನೀಡುವ ಸೈಕಲ್ಅನ್ನೇ ಅವಲಂಬಿಸಬೇಕಾಗಿದೆ.

ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.

Intro:ವಿಜಯಪುರ


Body:ವಿಜಯಪುರ: ಸೈಕಲಿಸ್ಟ್ ತವರು ಜಿಲ್ಲೆಯ ಪ್ರತಿಭೆಯೊಬ್ಬಳು ಸೈಕಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂರು ವಿಭಾಗದಲ್ಲಿ ಮೂರು ಚಿನ್ನ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.
ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನಷಿಪ್ ನಲ್ಲಿ ಮೂರು ವಿಭಾಗದಲ್ಲಿ ಮೂರು ಚಿನ್ನ ಗಳಿಸಿ ಅಪರೂಪದ ಸಾಧನೆ ಮಾಡಿದ್ದಾಳೆ.
ಸೌಮ್ಯ ಅಂತಾಪುರ ಈ ಸಾಧನೆ ಮಾಡಿದ ಮಹಿಳಾ ಸೈಕಲಿಸ್ಟ್. ಇವಳು ಮೂಲತಃ ಪಕ್ಕದ ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದವಳು.
ವಿಜಯಪುರದಲ್ಲಿ ನಡೆದ ಮೌಂಟನ್ ಸೈಕಲ್ ಚಾಂಪಿಯನ್ ಷಿಪ್ ನಲ್ಲಿ ಲ್ಯಾಪ್ ಒಂದು ವೈಯಕ್ತಿಕ ಟೈಮ್ ಟ್ರಾಯಲ್ ನಲ್ಲಿ ಕೇವಲ 11.14.16 ಸೆಕೆಂಡ್ ಗುರಿ ತಲುಪಿ ಚಿನ್ನ ಬಾಚಿದ್ದಾಳೆ, 18 ವರ್ಷದ ಒಳಗಿನ ಲ್ಯಾಪ ಒಂದು ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ 11.09.64 ಸೆಕೆಂಡ್ ನಲ್ಲಿ ಗುರಿ ತಲುಪಿ ಚಿನ್ನ ಬಾಚಿದ್ದಾಳೆ. ಇದರ ಜತೆ ಲ್ಯಾಪ್ ಎರಡ ವೈಯಕ್ತಿಕ ಟೈಮ್ ಟ್ರಯಲ್ ನಲ್ಲಿ 24.59.12 ಸೆಕೆಂಡ್ ನಲ್ಲಿ ಗುರಿ ತಲುಪುವ ಮೂಲಕ ಇಲ್ಲಿಯೋ ಚಿನ್ನ ಬಾಚಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.
ಸಾಧನೆಯ ಬೆನ್ನಲುಬು: ಸೌಮ್ಯ ಅಂತಾಪುರ ಸಾಧನೆ ಮುಖ್ಯ ಬೆನ್ನಲುಬು ಅವರ ತಂದೆ ಚಿದಾನಂದ ಅಂತಾಪುರ,
ಕೇವಲ 6 ವರ್ಷಗಳ ಹಿಂದೆಯಷ್ಟೆ ಸೈಕಲಿಸ್ಡ್ ಆಗಬೇಕೆಂದು ಆಟ ಆರಂಭಿಸಿದ್ದ ಸೌಮ್ಯಗೆ ಕುಟುಂಬ ವರ್ಗ ಅಲ್ಲದೇ ಕೋಚಗಳು ಮಾಡಿದ ಪ್ರೋತ್ಸಾಹವೇ ಮುಖ್ಯ ಕಾರಣ.
ತಂದೆ ಚಿದಾನಂದ ಕೃಷಿಕ ಮಗಳ ಸೈಕಲ್ ಪ್ರೀತಿ ನೋಡಿ ಸಾಲ ಮಾಡಿ ರೋಡ್ ಟ್ರ್ಯಾಕಿಂಗ್ ಸೈಕಲ್ ಕೊಡಿಸಿದ್ದರು. ಅದರ ಮೇಲೆ ಸತತ ಸಾಧನೆ ಮಾಡಿ ಇಂದು ಮೂರು ಚಿನ್ನಕ್ಕೆ ಮುತ್ತಿಕ್ಕಿದ್ದಾಳೆ. ಆದರೆ ಬಡತನ ಹಿನ್ನೆಲೆ ಹೊಂದಿರುವ ಸೌಮ್ಯಗೆ ಮೌಂಟನ್ ಸೈಕಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಧುನಿಕ ಸೈಕಲ್ ಇಲ್ಲದ ಕಾರಣ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ, ಮೌಂಟನ್ ಸೈಕಲಿಂಗ್ ಸ್ಪರ್ಧೆ ಇದ್ದಾಗ ಸೈಕಲಿಂಗ್ ಅಸೋಸಿಯೇಷನ್ ಅವರು ಒಂದು ವಾರ ಮುಂಚೆ ನೀಡುವ ಸೈಕಲ್ ಅವಲಂಬಿಸಬೇಕಾಗಿದೆ. ಮುಂದಿನ ತಿಂಗಳು ಪುನಾದಲ್ಲಿ ನಡೆಯಲಿರುವ ಮೌಂಟನ್ ರಾಷ್ಠ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದಾಳೆ ಸರ್ಕಾರ ವಾಗಲಿ, ಸಂಘ ಸಂಸ್ಥೆಗಳಾಗಲಿ ಸಹಾಯ ಮಾಡುವ ನೀರಿಕ್ಷೆಯಲ್ಲಿದ್ದಾಳೆ.
ಬೈಟ್ ಸೌಮ್ಯ ಅಂತಾಪುರ ಸೈಕಲಿಸ್ಡ್


Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.