ಮುದ್ದೇಬಿಹಾಳ : ಮಾರ್ಚ್ 30 ರ ಒಳಗೆ ಬರಬೇಕಾಗಿದ್ದ ಶೇ.25% ಹಣ ಇನ್ನೂ ಬಂದಿಲ್ಲ, ಇದರಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೀಡಾಗಿವೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಮಖ್ಯಮಂತ್ರಿಗಳಿಗೆ ಜಿಲ್ಲಾ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
![wrote a letter to CM](https://etvbharatimages.akamaized.net/etvbharat/prod-images/kn-mbl-rte-02-03-kac10030_02052020144340_0205f_1588410820_882.jpg)
ತಾಲೂಕಿನಲ್ಲಿ ಖಾಸಗಿ ಶಾಲೆಗಳಿಗೆ ಆರ್ಟಿಇ ಬಾಕಿ ಹಣ ಬಾರದಿರುವುದರಿಂದ ತೊಂದರೆಯಾಗಿದೆ. ವಿಶೇಷವಾಗಿ ಎಲ್ಲ ಶಿಕ್ಷಕರಿಗೆ ವೇತನ ನೀಡಲೇಬೇಕು ಎಂದು ಸಿಎಂ ಆದೇಶಿಸಿರುವುದು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ವೇತನ ಕೊಡಬೇಕಾದರೆ ಹೆಂಡತಿಯ ಮಾಂಗಲ್ಯ ಮಾರುವ ದುಃಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಖಾಸಗಿ ಶಾಲೆಗಳಿಗೆ ಕೊಡಬೇಕಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಿದರೆ, ಶಿಕ್ಷಕರ ಬಾಕಿ ವೇತನ ಪಾವತಿಸಲು ಸಾಧ್ಯವಾಗಲಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ.