ETV Bharat / state

ಮೂಕ ಪ್ರಾಣಿಗಳ ಹಸಿವು ನೀಗಿಸಲು ಮುಂದಾದ ಜೈನ ಸಮಾಜದ ಯುವಕರು - ಪ್ರಾಣಿಗಳಿಗೆ ಆಹಾರ ಹಂಚಿಕೆ ನ್ಯೂಸ್​

ಕೋವಿಡ್​-19 ಹಿನ್ನೆಲೆ ಲಾಕ್​ಡೌನ್​ ಜಾರಿಗೊಳಿಸಿದ್ದು, ಆಹಾರಕ್ಕಾಗಿ ಜನರೂ ಸೇರಿದಂತೆ ಪ್ರಾಣಿ-ಪಕ್ಷಿಗಳೂ ಪರಿತಪಿಸುವಂತಾಗಿದೆ. ವಿಜಯಪುರ ಜಿಲ್ಲೆಯ ಜೈನ ಸಮಾಜದ ಯುವಕರ ಗುಂಪೊಂದು ಹಸಿವಿಂದ ಬಳಲುತ್ತಿರುವ ಮೂಕ ಪ್ರಾಣಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

ಪ್ರಾಣಿಗಳಿಗೆ ಆಹಾರ ಒದಗಿಸುತ್ತಿರುವ ಯುವಕರು
ಪ್ರಾಣಿಗಳಿಗೆ ಆಹಾರ ಒದಗಿಸುತ್ತಿರುವ ಯುವಕರು
author img

By

Published : Apr 21, 2020, 3:47 PM IST

ವಿಜಯಪುರ: ಲಾಕ್​ಡೌನ್​ ಹಿನ್ನೆಲೆ ಕೆಲ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿದೆ. ಇನ್ನು ಮೂಕ ಪ್ರಾಣಿಗಳ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಅವಕ್ಕೆ ಆಹಾರ ನೀಡುವ ಕೆಲಸವನ್ನು ಜಿಲ್ಲೆಯ ಜೈನ ಸಮಾಜದ ಯುವಕರು ಮಾಡುತ್ತಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾಣಿಗಳಿಗೆ ಆಹಾರ ಒದಗಿಸುತ್ತಿರುವ ಯುವಕರು

ಜಿಲ್ಲೆಯ ಮಠಪತಿ ಗಲ್ಲಿಯಲ್ಲಿರುವ ಜೈನ ಸಮುದಾಯದ ಸುಮಾರು 24 ಯುವಕರ ತಂಡ ಹಣ ಸಂಗ್ರಹಿಸಿ ಬೀದಿ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಹಸು, ನಾಯಿಗಳು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳಿಗೆ ಕಲ್ಲಂಗಡಿ, ಹಸಿ ಮೇವು, ಚಪಾತಿ, ಸೌತೆಕಾಯಿ, ಗೆಜ್ಜರಿ ಹಾಗೂ ಇತರೆ ತರಕಾರಿಗಳನ್ನು ನೀಡುತ್ತಿದ್ದಾರೆ. ಹಣ್ಣು, ತರಕಾರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹಂಚುವ ಕೆಲಸ ಮಾಡುತ್ತಿದ್ದಾರೆ. 40-50 ಜನರನ್ನು ಒಳಗೊಂಡ ಗೋಸೇವಾ ಸಮಿತಿ ರಚಿಸಿಕೊಂಡು ನಿತ್ಯವೂ ನಗರದ ವಿವಿಧ ಗಲ್ಲಿಗಳಿಗೆ ತೆರಳಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

ಪ್ರಾಣಿಗಳಲ್ಲದೇ ಪಕ್ಷಿಗಳಿಗೂ ಸಹ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಕೆಲ ಗೋಶಾಲೆಗಳು ಆಹಾರ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಅವರ ಮನವಿಗೂ ಜೈನ ಸಮುದಾಯದ ಯುವಕರು ಸ್ಪಂದಿಸಲು ಮುಂದಾಗಿದ್ದಾರೆ.

ವಿಜಯಪುರ: ಲಾಕ್​ಡೌನ್​ ಹಿನ್ನೆಲೆ ಕೆಲ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿದೆ. ಇನ್ನು ಮೂಕ ಪ್ರಾಣಿಗಳ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಅವಕ್ಕೆ ಆಹಾರ ನೀಡುವ ಕೆಲಸವನ್ನು ಜಿಲ್ಲೆಯ ಜೈನ ಸಮಾಜದ ಯುವಕರು ಮಾಡುತ್ತಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾಣಿಗಳಿಗೆ ಆಹಾರ ಒದಗಿಸುತ್ತಿರುವ ಯುವಕರು

ಜಿಲ್ಲೆಯ ಮಠಪತಿ ಗಲ್ಲಿಯಲ್ಲಿರುವ ಜೈನ ಸಮುದಾಯದ ಸುಮಾರು 24 ಯುವಕರ ತಂಡ ಹಣ ಸಂಗ್ರಹಿಸಿ ಬೀದಿ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಹಸು, ನಾಯಿಗಳು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳಿಗೆ ಕಲ್ಲಂಗಡಿ, ಹಸಿ ಮೇವು, ಚಪಾತಿ, ಸೌತೆಕಾಯಿ, ಗೆಜ್ಜರಿ ಹಾಗೂ ಇತರೆ ತರಕಾರಿಗಳನ್ನು ನೀಡುತ್ತಿದ್ದಾರೆ. ಹಣ್ಣು, ತರಕಾರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹಂಚುವ ಕೆಲಸ ಮಾಡುತ್ತಿದ್ದಾರೆ. 40-50 ಜನರನ್ನು ಒಳಗೊಂಡ ಗೋಸೇವಾ ಸಮಿತಿ ರಚಿಸಿಕೊಂಡು ನಿತ್ಯವೂ ನಗರದ ವಿವಿಧ ಗಲ್ಲಿಗಳಿಗೆ ತೆರಳಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

ಪ್ರಾಣಿಗಳಲ್ಲದೇ ಪಕ್ಷಿಗಳಿಗೂ ಸಹ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಕೆಲ ಗೋಶಾಲೆಗಳು ಆಹಾರ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಅವರ ಮನವಿಗೂ ಜೈನ ಸಮುದಾಯದ ಯುವಕರು ಸ್ಪಂದಿಸಲು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.