ETV Bharat / state

ವಿಜಯಪುರ: ಭಾರತೀಯ ಮೀಸಲು ಪಡೆ ಪೊಲೀಸ್‌ ಹೃದಯಾಘಾತದಿಂದ ಸಾವು

author img

By

Published : Mar 27, 2022, 12:18 PM IST

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ಐಆರ್​ಬಿ ಪೊಲೀಸ್ ರಾಜಕುಮಾರ ಗೋಟ್ಯಾಳ್ ನಿನ್ನೆ ಜಾರ್ಖಂಡ್​​ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

IRB police died from heart attack
ಐಆರ್​ಬಿ ಪೊಲೀಸ್ ಸಾವು

ವಿಜಯಪುರ: ಇಂಡಿಯನ್ ರಿಸರ್ವ್​ ಬೆಟಾಲಿಯನ್​ (ಐಆರ್​ಬಿ) ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ (42) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿಯಾಗಿರುವ ಇವರು, ಜಾರ್ಖಂಡ್​​ನಲ್ಲಿ ಹೃದಯಾಘಾತಕ್ಕೀಡಾಗಿದ್ದರು.

ಕಳೆದ ನಾಲ್ಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್​ಗೆ ತೆರಳಿದ್ದ ರಾಜಕುಮಾರ ನಿನ್ನೆ ತರಬೇತಿ ವೇಳೆ ವೇಳೆ ಕುಸಿದು ಬಿದ್ದಿದ್ದಾರೆ. ಇಂದು ಅವರ ಪಾರ್ಥಿವ ಶರೀರ ಬರಡೋಲ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಐಆರ್​ಬಿ ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ ಪಾರ್ಥಿವ ಶರೀರದ ಮೆರವಣಿಗೆ

ಇದನ್ನೂ ಓದಿ: ಎರಡು ವರ್ಷದ ನಂತರ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನಾರಂಭ

ವಿಜಯಪುರ: ಇಂಡಿಯನ್ ರಿಸರ್ವ್​ ಬೆಟಾಲಿಯನ್​ (ಐಆರ್​ಬಿ) ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ (42) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ನಿವಾಸಿಯಾಗಿರುವ ಇವರು, ಜಾರ್ಖಂಡ್​​ನಲ್ಲಿ ಹೃದಯಾಘಾತಕ್ಕೀಡಾಗಿದ್ದರು.

ಕಳೆದ ನಾಲ್ಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್​ಗೆ ತೆರಳಿದ್ದ ರಾಜಕುಮಾರ ನಿನ್ನೆ ತರಬೇತಿ ವೇಳೆ ವೇಳೆ ಕುಸಿದು ಬಿದ್ದಿದ್ದಾರೆ. ಇಂದು ಅವರ ಪಾರ್ಥಿವ ಶರೀರ ಬರಡೋಲ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಐಆರ್​ಬಿ ಪೊಲೀಸ್ ರಾಜಕುಮಾರ ಲಕ್ಷ್ಮಣ ಗೋಟ್ಯಾಳ ಪಾರ್ಥಿವ ಶರೀರದ ಮೆರವಣಿಗೆ

ಇದನ್ನೂ ಓದಿ: ಎರಡು ವರ್ಷದ ನಂತರ ಇಂದಿನಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.