ETV Bharat / state

ಬಾನೆತ್ತರಕ್ಕೆ ಹಾರಿ ಬೆಳೆಗಳಿಗೆ ಔಷಧ ಸಿಂಪಡಿಸುತ್ತೆ ಈ ಡ್ರೋನ್

ವಿಜಯಪುರದ ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಳೆಗಳಿಗೆ ಔಷಧ ಸಿಂಪಡಿಸುವ ಹೊಸ ವಿಧಾನವೊಂದನ್ನು ತೋರಿಸಿಕೊಡಲಾಗಿದ್ದು, ಇದನ್ನು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

author img

By

Published : Jan 6, 2020, 11:30 AM IST

Drone machine
ವಿಜಯಪುರ ಕೃಷಿ ಮೇಳದಲ್ಲಿ ಡ್ರೋನ್ ಪರಿಚಯ

ವಿಜಯಪುರ: ಜಿಲ್ಲೆಯ ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಳೆಗಳಿಗೆ ಔಷಧ ಸಿಂಪಡಿಸುವ ಹೊಸ ವಿಧಾನವೊಂದನ್ನು ತೋರಿಸಿಕೊಡಲಾಗಿದ್ದು, ಇದನ್ನು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ವಿಜಯಪುರ ಕೃಷಿ ಮೇಳದಲ್ಲಿ ಡ್ರೋನ್ ಪರಿಚಯ

ಹೌದು, ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ರಾಯಚೂರಿನ ಕೃಷಿ ವಿವಿ ರೈತರಿಗೆ ಔಷಧ ಸಿಂಪಡಣೆಗೆ ಸಹಾಯಕವಾಗುವಂತಹ ಡ್ರೋನ್ ಅನ್ನು ‌ಸಂಶೋಧನೆ ಮಾಡಿದೆ. ಮೇಳದಲ್ಲಿರುವ‌ ರೈತರಿಗೆ ಇದನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ‌ ಡ್ರೋನ್​ ಮೂಲಕ ಔಷಧವನ್ನ ಬೆಳೆಗೆ ಸಿಂಪಡಿಸಿ ತೋರಿಸಲಾಯಿತು. ಕಳೆದ ಎರಡು ವರ್ಷಗಳಿಂದ‌ ಬೆಳೆಗೆ ಔಷಧ ಸಿಂಪಡಿಸುವ ಡ್ರೋನ್​ ಅಭಿವೃದ್ಧಿ ರಾಯಚೂರಿನ ಕೃಷಿ ವಿವಿಯ ತಾಂತ್ರಿಕ ವಿಭಾಗದಲ್ಲಿ ನಡೆದಿದೆ.‌‌ ಇನ್ನು‌ ಬ್ಯಾಟರಿ ಚಾಲಿತ ಈ ಡ್ರೋನ್ ಗೆ 20 ಲೀಟರ್‌ ಔಷಧವನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದು, ಜೊತೆಗೆ ಜಿಪಿಎಸ್ ಸಹಾಯದಿಂದ ಹೊಲಗಳಿಗೆ ಔಷಧ ಸಿಂಪಡಣೆ ಮಾಡುತ್ತದೆ.

ಇನ್ನು ಡ್ರೋನ್ ಚಾಲನೆ ಮಾಡಲು ಒಂದು ಲ್ಯಾಪ್​ಟಾಪ್ ಸಹಾಯ ಬೇಕಾಗುತ್ತದೆ. ಇದರ ಬೆಲೆ ಬರೋಬ್ಬರಿ 15 ರಿಂದ 18 ಲಕ್ಷ ರೂ. ಇದ್ದು, ಸರ್ಕಾರ ಇದನ್ನ ಇನ್ನೂ ಅಭಿವೃದ್ಧಿ ಮಾಡಿ, ಕನಿಷ್ಠ ಶೇ 75 ರಷ್ಟು ಸಬ್ಸಿಡಿ ನೀಡಬೇಕು ಎಂದು ರೈತರು ಆಗ್ರಹಿಸಿದ್ರು. ಈ ಡ್ರೋನ್ ಸಹಾಯದಿಂದ ರೈತರು ಅತಿ ವೇಗವಾಗಿ ಕೆಲಸ ಮಾಡಬಹುದು.

ವಿಜಯಪುರ: ಜಿಲ್ಲೆಯ ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ಬೆಳೆಗಳಿಗೆ ಔಷಧ ಸಿಂಪಡಿಸುವ ಹೊಸ ವಿಧಾನವೊಂದನ್ನು ತೋರಿಸಿಕೊಡಲಾಗಿದ್ದು, ಇದನ್ನು ನೋಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ವಿಜಯಪುರ ಕೃಷಿ ಮೇಳದಲ್ಲಿ ಡ್ರೋನ್ ಪರಿಚಯ

ಹೌದು, ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ರಾಯಚೂರಿನ ಕೃಷಿ ವಿವಿ ರೈತರಿಗೆ ಔಷಧ ಸಿಂಪಡಣೆಗೆ ಸಹಾಯಕವಾಗುವಂತಹ ಡ್ರೋನ್ ಅನ್ನು ‌ಸಂಶೋಧನೆ ಮಾಡಿದೆ. ಮೇಳದಲ್ಲಿರುವ‌ ರೈತರಿಗೆ ಇದನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ‌ ಡ್ರೋನ್​ ಮೂಲಕ ಔಷಧವನ್ನ ಬೆಳೆಗೆ ಸಿಂಪಡಿಸಿ ತೋರಿಸಲಾಯಿತು. ಕಳೆದ ಎರಡು ವರ್ಷಗಳಿಂದ‌ ಬೆಳೆಗೆ ಔಷಧ ಸಿಂಪಡಿಸುವ ಡ್ರೋನ್​ ಅಭಿವೃದ್ಧಿ ರಾಯಚೂರಿನ ಕೃಷಿ ವಿವಿಯ ತಾಂತ್ರಿಕ ವಿಭಾಗದಲ್ಲಿ ನಡೆದಿದೆ.‌‌ ಇನ್ನು‌ ಬ್ಯಾಟರಿ ಚಾಲಿತ ಈ ಡ್ರೋನ್ ಗೆ 20 ಲೀಟರ್‌ ಔಷಧವನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದ್ದು, ಜೊತೆಗೆ ಜಿಪಿಎಸ್ ಸಹಾಯದಿಂದ ಹೊಲಗಳಿಗೆ ಔಷಧ ಸಿಂಪಡಣೆ ಮಾಡುತ್ತದೆ.

ಇನ್ನು ಡ್ರೋನ್ ಚಾಲನೆ ಮಾಡಲು ಒಂದು ಲ್ಯಾಪ್​ಟಾಪ್ ಸಹಾಯ ಬೇಕಾಗುತ್ತದೆ. ಇದರ ಬೆಲೆ ಬರೋಬ್ಬರಿ 15 ರಿಂದ 18 ಲಕ್ಷ ರೂ. ಇದ್ದು, ಸರ್ಕಾರ ಇದನ್ನ ಇನ್ನೂ ಅಭಿವೃದ್ಧಿ ಮಾಡಿ, ಕನಿಷ್ಠ ಶೇ 75 ರಷ್ಟು ಸಬ್ಸಿಡಿ ನೀಡಬೇಕು ಎಂದು ರೈತರು ಆಗ್ರಹಿಸಿದ್ರು. ಈ ಡ್ರೋನ್ ಸಹಾಯದಿಂದ ರೈತರು ಅತಿ ವೇಗವಾಗಿ ಕೆಲಸ ಮಾಡಬಹುದು.

Intro:Web lead : ವಿಜಯಪುರ ನಡೆಯುತ್ತಿವ ಕೃಷಿ ಮೇಳದಲ್ಲಿ ರೈತರಿಗೆ ಆಕರ್ಷಣೆ ಆಗಿದ್ದು ಬೆಳೆಗಳಿಗೆ ಔಷಧ ಸಿಂಪಡಿಸುವ ಡ್ರೋಣ, ಯಾವಾಗ ಕೃಷಿ ಮೇಳದಲ್ಲಿ‌ ಡ್ರೋಣ ಬಂತು ಆಗಿನಿಂದಲೂ ಉತ್ತರ ಕರ್ನಾಟಕ ಭಾಗದ ರೈತರು ಡ್ರೋನ್ ನೋಡಿದ ಮೇಲೆ ರೈತರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಅಷ್ಟಕ್ಕೂ ಡ್ರೋನ್ ನೋಡಿರು ಹಾಗೇ‌ ಯಾಕೆ ಮಾಡಿದ್ರು ಅಂತೀರಾ ಹಾಗಾದ್ರೆ ಈ ಸ್ಟೋರಿ‌ ನೋಡಿ...

ವಿ.ಪ್ಲೂ...


Body:ವೈ.ಓ01: ಬಾನ್ ಎತ್ತರೆ ಹಾರಾಟ ಮಾಡಿ ಕಡಲೆ ಬೆಳೆ ಔಷಧ ಸಿಂಪಡಣೆ ಮಾಡುತ್ತಿರೋ ಡ್ರೋನ್,‌‌ಹಾರಟವನ್ನು‌ ನೋಡ ಮುಗಿಬಿದ್ದಿರುವ ರೈತರು ಹೌದು ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು‌ ಹಿಟ್ನಳ್ಳಿಯಲ್ಲಿ‌ ನಡೆಯುತ್ತಿರುವ ಕೃಷಿ ಮೇಳದಲ್ಲಿ ರಾಯಚೂರಿನ ಕೃಷಿ ವಿವಿಯಲ್ಲಿ ರೈತರಿಗೆ ಔಷಧ ಸಿಂಪಡಣೆಗೆ ಸಹಾಯಕವಾಗುವಂತೆ ಡ್ರೋನ್ ‌ಸಂಶೋಷಣೆ ಮಾಡಲಾಗಿದೆ. ಇನ್ನೂ ಮೇಳದಲ್ಲಿ‌ ರೈತರಿಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ‌ ಡ್ರೋಣ ಮೂಲಕ ಔಷಧೀಯ ಬೆಳೆಗೆ ಸಿಂಪಡಿಸಿ ತೋರಿಸಲಾಯಿತು. ಕಳದೆ ಎರಡು ವರ್ಷಗಳಿಂದ‌ ಬೆಳೆಗೆ ಔಷಧ ಸಿಂಪಡಿಸುವ ಡ್ರೋಣ ಅಭಿವೃದ್ಧಿಗೆ ರಾಯಚೂರಿನ ಕೃಷಿ ವಿವಿಯ ತಾಂತ್ರಿಕ ವಿಭಾಗದಲ್ಲಿ ನಡೆದಿದೆ.‌‌ಇನ್ನು‌ ಬ್ಯಾಟರಿ ಚಾಲಿತ ಈ ಡ್ರೋನ್ ಗೆ 20 ಲೀಟರ್‌ ಔಷಧ ಬಾನೇತ್ತಕ್ಕೆ ಒಯಬಲ್ಲ ಸಾಮರ್ಥ್ಯ ಹೊಂದಿದ್ದು ಜೊತೆಗೆ ಜಿಪಿಎಸ್ ಸಹಾಯದಿಂದ ಹೊಲಗಳಿಗೆ ಔಷಧ ಸಿಂಪಡಣೆ ಮಾಡುತ್ತದೆ.

ಬೈಟ್01: ಮುರಳಿ ಎಂ ( ಸಹಾಯಕ ಪ್ರಾಧ್ಯಾಪಕ ಕೃಷಿ ವಿವಿ ರಾಯಚೂರು)

ವೈ.ಓ02: ಡ್ರೋನ್ ಚಾಲನೆ ಮಾಡಲು ಒಂದು ಲ್ಯಾಪ್ ಟಾಪ್ ಸಹಾಯಬೇಕಾಗುತ್ತದೆ.ಅಲ್ಲದೆ ಅಕ್ಷರಸ್ಥ ರೈತರು ಮಾತ್ರ ಇದನ್ನ ಬಳಸಬಹುದಾಗಿದೆ. ಇನ್ನೂ ಡ್ರೋಣ ಹಾರಾಟ ನೋಡಿದ ರೈತರು ನಾವು ಕೂಡ ಡ್ರೋನ್ ಖರೀದಿ ಮಾಡಿ ನಮ್ಮ ಬೆಳೆಗೂ ಔಷಧ ಸಿಂಪಡಣೆ ಮಾಡೋಣ ಅಂತಿದ್ರು ಆದ್ರೆ ಈ ಡ್ರೋನ್ ಬೆಲೆ ಕೇಳಿದ ರೈತರು ಒಬ್ಬರಾಗಿ ಡ್ರೋಣ ಇರಿಸಿದ ಸ್ಥಳದಿಂದ ಮುನ್ನಡೆಯುವಂತಾಯಿತು.‌ಇನ್ನೂ ‌ಡ್ರೋನ್ ಬೆಲೆ ಬರೋಬ್ಬರಿ 15 ರಿಂದ 18 ಲಕ್ಷ‌ ಅಂತಾ ರೈತರು ನಮ್ಗೆ ಡ್ರೋನ್ ಸಹವಾಸನೇ ಬೇಡಾ ನಮ್ಮ ಹೊಲಗಳು ಬೇರೆ ಒಣ ಬೇಸಾಯ ಕೂಡಿವೆ‌ ಇನ್ನೂ ಈ ಡ್ರೋನ್ ಖರೀದಿಸಲು ಇಷ್ಟು ಯಾರು ಕೊಡ್ತಾರೆ ಅಂತಾ ರೈತರು ಕೃಷಿ ವಿವಿಯ ಮುಖ್ಯಸ್ಥರನ್ನ ಪ್ರಶ್ನೇ ಮಾಡತೊಡಗಿದ್ರು. ಇನ್ನೂ ಕೆಲ ರೈತರು ಡ್ರೋನ್ ಹಾರಟ ನೋಡಿ ಮೇಲೆ ಅದರ ಬೆಲೆ‌ ಕೇಳುವ ಗೋಜಿಗೆ ಹೋಗಲಿಲ್ಲ, 15 ಲಕ್ಷ ಹಣ ನೀಡಿ ಖರೀದಿ ಮಾಡಿದ್ರೂ ನಾನು ಬೆಳೆದ ಬೆಲೆಯಲ್ಲಿ ಸಾಲದ ಬಡ್ಡಿಗೂ ನಮ್ಮ‌ ಹಣ ಸಾಲಲ್ಲ‌, ಸರ್ಕಾರ ಇದನ್ನ‌ ಇನ್ನೂ ಅಭಿವೃದ್ಧಿ ಮಾಡಿ ಕನಿಷ್ಠ 75% ಸಬ್ಸಿಡಿ ನೀಡಬೇಕು ಅಂತಾನು ಹೇಳಿದ್ರು..

ಬೈಟ್02: ಶ್ರೀಶೈಲ ತೊರವಿ( ಡ್ರೋನ್ ನೋಡಲು ಬಂದ ರೈತ)

ಬೈಟ್03: ಪೈಗಂಬರ್ ಮುಲ್ಲಾ ( ರೈತ) ( ತಲೆ ಮೇಲೆ ಟೋಪಿ ಧರಿಸಿದವರು)



Conclusion:ವೈ.ಓ03: ಒಟ್ಟಿನಲ್ಲಿ ಡ್ರೋನ್ ನೋಡಿ್ದದ ರೈತರಿ ಸಂತಸ ಒಂದು ಕಡೆಯಾದ್ರೆ ಬೆಲೆ ಎಂಬ ಖಾರ ಅಷ್ಟೇ ಬಿಸಿ ಮುಟ್ಟಿಸಿದೆ. ಔಷಧ ಸಿಂಪಡಿಸುವ ಡ್ರೋಣ ಇನ್ನಷ್ಟು ಅಭಿವೃದ್ಧಿ ಪಡಿಸಿ ರೈತರಿಗೆ ಕಡಿಮೆ‌ ಬೆಲೆಯಲ್ಲಿ ದೊರೆಯುವಂತೆ ಸರ್ಕಾರ ಕ್ರಮಕ್ಕೆ ಮುಂದಾದ್ರೆ ಮಾತ್ರ ಡ್ರೋನ್ ಬಳಕೆ‌ ರೈತರು ಮಾಡುವಂತಾಗುತ್ತದೆ..

ಶಿವಾನಂದ ಮದಿಹಳ್ಳಿ
ಈ ಟಿವಿ ಭಾರತ ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.