ETV Bharat / state

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ತೆಂಗಿನ ಮರಕ್ಕೆ ಬೆಂಕಿ

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ರಾಧಾಕೃಷ್ಣನ್ ನಗರದಲ್ಲಿ ನಡೆದಿದೆ.

author img

By

Published : Feb 18, 2020, 4:15 AM IST

current-short-circuit-in-vijaypur
ವಿದ್ಯುತ್​ ಶಾರ್ಟ್​ ಸರ್ಕ್ಯೂಟ್ ..

ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​​​ನಿಂದ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ರಾಧಾಕೃಷ್ಣನ್ ನಗರದಲ್ಲಿ ನಡೆದಿದೆ.

ಡಾ. ಬಸವರಾಜ ಬಿಳ್ಳೂರ ಅವರಿಗೆ ಸೇರಿದ ಶಿವಶಾಂತಿ ಆಸ್ಪತ್ರೆ ಬಳಿಯ ತೆಂಗಿನ ಮರಕ್ಕೆ ವಿದ್ಯುತ್‌ ತಂತಿ ತಾಗಿ, ಶಾರ್ಟ್​ ಸರ್ಕ್ಯೂಟ್​ಗೊಂಡು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ರಾಧಾಕೃಷ್ಣನ್ ನಗರದ ವಿದ್ಯುತ್ ಸಂರ್ಪಕ ಕಡಿತಗೊಳಿಸಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಲಾಗಿತ್ತು.

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​ನಿಂದ ತೆಂಗಿನ ಮರಕ್ಕೆ ಹತ್ತಿದ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿ ಶಾಮಕ ದಳ

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​​​ನಿಂದ ತೆಂಗಿನ ಮರಕ್ಕೆ ಬೆಂಕಿ ಹತ್ತಿದ ಘಟನೆ ರಾಧಾಕೃಷ್ಣನ್ ನಗರದಲ್ಲಿ ನಡೆದಿದೆ.

ಡಾ. ಬಸವರಾಜ ಬಿಳ್ಳೂರ ಅವರಿಗೆ ಸೇರಿದ ಶಿವಶಾಂತಿ ಆಸ್ಪತ್ರೆ ಬಳಿಯ ತೆಂಗಿನ ಮರಕ್ಕೆ ವಿದ್ಯುತ್‌ ತಂತಿ ತಾಗಿ, ಶಾರ್ಟ್​ ಸರ್ಕ್ಯೂಟ್​ಗೊಂಡು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ರಾಧಾಕೃಷ್ಣನ್ ನಗರದ ವಿದ್ಯುತ್ ಸಂರ್ಪಕ ಕಡಿತಗೊಳಿಸಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಲಾಗಿತ್ತು.

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​​ನಿಂದ ತೆಂಗಿನ ಮರಕ್ಕೆ ಹತ್ತಿದ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿ ಶಾಮಕ ದಳ

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.