ETV Bharat / state

ಕೋವಿಡ್​​ ಮೃತದೇಹಗಳ ಚಿತಾಭಸ್ಮ ಕೃಷ್ಣಾ ನದಿಗೆ ಅರ್ಪಿಸಿದ ವಿಪ್ರ ಕ್ರಿಯಾ ಕರ್ಮ ಟ್ರಸ್ಟ್​

author img

By

Published : Jun 13, 2021, 7:33 PM IST

ಲಾಕ್​​ಡೌನ್​ ಹಾಗೂ ವಿವಿಧ ಕಾರಣಗಳಿಂದ ಕುಟುಂಬಸ್ಥರು ಈ ಚಿತಾಭಸ್ಮವನ್ನು ತೆಗೆದುಕೊಂಡು ಹೋಗದೇ ಅಲ್ಲಿಯೇ ಬಿಟ್ಟಿದ್ದರು. ಹಲವು ದಿನಗಳಿಂದ ಚಿತಾಭಸ್ಮ ಸ್ಮಶಾನದಲ್ಲಿ ಇಡಲಾಗಿತ್ತು. ಇದರಿಂದ ವಿಪ್ರ ಕ್ರಿಯಾ ಕರ್ಮ‌ ಟ್ರಸ್ಟ್​​ ಇಲ್ಲಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಅಸ್ಥಿಯನ್ನು ನದಿಗೆ ಅರ್ಪಿಸಿದ್ದಾರೆ..

Ashes of corona disease will be soaked by Vipra kriya karma trust
ಕೋವಿಡ್​​ ಮೃತದೇಹಗಳ ಚಿತಾಭಸ್ಮ ಕೃಷ್ಣಾ ನದಿಗೆ ಅರ್ಪಿಸಿದ ವಿಪ್ರ ಕ್ರಿಯಾ ಕರ್ಮ ಟ್ರಸ್ಟ್​

ವಿಜಯಪುರ : ಕೊರೊನಾದಿಂದ ಮೃತಪಟ್ಟಿದ್ದ 50ಕ್ಕೂ ಅಧಿಕ ಮಂದಿಯ ಚಿತಾಭಸ್ಮವನ್ನು ವಿಪ್ರ ಕ್ರಿಯಾ ಕರ್ಮ‌ ಟ್ರಸ್ಟ್​​ನ ಸದಸ್ಯರು ಕೃಷ್ಣಾ ನದಿಯಲ್ಲಿ ಸಮರ್ಪಿಸಿದ್ದಾರೆ. ಶವಸಂಸ್ಕಾರದ ಬಳಿಕ ಚಿತಾಭಸ್ಮವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗದೆ ಹಾಗೆಯೇ ಬಿಟ್ಟಿದ್ದರು. ಇದನ್ನು ಗಮನಿಸಿದ ಟ್ರಸ್ಟ್​ ಧಾರ್ಮಿಕ ವಿಧಿವಿಧಾನದ ಅನ್ವಯ ಪೂಜೆ ಸಲ್ಲಿಸಿ ನದಿಯಲ್ಲಿ ಸಮರ್ಪಿಸಿದ್ದಾರೆ.

ವಿಜಯಪುರ ‌ನಗರದ ದೇವಗಿರಿ ಸ್ಮಶಾನದಲ್ಲಿ ಸುಮಾರು 50ಕ್ಕೂ ಅಧಿಕ ಜನರ ಚಿತಾ ಭಸ್ಮವನ್ನು ಕಟ್ಟಿಡಲಾಗಿತ್ತು. ಇಂದು ವಿಪ್ರ ಕ್ರಿಯಾ ಕರ್ಮ ಟ್ರಸ್ಟ್​ನ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಆ ಚಿತಾಭಸ್ಮಗಳನ್ನು ಕೃಷ್ಣಾ ನದಿಯಲ್ಲಿ ಬಿಟ್ಟಿದ್ದಾರೆ.

ಲಾಕ್​​ಡೌನ್​ ಹಾಗೂ ವಿವಿಧ ಕಾರಣಗಳಿಂದ ಕುಟುಂಬಸ್ಥರು ಈ ಚಿತಾಭಸ್ಮವನ್ನು ತೆಗೆದುಕೊಂಡು ಹೋಗದೇ ಅಲ್ಲಿಯೇ ಬಿಟ್ಟಿದ್ದರು. ಹಲವು ದಿನಗಳಿಂದ ಚಿತಾಭಸ್ಮ ಸ್ಮಶಾನದಲ್ಲಿ ಇಡಲಾಗಿತ್ತು. ಇದರಿಂದ ವಿಪ್ರ ಕ್ರಿಯಾ ಕರ್ಮ‌ ಟ್ರಸ್ಟ್​​ ಇಲ್ಲಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಅಸ್ಥಿಯನ್ನು ನದಿಗೆ ಅರ್ಪಿಸಿದ್ದಾರೆ.

ಓದಿ: ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ.. ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ವಿಜಯಪುರ : ಕೊರೊನಾದಿಂದ ಮೃತಪಟ್ಟಿದ್ದ 50ಕ್ಕೂ ಅಧಿಕ ಮಂದಿಯ ಚಿತಾಭಸ್ಮವನ್ನು ವಿಪ್ರ ಕ್ರಿಯಾ ಕರ್ಮ‌ ಟ್ರಸ್ಟ್​​ನ ಸದಸ್ಯರು ಕೃಷ್ಣಾ ನದಿಯಲ್ಲಿ ಸಮರ್ಪಿಸಿದ್ದಾರೆ. ಶವಸಂಸ್ಕಾರದ ಬಳಿಕ ಚಿತಾಭಸ್ಮವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗದೆ ಹಾಗೆಯೇ ಬಿಟ್ಟಿದ್ದರು. ಇದನ್ನು ಗಮನಿಸಿದ ಟ್ರಸ್ಟ್​ ಧಾರ್ಮಿಕ ವಿಧಿವಿಧಾನದ ಅನ್ವಯ ಪೂಜೆ ಸಲ್ಲಿಸಿ ನದಿಯಲ್ಲಿ ಸಮರ್ಪಿಸಿದ್ದಾರೆ.

ವಿಜಯಪುರ ‌ನಗರದ ದೇವಗಿರಿ ಸ್ಮಶಾನದಲ್ಲಿ ಸುಮಾರು 50ಕ್ಕೂ ಅಧಿಕ ಜನರ ಚಿತಾ ಭಸ್ಮವನ್ನು ಕಟ್ಟಿಡಲಾಗಿತ್ತು. ಇಂದು ವಿಪ್ರ ಕ್ರಿಯಾ ಕರ್ಮ ಟ್ರಸ್ಟ್​ನ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಆ ಚಿತಾಭಸ್ಮಗಳನ್ನು ಕೃಷ್ಣಾ ನದಿಯಲ್ಲಿ ಬಿಟ್ಟಿದ್ದಾರೆ.

ಲಾಕ್​​ಡೌನ್​ ಹಾಗೂ ವಿವಿಧ ಕಾರಣಗಳಿಂದ ಕುಟುಂಬಸ್ಥರು ಈ ಚಿತಾಭಸ್ಮವನ್ನು ತೆಗೆದುಕೊಂಡು ಹೋಗದೇ ಅಲ್ಲಿಯೇ ಬಿಟ್ಟಿದ್ದರು. ಹಲವು ದಿನಗಳಿಂದ ಚಿತಾಭಸ್ಮ ಸ್ಮಶಾನದಲ್ಲಿ ಇಡಲಾಗಿತ್ತು. ಇದರಿಂದ ವಿಪ್ರ ಕ್ರಿಯಾ ಕರ್ಮ‌ ಟ್ರಸ್ಟ್​​ ಇಲ್ಲಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಅಸ್ಥಿಯನ್ನು ನದಿಗೆ ಅರ್ಪಿಸಿದ್ದಾರೆ.

ಓದಿ: ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ.. ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.