ETV Bharat / state

ಒಂದೇ ಗ್ರಾಮದ 56 ಜನರಿಗೆ ಕೋವಿಡ್ ಪಾಸಿಟಿವ್

author img

By

Published : May 12, 2021, 7:32 PM IST

ಗ್ರಾಮವನ್ನು ಸೀಲ್​​ಡೌನ್ ಮಾಡಲು ತಹಶೀಲ್ದಾರ್ ಸುರೇಶ ಚವಲರ್ ಅಧಿಕಾರಿಗೆ ಸೂಚಿಸಿದರು. ಈ ವೇಳೆ ಡಚಣ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಜಾನ್ ಕಟವಟಿ, ನೀವರಗಿ ಗ್ರಾಪಂ ಪಿಡಿಒ ಪ್ರವೀಣ ಪಾಟೀಲ ಇದ್ದರು..

vijaypur
vijaypur

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ 100 ಜನರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಆ ಪೈಕಿ 56 ಜನರಿಗೆ ಸೋಂಕು ಇರುವುದು ದೃಢ ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಇಂದು ಚಡಚಣ ತಾಲೂಕು ಆಡಳಿತ ಗೋವಿಂದಪುರ ಗ್ರಾಮಕ್ಕೆ ಭೇಟಿ ನೀಡಿತು. ಕೊರೊನಾ ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಿ ಅವರಿಗೆ ಮಾತ್ರೆಗಳನ್ನು ನೀಡಿ ಧೈರ್ಯ ತುಂಬಿದರು.

ಅಲ್ಲದೇ ಪ್ರಮುಖ ಬೀದಿಗಳನ್ನು ಬಂದ್ ಮಾಡಿ, ಗ್ರಾಮವನ್ನು ಸೀಲ್​​ಡೌನ್ ಮಾಡಲು ತಹಶೀಲ್ದಾರ್ ಸುರೇಶ ಚವಲರ್ ಅಧಿಕಾರಿಗೆ ಸೂಚಿಸಿದರು.

ಈ ವೇಳೆಯಲ್ಲಿ ಚಡಚಣ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಜಾನ್ ಕಟವಟಿ, ನೀವರಗಿ ಗ್ರಾಪಂ ಪಿಡಿಒ ಪ್ರವೀಣ ಪಾಟೀಲ ಇದ್ದರು.

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ 100 ಜನರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಆ ಪೈಕಿ 56 ಜನರಿಗೆ ಸೋಂಕು ಇರುವುದು ದೃಢ ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಇಂದು ಚಡಚಣ ತಾಲೂಕು ಆಡಳಿತ ಗೋವಿಂದಪುರ ಗ್ರಾಮಕ್ಕೆ ಭೇಟಿ ನೀಡಿತು. ಕೊರೊನಾ ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಿ ಅವರಿಗೆ ಮಾತ್ರೆಗಳನ್ನು ನೀಡಿ ಧೈರ್ಯ ತುಂಬಿದರು.

ಅಲ್ಲದೇ ಪ್ರಮುಖ ಬೀದಿಗಳನ್ನು ಬಂದ್ ಮಾಡಿ, ಗ್ರಾಮವನ್ನು ಸೀಲ್​​ಡೌನ್ ಮಾಡಲು ತಹಶೀಲ್ದಾರ್ ಸುರೇಶ ಚವಲರ್ ಅಧಿಕಾರಿಗೆ ಸೂಚಿಸಿದರು.

ಈ ವೇಳೆಯಲ್ಲಿ ಚಡಚಣ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಜಾನ್ ಕಟವಟಿ, ನೀವರಗಿ ಗ್ರಾಪಂ ಪಿಡಿಒ ಪ್ರವೀಣ ಪಾಟೀಲ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.