ETV Bharat / state

​​​​​​​ಕ್ಯಾರ್ ಚಂಡಮಾರುತಕ್ಕೆ ತತ್ತಿರಿಸಿದ ಕರಾವಳಿ: ಕಡಲತೀರದಲ್ಲಿ ಅಬ್ಬರಿಸುತ್ತಿರುವ ಅಲೆ - ಉತ್ತರ ಕನ್ನಡದಲ್ಲಿ ವಾಯುಭಾರ ಕುಸಿತ

ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಕ್ಯಾರ್​ ಚಂಡಮಾರುತಕ್ಕೆ ಕಡಲ ತೀರದ ಜನ ಆತಂಕಗೊಂಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕಾರವಾರ, ಅಂಕೋಲಾ, ಭಟ್ಕಳ ಭಾಗದಲ್ಲಿದ್ದ ಮಳಿಗೆಗಳು ಹಾನಿಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾರ್​ ಚಂಡಮಾರುತ
author img

By

Published : Oct 25, 2019, 1:42 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರ ಜೋರಾಗಿದ್ದು, ಕಡಲತೀರದ ಜನರು ಗಾಳಿ, ಮಳೆ ಜತೆಗೆ ಅಲೆಗಳ ಅಬ್ಬರಕ್ಕೆ ಕಂಗಾಲಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾರ್​ ಚಂಡಮಾರುತ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಸುರಿಯುತ್ತಿತ್ತು. ತಡರಾತ್ರಿಯಿಂದ ಕ್ಯಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಸಮುದ್ರ ತೀರಗಳಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಅಲೆಗಳಿಂದಾಗಿ ಕಾರವಾರ, ಅಂಕೋಲಾ, ಭಟ್ಕಳ ಭಾಗದ ಕಡಲತೀರದಲ್ಲಿದ್ದ ದೋಣಿಗಳು ದಡಕ್ಕೆ ಹೊಡೆದು ಹಾನಿಯಾಗಿವೆ. ಅಲ್ಲದೆ ಕಾರವಾರದಲ್ಲಿ ಕಾಳಿಯ ಅಬ್ಬರಕ್ಕೆ ಕರಾವಳಿ ‌ಸಂಗಮೋತ್ಸವಕ್ಕೆ ಹಾಕಿದ್ದ ಮಳಿಗೆಗಳು ಕಿತ್ತು ಹೋಗಿವೆ.

ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿಯೂ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಕೊಯ್ಲಿಗೆ ಬಂದ ಬೆಳೆ ಮುಳುಗಡೆಯಾಗಿದೆ. ಮಳೆ ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರಿಯಲಿದ್ದು, ಜಿಲ್ಲೆಯಾದ್ಯಂತ ಜನ ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರ ಜೋರಾಗಿದ್ದು, ಕಡಲತೀರದ ಜನರು ಗಾಳಿ, ಮಳೆ ಜತೆಗೆ ಅಲೆಗಳ ಅಬ್ಬರಕ್ಕೆ ಕಂಗಾಲಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾರ್​ ಚಂಡಮಾರುತ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಸುರಿಯುತ್ತಿತ್ತು. ತಡರಾತ್ರಿಯಿಂದ ಕ್ಯಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಸಮುದ್ರ ತೀರಗಳಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಅಲೆಗಳಿಂದಾಗಿ ಕಾರವಾರ, ಅಂಕೋಲಾ, ಭಟ್ಕಳ ಭಾಗದ ಕಡಲತೀರದಲ್ಲಿದ್ದ ದೋಣಿಗಳು ದಡಕ್ಕೆ ಹೊಡೆದು ಹಾನಿಯಾಗಿವೆ. ಅಲ್ಲದೆ ಕಾರವಾರದಲ್ಲಿ ಕಾಳಿಯ ಅಬ್ಬರಕ್ಕೆ ಕರಾವಳಿ ‌ಸಂಗಮೋತ್ಸವಕ್ಕೆ ಹಾಕಿದ್ದ ಮಳಿಗೆಗಳು ಕಿತ್ತು ಹೋಗಿವೆ.

ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿಯೂ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಕೊಯ್ಲಿಗೆ ಬಂದ ಬೆಳೆ ಮುಳುಗಡೆಯಾಗಿದೆ. ಮಳೆ ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರಿಯಲಿದ್ದು, ಜಿಲ್ಲೆಯಾದ್ಯಂತ ಜನ ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

Intro:Body:ಕ್ಯಾರ್ ಚಂಡಮಾರುತಕ್ಕೆ ತತ್ತಿರಿಸಿದ ಕರಾವಳಿ...ಕಡಲತೀರದಲ್ಲಿ ಅಬ್ಬರಿಸುತ್ತಿರುವ ಅಲೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ್ತದ ಅಬ್ಬರ ಜೋರಾಗಿದ್ದು, ಕಡಲತೀರದ ಜನರು ಗಾಳಿ, ಮಳೆ ಜತೆಗೆ ಅಲೆಗಳ ಅಬ್ಬರಕ್ಕೆ ಕಂಗಾಲಾಗಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಕರಾವಳಿ ಭಾಗದ ಜನರು ತತ್ತರಿಸಿದ್ದಾರೆ. ಆದರೆ ಇದೀಗ ತಡರಾತ್ರಿಯಿಂದ ಕ್ಯಾರ್ ಚಂಡಮಾರುತ್ತದ ಅಬ್ಬರ ಜೋರಾಗಿದ್ದು, ಸಮುದ್ರತೀರಗಳಲ್ಲಿ ಆಳೆತ್ತರದ ಅಲೆಗಳು ಅಬ್ಬರಿಸತೊಡಗಿವೆ.
ಅಲೆಗಳಿಂದಾಗಿ ಕಾರವಾರ, ಅಂಕೋಲಾ, ಭಟ್ಕಳ ಭಾಗದ ಕಡಲತೀರದಲ್ಲಿ ಇಟ್ಟಿದ್ದ‌ ದೋಣಿಗಳು ದಡಕ್ಕೆ ಗುದ್ದಿ ಹಾನಿಯಾಗಿದೆ. ಅಲ್ಲದೆ ಕಾರವಾರದಲ್ಲಿ ಕಾಳಿಯ ಅಬ್ಬರಕ್ಕೆ ಕರಾವಳಿ‌ಸಂಗಮೋತ್ಸವಕ್ಕೆ ಹಾಕಿದ್ದ ಮಳಿಗೆಗಳು ಕಿತ್ತು ಹಾನಿಯಾಗಿದೆ.
ಇನ್ನು ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿಯೂ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಕೊಯ್ಲಿಗೆ ಬಂದ ಬೆಳೆ ಮುಳುಗಡೆಯಾಗಿ ಹಾನಿಯಾಗಿದೆ. ಮಳೆ ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರಿಯಲಿದ್ದು, ಜಿಲ್ಲೆಯಾದ್ಯಂತ ಜನ ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.