ETV Bharat / state

ಮುರ್ಡೇಶ್ವರ ದೇವಸ್ಥಾನ ಬಳಿಯ ಅಂಗಡಿಗಳಲ್ಲಿ ಮಧ್ಯರಾತ್ರಿ ಕಳ್ಳತನ

ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದ ಸಮುದ್ರ ತೀರದ ಅಂಗಡಿಗಳಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಯುವಕರು ಒಟ್ಟು 5 ಅಂಗಡಿಗಳಲ್ಲಿ ಕಳ್ಳತನ ಎಸಗಿ ಪರಾರಿಯಾಗಿದ್ದಾರೆ.

author img

By

Published : Dec 25, 2019, 7:17 AM IST

theft-at-murudeshwars-seaside-shops
ಪ್ರಸಿದ್ದ ಮುರುಡೇಶ್ವರ ದೇವಸ್ಥಾನ ಬಳಿಯ ಅಂಗಡಿಯಲ್ಲಿ ಕಳ್ಳತನ

ಭಟ್ಕಳ : ಪ್ರಸಿದ್ದ ಪ್ರವಾಸಿ ತಾಣವಾದ ಮುರ್ಡೇಶ್ವರ ದೇಗುಲದ ಸಮುದ್ರ ತೀರದಲ್ಲಿರುವ 6 ಅಂಗಡಿಗಳಲ್ಲಿ ರಾತ್ರಿ ಕಳ್ಳರು ಮಧ್ಯರಾತ್ರಿ ಕೈಚಳಕ ತೋರಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಯುವಕರು ಒಟ್ಟು 5 ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಫ್ಯಾನ್ಸಿ ವಸ್ತುಗಳೂ ಸೇರಿದಂತೆ ಗೊಂಬೆ ಮತ್ತು ಬಟ್ಟೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಹೇಳಲಾಗಿದೆ. ಕಳ್ಳರು ಕೃತ್ಯ ಎಸಗಿ ಹೋಗುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಸಿದ್ದ ಮುರ್ಡೇಶ್ವರ ದೇವಸ್ಥಾನ ಬಳಿಯ ಅಂಗಡಿಯಲ್ಲಿ ಕಳ್ಳತನ, ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ನಿಮ್ಮ ಅಂಗಡಿಯ ಭದ್ರತೆ ನಿಮ್ಮದು ಎಂದು ಹೇಳಿ ಕಳುಹಿಸಿದ್ದಾರೆ ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇದೇ ರೀತಿಯ ಕಳ್ಳತನ ಪ್ರಕರಣಗಳು ನಡೆದಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಇದ್ರ ಜೊತೆಗೆ ಸಮುದ್ರದ ನೀರು ಅಂಗಡಿಯೊಳಗೆ ನುಗ್ಗಿ ಹಾನಿಯಾಗುತ್ತಿದೆ. ಇಲ್ಲಿ ವ್ಯಾಪಾರ ಮಾಡಲು ಸುಸಜ್ಜಿತ ಸ್ಥಳಾವಕಾಶದ ಕೊರತೆಯಿದ್ದು, ಸಮಸ್ಯೆಯಾಗದಂತೆ ಸಹಕಾರ ನೀಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಭಟ್ಕಳ : ಪ್ರಸಿದ್ದ ಪ್ರವಾಸಿ ತಾಣವಾದ ಮುರ್ಡೇಶ್ವರ ದೇಗುಲದ ಸಮುದ್ರ ತೀರದಲ್ಲಿರುವ 6 ಅಂಗಡಿಗಳಲ್ಲಿ ರಾತ್ರಿ ಕಳ್ಳರು ಮಧ್ಯರಾತ್ರಿ ಕೈಚಳಕ ತೋರಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಯುವಕರು ಒಟ್ಟು 5 ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಫ್ಯಾನ್ಸಿ ವಸ್ತುಗಳೂ ಸೇರಿದಂತೆ ಗೊಂಬೆ ಮತ್ತು ಬಟ್ಟೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಹೇಳಲಾಗಿದೆ. ಕಳ್ಳರು ಕೃತ್ಯ ಎಸಗಿ ಹೋಗುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಸಿದ್ದ ಮುರ್ಡೇಶ್ವರ ದೇವಸ್ಥಾನ ಬಳಿಯ ಅಂಗಡಿಯಲ್ಲಿ ಕಳ್ಳತನ, ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ನಿಮ್ಮ ಅಂಗಡಿಯ ಭದ್ರತೆ ನಿಮ್ಮದು ಎಂದು ಹೇಳಿ ಕಳುಹಿಸಿದ್ದಾರೆ ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇದೇ ರೀತಿಯ ಕಳ್ಳತನ ಪ್ರಕರಣಗಳು ನಡೆದಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಇದ್ರ ಜೊತೆಗೆ ಸಮುದ್ರದ ನೀರು ಅಂಗಡಿಯೊಳಗೆ ನುಗ್ಗಿ ಹಾನಿಯಾಗುತ್ತಿದೆ. ಇಲ್ಲಿ ವ್ಯಾಪಾರ ಮಾಡಲು ಸುಸಜ್ಜಿತ ಸ್ಥಳಾವಕಾಶದ ಕೊರತೆಯಿದ್ದು, ಸಮಸ್ಯೆಯಾಗದಂತೆ ಸಹಕಾರ ನೀಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

Intro:ಭಟ್ಕಳ: ಮುರುಡೇಶ್ವರ ಸಮುದ್ರ ತೀರದಲ್ಲಿರುವ ತಳ್ಳುವ 6 ಗೂಡಂಗಡಿಯಲ್ಲಿ ರಾತ್ರಿ ಕಳ್ಳತನ ನಡೆದಿದ್ದು ಅಂಗಡಿಯಲ್ಲಿದ್ದ ಅಧಿಕ ಮೌಲ್ಯದ ವಸ್ತು ಕದ್ದು ಕಳ್ಳರು ಪರಾರಿಯಾಗಿದ್ದು, ಕಳ್ಳತನಕ್ಕೆ ಯತ್ನಿಸಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Body:ಸೋಮವಾರ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಇಬ್ಬರು ಯುವಕರು ಸಮುದ್ರ ತೀರದಲ್ಲಿ ನಿಲ್ಲಿಸಿಟ್ಟ ಬಟ್ಟೆ ಹಾಗೂ ಫ್ಯಾನ್ಸಿ ಅಂಗಡಿಗಳಿಗೆ ಬಂದು ಕಳ್ಳತನ ನಡೆಸಿಕೊಂಡು ಹೋಗಿದ್ದಾರೆ. ಅಲ್ಲಿನ ಸ್ಥಳೀಯ ಅಂಗಡಿಕಾರ ರಾಜೇಶ ನಾಯ್ಕ ಎನ್ನುವವರಿಗೆ ಸೇರಿದ ಅಂಗಡಿಯಾಗಿದೆ ಎಂದು ತಿಳಿದು ಬಂದಿದೆ. ಇನ್ನುಳಿದ 5 ಅಂಗಡಿಗಳು ಸಹ ಕಳುವಾಗಿರುವ ಬಗ್ಗೆ ತಿಳಿದು ಬಂದಿದೆ.
ಕಳ್ಳತನದಲ್ಲಿ 3 ಅಂಗಡಿಯಲ್ಲಿನ ಪ್ಯಾನ್ಸಿ ವಸ್ತುಗಳು, ಗೊಂಬೆ ಹಾಗೂ ಬಟ್ಟೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಈ ಬಗ್ಗೆ ಇನ್ನು ತನಕ ಮುರ್ಡೇಶ್ವರ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವಾಗಿದೆ. ಈ ಕುರಿತು ದೂರು ಸಲ್ಲಿಸಲು ತೆರಳಿದ ಅಂಗಡಿಕಾರರಿಗೆ ನಿಮ್ಮ ಅಂಗಡಿಯ ಭದ್ರತೆ ನಿಮ್ಮದಾಗಿದ್ದು, ಅಂಗಡಿಯ ಬಗ್ಗೆ ಕಾಳಜಿ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ಬಂದ ಹಿನ್ನೆಲೆ ಅಂಗಡಿಕಾರರು ವಾಪಸ್ಸಾಗಿದ್ದಾರೆ.
ಈ ಬಗ್ಗೆ ಅಂಗದಿಕಾರ ವಿಷ್ಣು ನಾಯ್ಕ ಮಾಹಿತಿ ನೀಡಿದ್ದು ಈ ಹಿಂದೆ ಇದೇ ರೀತಿ ಕಳ್ಳತನವೂ ನಡೆಯುತ್ತಿದ್ದು, ಎಲ್ಲವೂ ಗಮನಕ್ಕೆ ಇದ್ದರು ಸಹ ಸಂಬಂದಪಟ್ಟ ಇಲಾಖೆಯೂ ಕ್ರಮಕ್ಕೆ ಮುಂದಾಗಿಲ್ಲವಾಗಿದೆ. ಈ ಹಿಂದೆ ಸಮುದ್ರದ ನೀರು ಬಂದು ಅಂಗಡಿಗೆಲ್ಲ ಹಾನಿಯಾಗಿತ್ತು. ಇಲ್ಲಿ ವ್ಯಾಪಾರ ಮಾಡಲು ಸುಸಜ್ಜಿತ ಸ್ಥಳ ಅವಶ್ಯಕತೆಯಿದ್ದು, ವ್ಯಾಪಾರಕ್ಕೆ ಸಮಸ್ಯೆಯಾಗದಂತೆ ಇಲಾಖೆ, ಪಂಚಾಯತ ಸಹಕಾರ ಮಾಡಬೇಕೆಂದು ಆಗ್ರಹಿಸಿದರು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.