ETV Bharat / state

ಆಸ್ತಿ ಹಕ್ಕನ್ನೇ ಕಸಿದುಕೊಳ್ತಿದೆಯಾ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ?!

ಪೌರಾಡಳಿತ ನಿರ್ದೇಶನಾಲಯ ಜಾರಿಗೆ ತಂದಿರುವ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ ಮಲೆನಾಡಿನ ನಗರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದು ಜನರ ಆಸ್ತಿ ಹಕ್ಕನ್ನೇ ಕಸಿದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

author img

By

Published : May 17, 2019, 8:16 AM IST

ಆಸ್ತಿ ಹಕ್ಕನ್ನೇ ಕಸಿದುಕೊಳ್ತಿದ್ಯಂತೆ ಇ -ಸ್ವತ್ತು ದಾಖಲೀಕರಣ ವ್ಯವಸ್ಥೆ.

ಶಿರಸಿ: ಪೌರಾಡಳಿತ ನಿರ್ದೇಶನಾಲಯ ಜಾರಿಗೆ ತಂದಿರುವ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಮಲೆನಾಡಿನ ನಗರಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಜನರ ಆಸ್ತಿ ಹಕ್ಕನ್ನೇ ಕಸಿದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಾರಿಗೆ ತಂದಿರು ಇ-ಸ್ವತ್ತು ದಾಖಲೀಕರಣ ವ್ಯವಸ್ಥೆಯಿಂದ ಯಾವುದೇ ನಿವೇಶನದ ಮಾಲೀಕತ್ವ ವರ್ಗಾವಣೆ ಆಗುತ್ತಿಲ್ಲ. ತಂದೆ ಮನೆಯ ಹಕ್ಕನ್ನು ಮಗನ ಹೆಸರಿಗೂ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.

ಶಿರಸಿಯಲ್ಲಿ ಯಾವುದೇ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ನಗರ ಯೋಜನಾ ಪ್ರಾಧಿಕಾರ ಲೇಔಟ್ ರಚಿಸಿ ಎನ್‍ಒಸಿ ನೀಡಿಲ್ಲ. ಇದರಿಂದ ಸಮರ್ಪಕ ದಾಖಲೆ ಇಲ್ಲ ಎನ್ನುವ ಕಾರಣ ನೀಡಿ ಶಿರಸಿಯ 16,000 ಮನೆಗಳಲ್ಲಿ 14,000 ಮನೆಗಳು ಇ-ಸ್ವತ್ತು ತಂತ್ರಾಂಶದ ಅನಧಿಕೃತ ಕಾಲಂನಲ್ಲಿ ದಾಖಲಾಗಿವೆ. ಇದರಿಂದ ಲೇಔಟ್ ನಿಯಮಾವಳಿ ಜಾರಿ ಇಲ್ಲಿ ಅಸಾಧ್ಯ. ಹಾಗಾಗಿ ಶಿರಸಿಗೆ ಇದರಿಂದ ವಿನಾಯ್ತಿ ನೀಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಜನರ ಆಸ್ತಿ ಹಕ್ಕನ್ನೇ ಕಸಿದುಕೊಳ್ತಿದೆಯಂತೆ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ

ಒಟ್ಟಿನಲ್ಲಿ ವ್ಯವಸ್ಥಿತವಾಗಿ ನಗರ ಅಭಿವೃದ್ಧಿಪಡಿಸುವ ಸದುದ್ದೇಶದಿಂದ ಜಾರಿಗೆ ಬಂದ ಇ- ಸ್ವತ್ತು ತಂತ್ರಾಂಶದಿಂದ ಇದೀಗ ಜನರಿಗೆ ಆಸ್ತಿ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.

ಶಿರಸಿ: ಪೌರಾಡಳಿತ ನಿರ್ದೇಶನಾಲಯ ಜಾರಿಗೆ ತಂದಿರುವ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಮಲೆನಾಡಿನ ನಗರಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಜನರ ಆಸ್ತಿ ಹಕ್ಕನ್ನೇ ಕಸಿದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಾರಿಗೆ ತಂದಿರು ಇ-ಸ್ವತ್ತು ದಾಖಲೀಕರಣ ವ್ಯವಸ್ಥೆಯಿಂದ ಯಾವುದೇ ನಿವೇಶನದ ಮಾಲೀಕತ್ವ ವರ್ಗಾವಣೆ ಆಗುತ್ತಿಲ್ಲ. ತಂದೆ ಮನೆಯ ಹಕ್ಕನ್ನು ಮಗನ ಹೆಸರಿಗೂ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.

ಶಿರಸಿಯಲ್ಲಿ ಯಾವುದೇ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ನಗರ ಯೋಜನಾ ಪ್ರಾಧಿಕಾರ ಲೇಔಟ್ ರಚಿಸಿ ಎನ್‍ಒಸಿ ನೀಡಿಲ್ಲ. ಇದರಿಂದ ಸಮರ್ಪಕ ದಾಖಲೆ ಇಲ್ಲ ಎನ್ನುವ ಕಾರಣ ನೀಡಿ ಶಿರಸಿಯ 16,000 ಮನೆಗಳಲ್ಲಿ 14,000 ಮನೆಗಳು ಇ-ಸ್ವತ್ತು ತಂತ್ರಾಂಶದ ಅನಧಿಕೃತ ಕಾಲಂನಲ್ಲಿ ದಾಖಲಾಗಿವೆ. ಇದರಿಂದ ಲೇಔಟ್ ನಿಯಮಾವಳಿ ಜಾರಿ ಇಲ್ಲಿ ಅಸಾಧ್ಯ. ಹಾಗಾಗಿ ಶಿರಸಿಗೆ ಇದರಿಂದ ವಿನಾಯ್ತಿ ನೀಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಜನರ ಆಸ್ತಿ ಹಕ್ಕನ್ನೇ ಕಸಿದುಕೊಳ್ತಿದೆಯಂತೆ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ

ಒಟ್ಟಿನಲ್ಲಿ ವ್ಯವಸ್ಥಿತವಾಗಿ ನಗರ ಅಭಿವೃದ್ಧಿಪಡಿಸುವ ಸದುದ್ದೇಶದಿಂದ ಜಾರಿಗೆ ಬಂದ ಇ- ಸ್ವತ್ತು ತಂತ್ರಾಂಶದಿಂದ ಇದೀಗ ಜನರಿಗೆ ಆಸ್ತಿ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.

Intro:ಶಿರಸಿ : ನಗರಗಳು ಅಡ್ಡಾದಿಡ್ಡಿಯಾಗಿ ಬೆಳೆಯೋದನ್ನು ನಿಯಂತ್ರಿಸಿ ವ್ಯವಸ್ಥಿತ ರೂಪ ನೀಡುವ ಉದ್ದೇಶದಿಂದ ಪೌರಾಡಳಿತ ನಿರ್ದೇಶನಾಲಯ ಇ ಸ್ವತ್ತು ದಾಖಲೀಕರಣ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಇದು ಮಲೆನಾಡಿನ ನಗರಗಳಿಗೆ ತೊಡಕಾಗಿದ್ದು, ಜನರ ಆಸ್ತಿ ಹಕ್ಕನ್ನೇ ಕಸಿದುಕೊಂಡಿದೆ. ಅಚ್ಚರಿ ಅಂದ್ರೆ ಶಿರಸಿ ನಗರವೇ ಅಕ್ರಮ ಎನ್ನುವಷ್ಟರ ಮಟ್ಟಿಗೆ ಇ ಸ್ವತ್ತು ತಂತ್ರಾಂಶ ದುಶ್ಪರಿಣಾಮ ಬೀರಿದೆ.Body:ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡ ಶಿರಸಿ ನಗರ ಅತಿ ವೇಗವಾಗಿ ಬೇಳೆಯುತ್ತಿದೆ. ಕೃಷಿ ಭೂಮಿಯನ್ನು ಸೈಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಆದ್ರೆ ಪೌರಾಡಳಿತ ನಿರ್ದೇಶನಾಲಯ 2014-15ರಲ್ಲಿ ಜಾರಿಗೆ ತಂದ ಇ ಸ್ವತ್ತು ದಾಖಲೀಕರಣ ವ್ಯವಸ್ಥೆಯಿಂದ ಯಾವುದೇ ನಿವೇಶನದ ಮಾಲೀಕತ್ವ ವರ್ಗಾವಣೆ ಆಗುತ್ತಿಲ್ಲ. ತಂದೆಗೆ ಮನೆಯ ಹಕ್ಕನ್ನು ಮಗನ ಹೆಸರಿಗೂ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಬೈಟ್ (೧)
ಈಶ್ವರ್ ಚಂದಾವರ್, ಶಿರಸಿ ನಗರವಾಸಿ

ಪೌರಾಡಳಿತ ನಿರ್ದೇಶನಾಲಯ ಇ ಸ್ವತ್ತು ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಮೊದಲ ಹಂತದಲ್ಲಿ ರಾಜ್ಯದ 233 ನಗರ ಸಭೆಗಳಲ್ಲಿ ಅನುಷ್ಠಾನಗೊಳಿಸಿತು. ಇದಕ್ಕೂ ಮೊದಲು, ಕಂದಾಯ ಇಲಾಖೆ ಆರ್ ಟಿಸಿ ಯಲ್ಲಿ ಆಸ್ತಿ ಹಕ್ಕನ್ನು ದಾಖಲಿಸುತ್ತಿತ್ತು. ಇ ಸ್ವತ್ತು ತಂತ್ರಾಂಶ ಜಾರಿಗೆ ಬಂದ ಮೇಲೆ ಅದರಲ್ಲಿ ಖಡ್ಡಾಯವಾಗಿ ಮಾಲೀಕ ತನ್ನ ಆಸ್ತಿ ಮಾಹಿತಿ ದಾಖಲಿಸಿ ಹಕ್ಕುಪತ್ರ ಪಡೆಯಬೇಕು ಎಂದು ಸೂಚಿಸಲಾಯ್ತು. ಇದಕ್ಕೆ ಹಲವು ದಾಖಲೆ ನೀಡಬೇಕು. ಅದರಲ್ಲಿ ಮುಖ್ಯವಾಗಿ ನಗರ ಯೋಜನಾ ಪ್ರಾಧಿಕಾರದಿಂದ ಪಡೆದ ಲೇ ಔಟ್ ಪ್ಲ್ಯಾನಿಂಗ್ ರಿಪೋರ್ಟ್ ಪ್ರತಿ ನೀಡಲೇಬೇಕು. ಅಂದ್ರೆ ರಸ್ತೆ, ಪಾರ್ಕಿಂಗ್, ಪಾರ್ಕ್ ಗಳಿಗೆ ಸ್ಥಳಬಿಡಬೇಕೆಂದು ಕಡ್ಡಾಯ ಮಾಡಲಾಯ್ತು. ಆದ್ರೆ ಶಿರಸಿಯಲ್ಲಿ ಯಾವುದೇ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ನಗರ ಯೋಜನಾ ಪ್ರಾಧಿಕಾರ ಲೇ ಔಟ್ ರಚಿಸಿ ಎನ್‍ಒಸಿ ನೀಡಿಲ್ಲ. ಇದರಿಂದ ಸಮರ್ಪಕ ದಾಖಲೆ ಇಲ್ಲ ಎನ್ನುವ ಕಾರಣ ನೀಡಿ ಶಿರಸಿಯ 16000 ಮನೆಗಳಲ್ಲಿ 14000 ಮನೆಗಳು ಇ ಸ್ವತ್ತು ತಂತ್ರಾಂಶದ ಅನಧಿಕೃತ ಕಾಲಂನಲ್ಲಿ ದಾಖಲಾಗಿವೆ. ಗುಡ್ಡ ಪ್ರದೇಶದ ನಗರ ಇದಾಗಿದ್ದರಿಂದ ಇಲ್ಲಿ ಚಿಕ್ಕ ನಿವೇಶಗಳೇ ಹೆಚ್ಚು. ಇದರಿಂದ ಲೇಔಟ್ ನಿಯಮಾವಳಿ ಜಾರಿ ಇಲ್ಲಿ ಅಸಾಧ್ಯ ಕಾರಣ ಶಿರಸಿಗೆ ಇದರಿಂದ ವಿನಾಯ್ತಿ ನೀಡಿ ಎಂದು ನಾಗರಿಕರು ಬೀದಿಗಳಿದು ಪ್ರತಿಭಟನೆ ನಡೆಸಿ ಆಗ್ರಹಿಸುತ್ತಿದ್ದಾರೆ. ಇದಲ್ಲದೇ ಇ ಸ್ವತ್ತು ತಂತ್ರಾಂಶದಲ್ಲಿ ಸ್ತಿರಾಸ್ತಿಯ ಮೂಲ ಎಂಟ್ರಿ ಪ್ರತಿಯನ್ನೂ ನೀಡಬೇಕು. ಆದ್ರೆ ಶಿರಸಿ ನಗರದ ಹಲವು ಆಸ್ತಿಗಳ ಮೂಲ ದಾಖಲೆಗಳೇ ಕಾಣೆಯಾಗಿದೆ ಎನ್ನುವ ಆಘಾತಕಾರಿ ಅಂಶ ತಹಸೀಲ್ದಾರ್ ಕಚೇರಿಯೇ ನೀಡಿದ ಮಾಹಿತಿಯಿಂದ ಬಯಲಾಗಿದೆ.
ಬೈಟ್ (೨)
ಗೋಪಾಲಕೃಷ್ಣ ಆನವಟ್ಟಿ, ಇ ಸ್ವತ್ತು ಯೋಜನೆConclusion:ಒಟ್ಟಿನಲ್ಲಿ ವ್ಯವಸ್ಥಿತವಾಗಿ ನಗರ ಅಭಿವೃದ್ಧಿ ಪಡಿಸುವ ಸದುದ್ದೇಶದಿಂದ ಜಾರಿಗೆ ಬಂದ ಇ ಸ್ವತ್ತು ತಂತ್ರಾಂಶದಿಂದ ನಾಗಕರಿಕರು ಸಂವಿದಾನ ನೀಡಿದ ತಮ್ಮ ಮೂಲಭೂತ ಹಕ್ಕು ಆಸ್ತಿ ಹಕ್ಕನ್ನೇ ಕಳೆದುಕೊಳ್ಳುವಂತಾಗಿದ್ದು ದುರಂತವೇ ಸರಿ.
.......
ಸಂದೇಶ ಭಟ್ ಶಿರಸಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.