ETV Bharat / state

ವ್ಯಕ್ತಿಯ ಅಪಹರಿಸಿ ಪರಾರಿಯಾಗುತ್ತಿದ್ದ ಐವರು ಆರೋಪಿಗಳು ಅಂದರ್​​​

author img

By

Published : Sep 27, 2019, 5:29 AM IST

ಗೋವಾ ಮೂಲದ ವ್ಯಕ್ತಿಯೋರ್ವರ ಜೊತೆ ಹಣಕಾಸು ವಿಚಾರವಾಗಿ ಗಲಾಟೆ ನಡೆಸಿದ ಗುಂಪೊಂದು ಅವರನ್ನು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆರೋಪಿಗಳನ್ನು ಗೋವಾ ಪೊಲೀಸರಿಗೆ ಶಿರಸಿ ಪೊಲೀಸರು ಹಸ್ತಾಂತರಿಸಿದ್ದಾರೆ.

Sirsi Police arrested accused

ಶಿರಸಿ: ಗೋವಾದಿಂದ ವ್ಯಕ್ತಿಯೋರ್ವರನ್ನು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಖತರ್ನಾಕ್​​ ಗ್ಯಾಂಗ್​ವೊಂದನ್ನು ಶಿರಸಿ ಪೊಲೀಸರು ಬಂಧಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಗೋವಾ ಮೂಲದ ಅಂಬರೀಶ್ ಪ್ರತಾಪ್ ಸಿಂಗ್ (31) ರಕ್ಷಿಸಲಾದ ವ್ಯಕ್ತಿ. ಸುರತ್ಕಲ್​ನ ಮಹಮ್ಮದ್ ಜಾವೇದ್ (36), ಅನೀಸ್ ಮಹಮ್ಮದ್ (46), ನವಾಜ್​ (35), ಮಹಮ್ಮದ್ ಮುಸ್ತುಫ್ (30) ಹಾಗೂ ಸಾಕೀಮ್ ಸುಲೇಮಾನ್ (25) ಬಂಧಿತ ಆರೋಪಿಗಳು.

ಅಂಬರೀಶ್​​ ಗ್ಯಾಸ್ ಕಂಪನಿಯೊಂದರ ಪ್ರಮುಖರಾಗಿದ್ದು, ಇವರ ಜೊತೆ ಹಣಕಾಸು ವಿಚಾರಕ್ಕೆ ಆರೋಪಿಗಳು ವೈಮನಸ್ಸು ಹೊಂದಿದ್ದರಂತೆ. ಇದೇ ಕಾರಣಕ್ಕೆ ಇವರನ್ನು ಅಪಹರಣ ಮಾಡಿದ್ದರು ಎನ್ನಲಾಗುತ್ತಿದೆ.

ಘಟನೆ ಹಿನ್ನೆಲೆ:

ಹಣಕಾಸು ವಿಚಾರದಲ್ಲಿ ಗಲಾಟೆಯಾಗಿ ಅಂಬರೀಶ್​ ಅವರನ್ನು ಗುಂಪೊಂದು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು. ಈ ಸಂಬಂಧ ಗೋವಾ ಪೊಲೀಸರು ಶಿರಸಿ ಠಾಣೆಗೆ ಮಾಹಿತಿ ನೀಡಿದ್ದರು. ಪರಿಣಾಮ ಅಪಹರಣಕಾರರನ್ನು ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಗಳನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

ಶಿರಸಿ: ಗೋವಾದಿಂದ ವ್ಯಕ್ತಿಯೋರ್ವರನ್ನು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಖತರ್ನಾಕ್​​ ಗ್ಯಾಂಗ್​ವೊಂದನ್ನು ಶಿರಸಿ ಪೊಲೀಸರು ಬಂಧಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಗೋವಾ ಮೂಲದ ಅಂಬರೀಶ್ ಪ್ರತಾಪ್ ಸಿಂಗ್ (31) ರಕ್ಷಿಸಲಾದ ವ್ಯಕ್ತಿ. ಸುರತ್ಕಲ್​ನ ಮಹಮ್ಮದ್ ಜಾವೇದ್ (36), ಅನೀಸ್ ಮಹಮ್ಮದ್ (46), ನವಾಜ್​ (35), ಮಹಮ್ಮದ್ ಮುಸ್ತುಫ್ (30) ಹಾಗೂ ಸಾಕೀಮ್ ಸುಲೇಮಾನ್ (25) ಬಂಧಿತ ಆರೋಪಿಗಳು.

ಅಂಬರೀಶ್​​ ಗ್ಯಾಸ್ ಕಂಪನಿಯೊಂದರ ಪ್ರಮುಖರಾಗಿದ್ದು, ಇವರ ಜೊತೆ ಹಣಕಾಸು ವಿಚಾರಕ್ಕೆ ಆರೋಪಿಗಳು ವೈಮನಸ್ಸು ಹೊಂದಿದ್ದರಂತೆ. ಇದೇ ಕಾರಣಕ್ಕೆ ಇವರನ್ನು ಅಪಹರಣ ಮಾಡಿದ್ದರು ಎನ್ನಲಾಗುತ್ತಿದೆ.

ಘಟನೆ ಹಿನ್ನೆಲೆ:

ಹಣಕಾಸು ವಿಚಾರದಲ್ಲಿ ಗಲಾಟೆಯಾಗಿ ಅಂಬರೀಶ್​ ಅವರನ್ನು ಗುಂಪೊಂದು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು. ಈ ಸಂಬಂಧ ಗೋವಾ ಪೊಲೀಸರು ಶಿರಸಿ ಠಾಣೆಗೆ ಮಾಹಿತಿ ನೀಡಿದ್ದರು. ಪರಿಣಾಮ ಅಪಹರಣಕಾರರನ್ನು ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಗಳನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

Intro:ಶಿರಸಿ :
ಗೋವಾ ದಿಂದ ವ್ಯಕ್ತಿಯೊರ್ವನನ್ನು ಕಿಡ್ನಾಪ್ ಮಾಡಿಕೊಂಡು ಬರುತ್ತಿದ್ದ ಐದು ಜನರ ಖತರ್ ನಾಕ್ ಗ್ಯಾಂಗ್ ಗೊಂದನ್ನು ಶಿರಸಿ ಪೊಲೀಸರು ಬಂಧಿಸಿ, ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.

ಗೋವಾ ಮೂಲದ ಅಂಬರೀಶ್ ಪ್ರತಾಪ್ ಸಿಂಗ್ (೩೧)
ಎನ್ನಲಾದ ವ್ಯಕ್ತಿಯೊರ್ವನನ್ನು ಹಣಕಾಸಿ ವಿಚಾರದಲ್ಲಿ ಗಲಾಟೆಯಾಗಿ ಕಿಡ್ನಾಪ್ ಮಾಡಿಕೊಂಡಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದಾಗ ನಗರದ ಯಲ್ಲಾಪುರ ನಾಕಾದಲ್ಲಿ ಮೂವರು ಆರೋಪಿಗಳನ್ನು ಹಾಗೂ ಯಲ್ಲಾಪುರ ಪಟ್ಟಣದಲ್ಲಿ ಇಬ್ಬರು ಅಪಹರಣಕಾರರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ಲಿನ ಮಹಮ್ಮದ್ ಜಾವೇದ್ (೩೬), ಅನೀಸ್ ಮಹಮ್ಮದ್ (೪೬), ನವಾಜ (೩೫), ಮಹಮ್ಮದ್ ಮುಸ್ತುಫ್ (೩೦) ಹಾಗೂ ಸಾಕೀಮ್ ಸುಲೇಮಾನ್ (೨೫) ಬಂಧಿತ ಆರೋಪಿಗಳಾಗಿದ್ದಾರೆ. ಮೊದಲನೇ ಆರೋಪಿ ಕಂಪನಿಯೊಂದರಲ್ಲಿ ಸುಪ್ರವೈಸರ್ ಆಗಿದ್ದು, ಉಳಿದವರು ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ‌ಆರೋಪಿಗಳನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಶಿರಸಿ ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.‌

Body:ಹಿನ್ನಲೆ !
ಗ್ಯಾಸ್ ಕಂಪನಿಯೊಂದರ ಪ್ರಮುಖರಾಗಿದ್ದ ಅಪಹರಣಕ್ಕೊಳಗಾದ ವ್ಯಕ್ತಿ ಜೊತೆ ಹಣಕಾಸು ವಿಚಾರಕ್ಕೆ ಆರೋಪಿಗಳು ವೈಮನಸ್ಸು ಹೊಂದಿದ್ದರು. ಆತನನ್ನು ಕಿಡ್ನಾಪ್ ಮಾಡಿಕೊಂಡು ಮಂಗಳೂರಿಗೆ ಹೋಗುತ್ತಿರುವಾಗ ಗೋವಾ ಚೆಕ್ ಪೋಸ್ಟ್ ಬಳಿ ಪೊಲೀಸರನ್ನು ತಪ್ಪಿಸುವ ಭರದಲ್ಲಿ ಕಾರು ಅಪಘಾತಕ್ಕಿಡಾಗಿದೆ. ನಂತರ ಪೊಲೀಸರಿಂದ ಪಾರಾಗಲು ದಾರಿ ಬದಲಿಸಿ ಶಿರಸಿ ಕಡೆಗೆ ಬಂದಿದ್ದಾರೆ ಎನ್ನಲಾಗಿದೆ. ತಕ್ಷಣ ಗೋವಾ ಪೊಲೀಸರು ಶಿರಸಿ ಠಾಣೆಗೆ ಮಾಹಿತಿ ನೀಡಿದ ಪರಿಣಾಮ ಅಪಹರಣಕಾರರು ಸಿಕ್ಕಿಬಿದ್ದಿದ್ದಾರೆ.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.