ಶಿರಸಿ: ಕೊರೊನಾ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದ ಯುವಕರ ಗುಂಪನ್ನು ಬಂಧಿಸಲಾಗಿದೆ.
ನಗರದ ಕನವಳ್ಳಿ ಗಲ್ಲಿಯ ಖೂಬಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಯುವಕರು ಮುಂದಾಗಿದ್ದರು ಎನ್ನಲಾಗಿದೆ. ಶಿರಸಿಯ ನೆಹರೂ ನಗರದ ಮಹ್ಮದ್ ಯೂಸುಫ್ ಕಲ್ಲಂಗಡಿ, ಇಬ್ರಾಹಿಂ ಕಲ್ಲಂಗಡಿ ಹಾಗೂ ಚಮನ್ ಸಾಬ್ ಕಲ್ಲಂಗಡಿ ಬಂಧಿತ ಆರೋಪಿಗಳಾಗಿದ್ದಾರೆ. ಮಸೀದಿಯ ಹತ್ತಿರ ಗುಂಪು ಸೇರಿ ಪ್ರಾರ್ಥನೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಡ್ರೋಣ್ ಕ್ಯಾಮರಾದಿಂದ ಪತ್ತೆ ಹಚ್ಚಿದ ಪೊಲೀಸರು, ತಕ್ಷಣವೇ ಮಸೀದಿ ಬಳಿ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಾರ್ಥನೆ ಸಲ್ಲಿಸುತ್ತಿದ್ದ ಮೂವರನ್ನು ಬಂಧಿಸುತ್ತಿದ್ದಂತೆ ಉಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.