ETV Bharat / state

ಪ್ರಧಾನಿಗೆ ಶುಭಾಶಯ ಕೋರಿದ್ದ ಶಿರಸಿಯ ಯುವಕ: ಮೋದಿಯಿಂದ ಬಂತು ಪತ್ರ - ಪ್ರಧಾನಿಗೆ ಶುಭಾಶಯ ತಿಳಿಸಿದ್ದ ಶಿರಸಿಯ ಯುವಕ

ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯುತ್ತಾರೆ. ಈ ಬಾರಿ ಶಿರಸಿಯ ಮಂಜುಗುಣಿಯ ನಾಗೇಂದ್ರ ಶೇಟ್ ಎಂಬ ಯುವಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪ್ರಧಾನಿಯ ಪತ್ರ
author img

By

Published : Nov 3, 2019, 7:42 PM IST

ಶಿರಸಿ: ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯುತ್ತಾರೆ. ಈ ಬಾರಿ ಶಿರಸಿಯ ಮಂಜುಗುಣಿಯ ನಾಗೇಂದ್ರ ಶೇಟ್ ಎಂಬ ಯುವಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಅವರ 69ನೇ ಹುಟ್ಟುಹಬ್ಬದ ನಿಮಿತ್ತ ಪತ್ರ ಬರೆದು ಶುಭಾಶಯ ಕೋರಿದ್ದ ನಾಗೇಂದ್ರ ಶೇಟ್​ಗೆ ಪ್ರಧಾನಿ ಎರಡು ತಿಂಗಳ ಬಳಿಕ ಪ್ರತಿಕ್ರಿಯಿಸಿದ್ದಾರೆ. ನೀವು ಕಳಿಸಿರುವ ಹುಟ್ಟುಹಬ್ಬದ ಶುಭಾಶಯಗಳನ್ನು ನಾನು ಸ್ವೀಕರಿಸಿದ್ದೇನೆ. ಇದು ನಮ್ಮ ರಾಷ್ಟ್ರ ಸೇವೆಯಲ್ಲಿ ಶ್ರಮಿಸಲು ಒಂದು ಶತಕೋಟಿಗೂ ಅಧಿಕ ಜನರ, ಮಿತಿಯಿಲ್ಲದ ವಾತ್ಸಲ್ಯ ಮತ್ತು ಕಾಳಜಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದ್ದು, ನಿಮಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.

ಮೋದಿಯಿಂದ ಪತ್ರ ಪಡೆದ ಯುವಕ

ಶ್ರೀಕ್ಷೇತ್ರ ಮಂಜುಗುಣಿ ದೇವಾಲಯದ ಮುಖ್ಯ ವ್ಯವಸ್ಥಾಪಕರಾಗಿರುವ ನಾಗೇಂದ್ರ, ಸೆಪ್ಟೆಂಬರ್ 17ರಂದು ಇಂಗ್ಲಿಷ್​ನಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಶುಭಾಶಯ ತಿಳಿಸಿದ್ದರು. ಪತ್ರದೊಂದಿಗೆ ದೇವರ ಕುಂಕುಮ ಹಾಗೂ ಪ್ರಸಾದವನ್ನು ಸಹ ಕಳುಹಿಸಿದ್ದರು. ಜೊತೆಗೆ ಶ್ರೀಕ್ಷೇತ್ರ ಮಂಜುಗುಣಿಗೆ ಭೇಟಿ ನೀಡುವಂತೆ ಪ್ರಧಾನಿಯವರನ್ನು ಆಹ್ವಾನಿಸಿದ್ದರು.

ಪ್ರಧಾನಿ ಮೋದಿಯವರಿಂದ ಬಂದಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ನಾಗೇಂದ್ರ, ಸಾಮಾನ್ಯ ಜನತೆಯೊಂದಿಗೆ ಪ್ರಧಾನಿ ಸಂವಹನ ಮಾಡುತ್ತಿರುವುದು ನಿಜಕ್ಕೂ ತುಂಬಾ ಸಂತಸದ ವಿಚಾರವಾಗಿದೆ ಎಂದರು. ಮೋದಿಯವರ ನೇತೃತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.

ಶಿರಸಿ: ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯುತ್ತಾರೆ. ಈ ಬಾರಿ ಶಿರಸಿಯ ಮಂಜುಗುಣಿಯ ನಾಗೇಂದ್ರ ಶೇಟ್ ಎಂಬ ಯುವಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಅವರ 69ನೇ ಹುಟ್ಟುಹಬ್ಬದ ನಿಮಿತ್ತ ಪತ್ರ ಬರೆದು ಶುಭಾಶಯ ಕೋರಿದ್ದ ನಾಗೇಂದ್ರ ಶೇಟ್​ಗೆ ಪ್ರಧಾನಿ ಎರಡು ತಿಂಗಳ ಬಳಿಕ ಪ್ರತಿಕ್ರಿಯಿಸಿದ್ದಾರೆ. ನೀವು ಕಳಿಸಿರುವ ಹುಟ್ಟುಹಬ್ಬದ ಶುಭಾಶಯಗಳನ್ನು ನಾನು ಸ್ವೀಕರಿಸಿದ್ದೇನೆ. ಇದು ನಮ್ಮ ರಾಷ್ಟ್ರ ಸೇವೆಯಲ್ಲಿ ಶ್ರಮಿಸಲು ಒಂದು ಶತಕೋಟಿಗೂ ಅಧಿಕ ಜನರ, ಮಿತಿಯಿಲ್ಲದ ವಾತ್ಸಲ್ಯ ಮತ್ತು ಕಾಳಜಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದ್ದು, ನಿಮಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.

ಮೋದಿಯಿಂದ ಪತ್ರ ಪಡೆದ ಯುವಕ

ಶ್ರೀಕ್ಷೇತ್ರ ಮಂಜುಗುಣಿ ದೇವಾಲಯದ ಮುಖ್ಯ ವ್ಯವಸ್ಥಾಪಕರಾಗಿರುವ ನಾಗೇಂದ್ರ, ಸೆಪ್ಟೆಂಬರ್ 17ರಂದು ಇಂಗ್ಲಿಷ್​ನಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಶುಭಾಶಯ ತಿಳಿಸಿದ್ದರು. ಪತ್ರದೊಂದಿಗೆ ದೇವರ ಕುಂಕುಮ ಹಾಗೂ ಪ್ರಸಾದವನ್ನು ಸಹ ಕಳುಹಿಸಿದ್ದರು. ಜೊತೆಗೆ ಶ್ರೀಕ್ಷೇತ್ರ ಮಂಜುಗುಣಿಗೆ ಭೇಟಿ ನೀಡುವಂತೆ ಪ್ರಧಾನಿಯವರನ್ನು ಆಹ್ವಾನಿಸಿದ್ದರು.

ಪ್ರಧಾನಿ ಮೋದಿಯವರಿಂದ ಬಂದಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ನಾಗೇಂದ್ರ, ಸಾಮಾನ್ಯ ಜನತೆಯೊಂದಿಗೆ ಪ್ರಧಾನಿ ಸಂವಹನ ಮಾಡುತ್ತಿರುವುದು ನಿಜಕ್ಕೂ ತುಂಬಾ ಸಂತಸದ ವಿಚಾರವಾಗಿದೆ ಎಂದರು. ಮೋದಿಯವರ ನೇತೃತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.

Intro:
ಶಿರಸಿ :
ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಸುದ್ದಿಯಾಗುವ ಪ್ರಧಾನಿ ಮೋದಿ, ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಂಜುಗುಣಿಯ ಯುವಕ ನಾಗೆಂದ್ರ ಶೇಟ್ ಎಂಬುವವರಿಗೆ ಪತ್ರ ಬರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಅವರ ೬೯ ನೇ ಹುಟ್ಟು ಹಬ್ಬದ ನಿಮಿತ್ತ, ಪತ್ರ ಬರೆದು ಶುಭಾಶಯ ಕೋರಿದ್ದ ತಾಲೂಕಿನ ಮಂಜುಗುಣಿ ನಾಗೇಂದ್ರ ಸುರೇಶ್ ಶೇಟ್
ಅವರಿಗೆ ಪ್ರಧಾನಿ ನರೇಂದ್ರ ಮೋದಿ ಎರಡು ತಿಂಗಳ ಬಳಿಕೆ ಪ್ರತಿಕ್ರಿಯಿಸಿದ್ದು, ನೀವು ಕಳಿಸಿರುವ ಹುಟ್ಟು ಹಬ್ಬದ ಶುಭಾಶಯಗಳನ್ನು ನಾನು ಸ್ವೀಕರಿಸಿದ್ದೇನೆ. ಇದು ನಮ್ಮ ರಾಷ್ಟç ಸೇವೆಯಲ್ಲಿ ಶ್ರಮಿಸಲು ಒಂದು ಶತ ಕೋಟಿಗೂ ಅಧಿಕ ಜನರ ಮಿತಿಯಿಲ್ಲದ ವಾತ್ಸಲ್ಯ ಮತ್ತು ಕಾಳಜಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಒಂದು ಬಿಲಿಯನ್‌ಗೂ ಹೆಚ್ಚು ಜನರ ಆಶಯಗಳು ಮತ್ತು ಆಕಾಂಕ್ಷೆಗಳು ಹೊಸ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ನನ್ನನ್ನು ಅರ್ಪಿಸಲು ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತದೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದೆ. ನಿಮಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.

Body:
ಶ್ರೀಕ್ಷೇತ್ರ ಮಂಜುಗುಣಿ ದೇವಾಲಯದ ಮುಖ್ಯವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ, ಸಪ್ಟೆಂಬರ್ ೧೭ ರಂದು ಆಂಗ್ಲಭಾಷೆಯಲ್ಲಿ ಪತ್ರಮುಖೇನ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಶ್ರೀಕ್ಷೇತ್ರ ಮಂಜುಗುಣಿಗೆ ಭೇಟಿ ನೀಡುವಂತೆ ಅವರು ಆಹ್ವಾನಿಸಿದ್ದಾರೆ. ಜೊತೆಗೆ ಶ್ರೀದೇವರ ಕುಂಕುಮ ಪ್ರಸಾದವನ್ನೂ ಸಹ ಪತ್ರದ ಜೊತೆಗೆ ಅವರು ಕಳುಹಿಸಿದ್ದಾರೆ. ಪ್ರಧಾನಿ ಮೋದಿಯಿಂದ ಬಂದಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ಅವರು, ಸಾಮಾನ್ಯ ಜನತೆಯೊಂದಿಗೆ ವಯಕ್ತಿಕವಾಗಿ ಪ್ರಧಾನಿ ಸಂವಹನ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು, ಅವರ ನೇತೃತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದ್ದಾರೆ.

ಬೈಟ್ (೧) : ನಾಗೇಂದ್ರ ಶೇಟ್, ಪ್ರಧಾನಿ ಪತ್ರ ಪಡೆದವರು.
...........
ಸಂದೇಶ ಭಟ್ ಶಿರಸಿ Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.