ETV Bharat / state

ನಾಪತ್ತೆಯಾಗಿದ್ದ ವ್ಯಕ್ತಿ ಕುಡ್ಲೆ ಬೀಚ್​ನಲ್ಲಿ ಶವವಾಗಿ ಪತ್ತೆ

author img

By

Published : Dec 24, 2020, 6:26 PM IST

ಕೇರಳದಿಂದ ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪತ್ತೆಯಾಗಿದೆ.

missing-man-was-found-dead-at-cuddle-beach
ನಾಪತ್ತೆಯಾಗಿದ್ದ ವ್ಯಕ್ತಿ ಕುಡ್ಲೆ ಬೀಚ್​ನಲ್ಲಿ ಶವವಾಗಿ ಪತ್ತೆ

ಕಾರವಾರ(ಉತ್ತರ ಕನ್ನಡ): ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ವ್ಯಕ್ತಿ ಕುಡ್ಲೆ ಬೀಚ್​ನಲ್ಲಿ ಶವವಾಗಿ ಪತ್ತೆ

ಕೇರಳ ಮೂಲದ ವಿಶ್ವನಾಥ್ ಮೋಹನದಾಸ್ (28) ಮೃತ ವ್ಯಕ್ತಿ. ವಿಶ್ವನಾಥ್ ಮೋಹನದಾಸ್​ ಕಳೆದ ನಾಲ್ಕು ದಿನಗ‌ಳ ಹಿಂದೆ ಮೂವರು ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಆಗಮಿಸಿದ್ದು, ಎಲ್ಲರೂ ಖಾಸಗಿ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದರು. ಆದರೆ ವಿಶ್ವನಾಥ್​ ಬುಧವಾರ ರಾತ್ರಿ ವೇಳೆ ಬೀಚ್​ಗೆ ಇಳಿದಿದ್ದಾನೆ. ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆತನ ಸ್ನೇಹಿತರು ತಿಳಿಸಿದ್ದರು.

ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಆತನ ಶವ ಪತ್ತೆಯಾಗಿದ್ದು, ಶವದ ಮರಣೋತ್ತರ ಪರೀಕ್ಷೆ ನಡೆಸಿ ಕೇರಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್​​ಐ ನವೀನ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.

ಕಾರವಾರ(ಉತ್ತರ ಕನ್ನಡ): ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಪತ್ತೆಯಾಗಿದೆ.

ನಾಪತ್ತೆಯಾಗಿದ್ದ ವ್ಯಕ್ತಿ ಕುಡ್ಲೆ ಬೀಚ್​ನಲ್ಲಿ ಶವವಾಗಿ ಪತ್ತೆ

ಕೇರಳ ಮೂಲದ ವಿಶ್ವನಾಥ್ ಮೋಹನದಾಸ್ (28) ಮೃತ ವ್ಯಕ್ತಿ. ವಿಶ್ವನಾಥ್ ಮೋಹನದಾಸ್​ ಕಳೆದ ನಾಲ್ಕು ದಿನಗ‌ಳ ಹಿಂದೆ ಮೂವರು ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಆಗಮಿಸಿದ್ದು, ಎಲ್ಲರೂ ಖಾಸಗಿ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದರು. ಆದರೆ ವಿಶ್ವನಾಥ್​ ಬುಧವಾರ ರಾತ್ರಿ ವೇಳೆ ಬೀಚ್​ಗೆ ಇಳಿದಿದ್ದಾನೆ. ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಆತನ ಸ್ನೇಹಿತರು ತಿಳಿಸಿದ್ದರು.

ಇಂದು ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ಆತನ ಶವ ಪತ್ತೆಯಾಗಿದ್ದು, ಶವದ ಮರಣೋತ್ತರ ಪರೀಕ್ಷೆ ನಡೆಸಿ ಕೇರಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್​​ಐ ನವೀನ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.