ETV Bharat / state

ಅಡಿಕೆಯಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಅಂಶವಿದೆ : ಸಚಿವ ಆರ್​. ಶಂಕರ್

author img

By

Published : Feb 12, 2021, 10:37 PM IST

ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನಗಳು ಸಿದ್ಧವಾಗುತ್ತಿವೆ‌. ಅಲ್ಲದೆ, ಅಡಿಕೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸುತ್ತದೆ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ.

Minister R Shankar visits Sirsi Marikamba templ
ಸಚಿವ ಆರ್.ಶಂಕರ್

ಶಿರಸಿ : ಅಡಿಕೆಯಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಅಂಶಗಳೂ ಇವೆ. ಹೀಗಾಗಿ, ಬೆಳೆಗಾರರು ಅಡಿಕೆ ಕುರಿತ ಆಕ್ಷೇಪಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತೋಟಗಾರಿಕಾ ಇಲಾಖೆ ಸಚಿವ ಆರ್. ಶಂಕರ್ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿ, ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನಗಳು ಸಿದ್ಧವಾಗುತ್ತಿವೆ‌. ಅಲ್ಲದೆ, ಅಡಿಕೆಗೆ ಸದ್ಯ ಉತ್ತಮ ದರವಿದೆ, ರೈತರು ಸಂತಸದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಹಾನಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗಿದೆ ಎಂದರು.

ಸಚಿವ ಆರ್.ಶಂಕರ್

ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆ ಜೊತೆ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಬೇರೆ ಬೇರೆ ಇಲಾಖೆಗೆ ತೆರಳಿರುವ ರೇಷ್ಮೆ ಇಲಾಖೆ ನೌಕರರನ್ನು ಮಾತೃ ಇಲಾಖೆಗೆ ಕರೆತರಲಾಗುವುದು ಎಂದು ತಿಳಿಸಿದರು.

ಶಿರಸಿ : ಅಡಿಕೆಯಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಅಂಶಗಳೂ ಇವೆ. ಹೀಗಾಗಿ, ಬೆಳೆಗಾರರು ಅಡಿಕೆ ಕುರಿತ ಆಕ್ಷೇಪಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತೋಟಗಾರಿಕಾ ಇಲಾಖೆ ಸಚಿವ ಆರ್. ಶಂಕರ್ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿ, ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನಗಳು ಸಿದ್ಧವಾಗುತ್ತಿವೆ‌. ಅಲ್ಲದೆ, ಅಡಿಕೆಗೆ ಸದ್ಯ ಉತ್ತಮ ದರವಿದೆ, ರೈತರು ಸಂತಸದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಹಾನಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗಿದೆ ಎಂದರು.

ಸಚಿವ ಆರ್.ಶಂಕರ್

ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆ ಜೊತೆ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಬೇರೆ ಬೇರೆ ಇಲಾಖೆಗೆ ತೆರಳಿರುವ ರೇಷ್ಮೆ ಇಲಾಖೆ ನೌಕರರನ್ನು ಮಾತೃ ಇಲಾಖೆಗೆ ಕರೆತರಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.