ETV Bharat / state

ಜಮೀನಿಗೆ ಲಗ್ಗೆ ಇಟ್ಟ ಆನೆ ಹಿಂಡು.. ಅಪಾರ ಬೆಳೆ ಹಾನಿ:  ಆತಂಕದಲ್ಲಿ ಗ್ರಾಮಸ್ಥರು - ಸಿದ್ದಾಪುರ ಆನೆ ದಾಳಿ ಸುದ್ದಿ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾಲೂಕಿನ ಹಲವು ಪ್ರದೇಶಗಳ ರೈತರ ಜಮೀನಿಗೆ ಆನೆಗಳು ದಾಳಿ ನಡೆಸಿವೆ. ಕಳೆದ ಎರಡು ತಿಂಗಳಿನಿಂದ ಆನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

Elephant attack on farmland
ಆನೆ ಹಿಂಡಿನಿಂದ ಬೆಳೆ ಹಾನಿ
author img

By

Published : Jan 1, 2020, 5:50 PM IST

ಶಿರಸಿ(ಉತ್ತರ ಕನ್ನಡ) : ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಪ್ರದೇಶಗಳಲ್ಲಿ ಆನೆಗಳು ಹಿಂಡು-ಹಿಂಡಾಗಿ ದಾಳಿ ನಡೆಸಿ, ಸುಮಾರು ಇಪ್ಪತ್ತಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದೆ.

ತಾಲೂಕಿನ ಕಾನಸೂರು, ಗವಿನಗುಡ್ಡ, ಹಸರಗೋಡ ಹಾಗೂ ಅಮ್ಮಚ್ಚಿ ವ್ಯಾಪ್ತಿಯಲ್ಲಿ ಆನೆಗಳು ದಾಳಿ ನಡೆಸಿವೆ. ಕಳೆದ ಎರಡು ತಿಂಗಳಿನಿಂದ ಆನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಮೊದಲು ನಾಲ್ಕು ಆನೆಗಳಿದ್ದ ಹಿಂಡಿಗೆ ಮತ್ತೆ ಮೂರು ಆನೆಗಳು ಸೇರಿಕೊಂಡಿವೆ. ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಸಂಚರಿಸುತಿದ್ದು, ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಆನೆಗಳ ಹಿಂಡನ್ನು ಬನವಾಸಿ ಸರಹದ್ದಿನ ವ್ಯಾಪ್ತಿಗೆ ಅಟ್ಟಲು ಪ್ರಯತ್ನಿಸಿದ್ದಾರೆ. ಆದರೆ, ಫಲಕಾರಿಯಾಗಿಲ್ಲ.

ಆನೆ ಹಿಂಡಿನಿಂದ ಬೆಳೆ ಹಾನಿ

ಕಳೆದ ನಾಲ್ಕೈದು ದಿನಗಳಿಂದ ಕಾನಸೂರು, ಹಸರಗೋಡ ವ್ಯಾಪ್ತಿಯ ಗವಿನಗುಡ್ಡ, ಮಲುಬಾಳಗಾರ, ಕೀಲಾರ, ಹಾಲ್ಕಣಿ, ಆನೆಗುಂಡಿ, ಬಿಳೆಗೋಡ, ಕರಮನೆ ಸುತ್ತಲಿನ ಅಡಕೆ, ತೆಂಗು ಹಾಗೂ ಬಾಳೆ ತೋಟ, ಕಬ್ಬು ಹಾಗೂ ಭತ್ತದ ಗದ್ದೆಗಳಲ್ಲಿ ದಾಳಿ ನಡೆಸಿ ಬೆಳೆ ನಾಶವಾಗಿರುವುದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಆನೆ ಹಿಂಡು ಕಾಣಿಸಿಕೊಂಡಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕೂಡಾ ಆತಂಕದಲ್ಲಿ ಓಡಾಡುವಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಆನೆಗಳು ಸೊರಬಾ ತಾಲೂಕಿನಲ್ಲಿ ದಾಳಿ ಇಟ್ಟಿದ್ದವು .ಈ ಭಾಗದಿಂದ ಆನೆಗಳನ್ನು ಓಡಿಸಲಾಗಿತ್ತು. ನಂತರ ಬನವಾಸಿ ಭಾಗದಿಂದ ಸಿದ್ದಾಪುರ ಭಾಗಕ್ಕೆ ದಾಳಿ ಇಟ್ಟಿವೆ. ಒಟ್ಟು 6ಕ್ಕೂ ಅಧಿಕ ಆನೆಗಳು ಸಿದ್ದಾಪುರ, ಯಲ್ಲಾಪುರ, ಬನವಾಸಿ ಭಾಗದಲ್ಲಿ ಸಂಚಾರ ಮಾಡುತ್ತಿದೆ ಎನ್ನಲಾಗುತಿದ್ದು, ಆಹಾರ ಅರಸಿ ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದು ರೈತರನ್ನು ಭಯಭೀತರನ್ನಾಗಿಸಿದೆ.

ಶಿರಸಿ(ಉತ್ತರ ಕನ್ನಡ) : ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಪ್ರದೇಶಗಳಲ್ಲಿ ಆನೆಗಳು ಹಿಂಡು-ಹಿಂಡಾಗಿ ದಾಳಿ ನಡೆಸಿ, ಸುಮಾರು ಇಪ್ಪತ್ತಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದೆ.

ತಾಲೂಕಿನ ಕಾನಸೂರು, ಗವಿನಗುಡ್ಡ, ಹಸರಗೋಡ ಹಾಗೂ ಅಮ್ಮಚ್ಚಿ ವ್ಯಾಪ್ತಿಯಲ್ಲಿ ಆನೆಗಳು ದಾಳಿ ನಡೆಸಿವೆ. ಕಳೆದ ಎರಡು ತಿಂಗಳಿನಿಂದ ಆನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಮೊದಲು ನಾಲ್ಕು ಆನೆಗಳಿದ್ದ ಹಿಂಡಿಗೆ ಮತ್ತೆ ಮೂರು ಆನೆಗಳು ಸೇರಿಕೊಂಡಿವೆ. ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಸಂಚರಿಸುತಿದ್ದು, ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಆನೆಗಳ ಹಿಂಡನ್ನು ಬನವಾಸಿ ಸರಹದ್ದಿನ ವ್ಯಾಪ್ತಿಗೆ ಅಟ್ಟಲು ಪ್ರಯತ್ನಿಸಿದ್ದಾರೆ. ಆದರೆ, ಫಲಕಾರಿಯಾಗಿಲ್ಲ.

ಆನೆ ಹಿಂಡಿನಿಂದ ಬೆಳೆ ಹಾನಿ

ಕಳೆದ ನಾಲ್ಕೈದು ದಿನಗಳಿಂದ ಕಾನಸೂರು, ಹಸರಗೋಡ ವ್ಯಾಪ್ತಿಯ ಗವಿನಗುಡ್ಡ, ಮಲುಬಾಳಗಾರ, ಕೀಲಾರ, ಹಾಲ್ಕಣಿ, ಆನೆಗುಂಡಿ, ಬಿಳೆಗೋಡ, ಕರಮನೆ ಸುತ್ತಲಿನ ಅಡಕೆ, ತೆಂಗು ಹಾಗೂ ಬಾಳೆ ತೋಟ, ಕಬ್ಬು ಹಾಗೂ ಭತ್ತದ ಗದ್ದೆಗಳಲ್ಲಿ ದಾಳಿ ನಡೆಸಿ ಬೆಳೆ ನಾಶವಾಗಿರುವುದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಆನೆ ಹಿಂಡು ಕಾಣಿಸಿಕೊಂಡಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕೂಡಾ ಆತಂಕದಲ್ಲಿ ಓಡಾಡುವಂತಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಆನೆಗಳು ಸೊರಬಾ ತಾಲೂಕಿನಲ್ಲಿ ದಾಳಿ ಇಟ್ಟಿದ್ದವು .ಈ ಭಾಗದಿಂದ ಆನೆಗಳನ್ನು ಓಡಿಸಲಾಗಿತ್ತು. ನಂತರ ಬನವಾಸಿ ಭಾಗದಿಂದ ಸಿದ್ದಾಪುರ ಭಾಗಕ್ಕೆ ದಾಳಿ ಇಟ್ಟಿವೆ. ಒಟ್ಟು 6ಕ್ಕೂ ಅಧಿಕ ಆನೆಗಳು ಸಿದ್ದಾಪುರ, ಯಲ್ಲಾಪುರ, ಬನವಾಸಿ ಭಾಗದಲ್ಲಿ ಸಂಚಾರ ಮಾಡುತ್ತಿದೆ ಎನ್ನಲಾಗುತಿದ್ದು, ಆಹಾರ ಅರಸಿ ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದು ರೈತರನ್ನು ಭಯಭೀತರನ್ನಾಗಿಸಿದೆ.

Intro:ಶಿರಸಿ :
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು, ಗವಿನಗುಡ್ಡ ಹಸರಗೋಡ, ಅಮ್ಮಚ್ಚಿ ವ್ಯಾಪ್ತಿಯಲ್ಲಿ ಆನೆಗಳ ಹಿಂಡು ದಾಳಿ ನಡೆಸಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ಹಾನಿ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಆನೆಗಳ ಹಾವಳಿ ನಡೆದಿದ್ದು, ಅರಣ್ಯ ಇಲಾಖೆಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಮೊದಲು ನಾಲ್ಕು ಆನೆಗಳಿದ್ದ ಹಿಂಡು ಮತ್ತೆ ಮೂರು ಆನೆಗಳು ಸೇರಿಕೊಂಡಿವೆ. ಕಾನಸೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಆನೆಗಳು ಸಂಚರಿಸುತಿದ್ದು ಅರಣ್ಯಾಧಿಕಾರಿಗಳು, ಸಾರ್ವಜನಿಕರು ಆನೆಗಳ ಹಿಂಡನ್ನು ಬನವಾಸಿ ಸರಹದ್ದಿನ ವ್ಯಾಪ್ತಿಗೆ ಅಟ್ಟಲು ಪ್ರಯತ್ನಿಸಿದ್ದು ಆದರೆ ಫಲಕಾರಿಯಾಗಿಲ್ಲ.
ಕಳೆದ ನಾಲ್ಕೈದು ದಿನಗಳಿಂದ ಕಾನಸೂರು, ಹಸರಗೋಡ ವ್ಯಾಪ್ತಿಯ ಗವಿನಗುಡ್ಡ, ಮಲುಬಾಳಗಾರ, ಕೀಲಾರ, ಹಾಲ್ಕಣಿ, ಆನೆಗುಂಡಿ, ಬಿಳೆಗೋಡ, ಕರಮನೆ ಸುತ್ತಲಿನ ಅಡಕೆ, ತೆಂಗು ಹಾಗೂ ಬಾಳೆ ತೋಟ, ಕಬ್ಬು, ಭತ್ತದ ಗದ್ದೆಗಳಲ್ಲಿ ದಾಳಿ ನಡೆಸಿ ಬೆಳೆ ನಾಶವಾಗಿರುವುದರಿಂದ ರೈತರು ಆತಂಕದಲ್ಲಿ ಕಾಲಕಳೆಯುವಂತಾಗಿದೆ. ಆನೆ ಹಿಂಡು ಕಾಣಿಸಿಕೊಂಡಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕೂಡಾ ಆತಂಕದಲ್ಲಿ ಓಡಾಡುವಂತಾಗಿದೆ.

Body:ಕಳೆದ ಎರಡು ತಿಂಗಳ ಹಿಂದೆ ಆನೆಗಳು ಸೊರಬಾ ತಾಲೂಕಿನಲ್ಲಿ ದಾಳಿ ಇಟ್ಟಿದ್ದವು .ಈ ಭಾಗದಿಂದ ಆನೆಯನ್ನು ಓಡಿಸಲಾಗಿತ್ತು. ನಂತರ ಬನವಾಸಿ ಭಾಗದಿಂದ ಸಿದ್ದಾಪುರ ಭಾಗಕ್ಕೆ ದಾಳಿ ಇಟ್ಟಿವೆ. ಒಟ್ಟು 6 ಕ್ಕೂ ಅಧಿಕ ಆನೆಗಳು ಸಿದ್ದಾಪುರ ,ಯಲ್ಲಾಪುರ,ಬನವಾಸಿ ಭಾಗದಲ್ಲಿ ಸಂಚಾರ ಮಾಡುತ್ತಿದೆ ಎನ್ನಲಾಗುತಿದ್ದು ಆಹಾರ ಅರಸಿ ಕೃಷಿ ಭೂಮಿಗೆ ಲಗ್ಗೆ ಇಡುತಿದ್ದು ರೈತರನ್ನು ಭಯಭೀತರನ್ನಾಗಿಸಿದೆ.
...........
ಸಂದೇಶ ಭಟ್ ಶಿರಸಿ.‌Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.