ETV Bharat / state

ಕರಾವಳಿ, ಮಲೆನಾಡು ಭಾಗದಲ್ಲೂ ಕಾಡ್ಗಿಚ್ಚಿನ ಭೀತಿ - undefined

ತಾಪಮಾನ ಏರಿಕೆಯಾಗಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಕಾಡ್ಗಿಚ್ಚಿನ ಭೀತಿ ಎದುರಾಗಿದೆ. ಇತ್ತೀಚೆಗಷ್ಟೇ ಬಂಡೀಪುರ ಅರಣ್ಯ, ಉತ್ತರ ಕನ್ನಡದ ಕಾರವಾರ ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿ ಸಾವಿರಾರು ಮರ-ಗಿಡಗಳು ನಾಶವಾಗಿದ್ದವು.

ಕಾಡ್ಗಿಚ್ಚು
author img

By

Published : Apr 28, 2019, 6:45 PM IST

ಕಾರವಾರ: ಕೆಂಡದಂತಿರುವ ಉರಿಬಿಸಿಲಿಗೆ ಜನ-ಜಾನುವಾರುಗಳು ಕಂಗಾಲಾಗಿದ್ದಾರೆ. ಪಾರ್ಕ್ ಮಾಡಲಾಗಿದ್ದ ವಾಹನಗಳು ದಿಢೀರ್​​ ಬೆಂಕಿಗೆ ಆಹುತಿಯಾದ ನಿದರ್ಶನಗಳಿವೆ. ಕಳೆದ ತಿಂಗಳಷ್ಟೇ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿ ಪಡೆದಿತ್ತು. ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಭಾಗದಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.

ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು. ಅಷ್ಟೇ ಅಲ್ಲ, ಬೆಂಕಿಯ ಕೆನ್ನಾಲಿಗೆಗೆ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ವು. ಸದ್ಯ ಎಲ್ಲೆಡೆ ಬಿಸಿಲಿನ ಪ್ರಖರತೆ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಬದುಕಲಾಗದ ಪರಿಸ್ಥಿತಿ ಇದೆ. ಅದ್ರಲ್ಲೂ, ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಅಬ್ಬಾ, ಸೂರ್ಯನ ತಾಪಕ್ಕೆ ಜನ ಬಸವಳಿದಿದ್ದರೆ, ಇಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳು ಒಣಗಿ ನಿಂತಿವೆ. ಹೀಗಾಗಿ ಕಾಡ್ಗಿಚ್ಚಿನ ಆತಂಕ ಮನೆ ಮಾಡಿದೆ.

ಕಾರವಾರದ ಅರಣ್ಯ ಪ್ರದೇಶದಲ್ಲಿ ಹತ್ತಿದ್ದ ಬೆಂಕಿ

ತಿಂಗಳ ಹಿಂದಷ್ಟೇ, ಕಾರವಾರದ ಬಿಣಗಾ ಬಳಿ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 5 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ವಾರದ ಹಿಂದೆ ನಗರದ ಬೈತಖೋಲ್ ಬಂದರು ಬಳಿ ಅಗ್ನಿಯ ಕೆನ್ನಾಲಿಗೆ ಸುಮಾರು ನಾಲ್ಕೈದು ಎಕರೆಯಷ್ಟು ಕಾಡು ಪ್ರದೇಶವನ್ನು ಆಹುತಿ ಪಡೆದಿದೆ. ಬಳಿಕ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸ್ಥಳೀಯರೂ ಸೇರಿ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದಿದ್ದರು.

ಕರಾವಳಿ ಜನತೆಗೆ ಬಿರು ಬೇಸಿಗೆಯ ಧಗೆ ಒಂದೆಡೆಯಾದ್ರೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲುವ ಭಯ ಅವರನ್ನು ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ.

ಕಾರವಾರ: ಕೆಂಡದಂತಿರುವ ಉರಿಬಿಸಿಲಿಗೆ ಜನ-ಜಾನುವಾರುಗಳು ಕಂಗಾಲಾಗಿದ್ದಾರೆ. ಪಾರ್ಕ್ ಮಾಡಲಾಗಿದ್ದ ವಾಹನಗಳು ದಿಢೀರ್​​ ಬೆಂಕಿಗೆ ಆಹುತಿಯಾದ ನಿದರ್ಶನಗಳಿವೆ. ಕಳೆದ ತಿಂಗಳಷ್ಟೇ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿ ಪಡೆದಿತ್ತು. ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಭಾಗದಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.

ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು. ಅಷ್ಟೇ ಅಲ್ಲ, ಬೆಂಕಿಯ ಕೆನ್ನಾಲಿಗೆಗೆ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ವು. ಸದ್ಯ ಎಲ್ಲೆಡೆ ಬಿಸಿಲಿನ ಪ್ರಖರತೆ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಬದುಕಲಾಗದ ಪರಿಸ್ಥಿತಿ ಇದೆ. ಅದ್ರಲ್ಲೂ, ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಅಬ್ಬಾ, ಸೂರ್ಯನ ತಾಪಕ್ಕೆ ಜನ ಬಸವಳಿದಿದ್ದರೆ, ಇಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳು ಒಣಗಿ ನಿಂತಿವೆ. ಹೀಗಾಗಿ ಕಾಡ್ಗಿಚ್ಚಿನ ಆತಂಕ ಮನೆ ಮಾಡಿದೆ.

ಕಾರವಾರದ ಅರಣ್ಯ ಪ್ರದೇಶದಲ್ಲಿ ಹತ್ತಿದ್ದ ಬೆಂಕಿ

ತಿಂಗಳ ಹಿಂದಷ್ಟೇ, ಕಾರವಾರದ ಬಿಣಗಾ ಬಳಿ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 5 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ವಾರದ ಹಿಂದೆ ನಗರದ ಬೈತಖೋಲ್ ಬಂದರು ಬಳಿ ಅಗ್ನಿಯ ಕೆನ್ನಾಲಿಗೆ ಸುಮಾರು ನಾಲ್ಕೈದು ಎಕರೆಯಷ್ಟು ಕಾಡು ಪ್ರದೇಶವನ್ನು ಆಹುತಿ ಪಡೆದಿದೆ. ಬಳಿಕ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸ್ಥಳೀಯರೂ ಸೇರಿ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದಿದ್ದರು.

ಕರಾವಳಿ ಜನತೆಗೆ ಬಿರು ಬೇಸಿಗೆಯ ಧಗೆ ಒಂದೆಡೆಯಾದ್ರೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲುವ ಭಯ ಅವರನ್ನು ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ.

Intro:Body:

ಕಾರವಾರ: ಉರಿಬಿಸಿಲಿನ ತಾಪಕ್ಕೆ ಎಷ್ಟೋ ಕಡೆ ಅಗ್ನಿ ಅನಾಹುತಗಳು ಸಂಭವಿಸಿವೆ. ಪಾರ್ಕ್ ಮಾಡಲಾಗಿದ್ದ ವಾಹನಗಳು ದಿಢೀರನೆ ಬೆಂಕಿಗೆ ಆಹುತಿಯಾದ ನಿದರ್ಶನಗಳಿವೆ. ಕಳೆದ ತಿಂಗಳಷ್ಟೇ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹೊತ್ತಿದ ಕಿಡಿಯೊಂದು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿ ಪಡೆದಿತ್ತು. ಕಳೆದ ತಿಂಗಳಿಗೆ ಹೋಲಿಸಿದ್ರೆ, ಈಗ ಬಿಸಿಲಿನ ತಾಪ ಮತ್ತಷ್ಟು ಏರಿಕೆಯಾಗಿದ್ದು, ಕರಾವಳಿ ಭಾಗದಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗಿದೆ.





ಮೈಸೂರಿನ ಬಂಡಿಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದ್ದ ಭಾರಿ ಪ್ರಮಾಣದ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ನಿರ್ನಾಮ ಮಾಡಿತ್ತು. ಅಷ್ಟೇ ಅಲ್ಲ, ಬೆಂಕಿಯ ಕೆನ್ನಾಲಿಗೆಗೆ ವನ್ಯಮೃಗಗಳೂ ಪ್ರಾಣ ಕಳೆದುಕೊಂಡಿದ್ವು. ಸದ್ಯ ಎಲ್ಲೆಡೆ ಬಿಸಿಲಿನ ಪ್ರಖರತೆ ಜೋರಾಗಿದ್ದು, ಸೂರ್ಯನಿಗೆ ಮೈಯೊಡ್ಡಿ ಬದುಕಲಾಗದ ಪರಿಸ್ಥಿತಿ ಇದೆ. ಅದ್ರಲ್ಲೂ, ಕರಾವಳಿಯಾದ್ಯಂತ ಕಳೆದೆರಡು ತಿಂಗಳಿಂದ ಅಬ್ಬಾ, ಸೂರ್ಯನ ತಾಪ ಹೇಳತೀರದು. ಇಲ್ಲಿನ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳು ಒಣಗಿ ನಿಂತಿದ್ದು, ಜನರಲ್ಲಿ ಕಾಡ್ಗಿಚ್ಚಿನ ಆತಂಕ ಮನೆ ಮಾಡಿದೆ.





ತಿಂಗಳ ಹಿಂದಷ್ಟೇ, ಕಾರವಾರದ ಬಿಣಗಾ ಬಳಿ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 5 ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿತ್ತು. ವಾರದ ಹಿಂದೆ ನಗರದ ಬೈತಖೋಲ್ ಬಂದರು ಬಳಿ ಅಗ್ನಿಯ ಕೆನ್ನಾಲಿಗೆ ಸುಮಾರು ನಾಲ್ಕೈದು ಎಕರೆಯಷ್ಟು ಕಾಡು ಪ್ರದೇಶವನ್ನು ಆಹುತಿ ಪಡೆದಿದೆ. ಬಳಿಕ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸ್ಥಳೀಯರೂ ಸೇರಿ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದಿದ್ದರು. ಇದೀಗ ಇಂಥದ್ದೇ ಸ್ಥಿತಿ ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶವನ್ನು ಕಾಡುತ್ತಿದೆ.



ಏರುತ್ತಿರುವ ತಾಪಮಾನ ಹಾಗು ಕಾಡ್ಗಿಚ್ಚು ಭೀತಿಯ ಬಗ್ಗೆ ಕಾರವಾರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹೇಳಿದ್ದಿಷ್ಟು. 



ಕರಾವಳಿ ಜನತೆಗೆ ಬಿರು ಬೇಸಗೆಯ ಧಗೆ ಒಂದೆಡೆಯಾದ್ರೆ, ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲುವ ಭಯ ಅವರನ್ನು ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.