ETV Bharat / state

ಜಲ ತಾಂಡವ: ಭಾರಿ ಮಳೆಗೆ ಒಡೆಯಿತು ಮುಂಡಗೋಡದ ಚಿಗಳ್ಳಿ ಡ್ಯಾಮ್​! - Sirasi chigalli dam is hit

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿದೆ. ಆದ್ರೆ ಜನಪ್ರದೇಶಕ್ಕೆ ಯಾವುದೇ ತೊಂದರೆ ಆಗಿಲ್ಲ, ಕೃಷಿ ಭೂಮಿ ಮುಳುಗಡೆ ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ತಿಳಿಸಿದ್ದಾರೆ.

chigalli-dam-crash-at-sirisi
author img

By

Published : Aug 12, 2019, 1:09 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿದ್ದು, ಡ್ಯಾಮ್​ನ ಕೆಳ ಪ್ರದೇಶದ 5000 ಎಕರೆ ಕೃಷಿ ಭೂಮಿ ಮುಳುಗಡೆ ಆಗುವ ಭೀತಿ ಹೆಚ್ಚಿದೆ.

ಒಡೆಯಿತು ಮುಂಡಗೋಡದ ಚಿಗಳ್ಳಿ ಚೆಕ್ ಡ್ಯಾಮ್

ತುಂಬಾ ಹಳೆಯದಾದ ಚಿಗಳ್ಳಿ ಡ್ಯಾಮ್​ 2009 ರಲ್ಲೂ ಒಡೆದಿತ್ತು. ಈಗ ಎರಡನೇ ಬಾರಿ ಒಡೆದಿದ್ದು, ಚಿಗಳ್ಳಿ, ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆ ಆಗುವ ಸಾಧ್ಯತೆಯಿದೆ. ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಳ್ಳಿಯ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಹರೀಶ್, ಜನಪ್ರದೇಶಕ್ಕೆ ಯಾವುದೇ ತೊಂದರೆ ಇಲ್ಲ. ಕೃಷಿ ಭೂಮಿ ಮುಳುಗಡೆ ಆಗಲಿದೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳು ಸಹ ಸುತ್ತಮುತ್ತ ಇರುವುದರಿಂದ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದ್ದಾರೆ.

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿದ್ದು, ಡ್ಯಾಮ್​ನ ಕೆಳ ಪ್ರದೇಶದ 5000 ಎಕರೆ ಕೃಷಿ ಭೂಮಿ ಮುಳುಗಡೆ ಆಗುವ ಭೀತಿ ಹೆಚ್ಚಿದೆ.

ಒಡೆಯಿತು ಮುಂಡಗೋಡದ ಚಿಗಳ್ಳಿ ಚೆಕ್ ಡ್ಯಾಮ್

ತುಂಬಾ ಹಳೆಯದಾದ ಚಿಗಳ್ಳಿ ಡ್ಯಾಮ್​ 2009 ರಲ್ಲೂ ಒಡೆದಿತ್ತು. ಈಗ ಎರಡನೇ ಬಾರಿ ಒಡೆದಿದ್ದು, ಚಿಗಳ್ಳಿ, ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆ ಆಗುವ ಸಾಧ್ಯತೆಯಿದೆ. ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಳ್ಳಿಯ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಹರೀಶ್, ಜನಪ್ರದೇಶಕ್ಕೆ ಯಾವುದೇ ತೊಂದರೆ ಇಲ್ಲ. ಕೃಷಿ ಭೂಮಿ ಮುಳುಗಡೆ ಆಗಲಿದೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳು ಸಹ ಸುತ್ತಮುತ್ತ ಇರುವುದರಿಂದ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದ್ದಾರೆ.

Intro:ಶಿರಸಿ :
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರಿವ ಭಾರೀ ಮಳೆಗೆ ಮುಂಡಗೋಡಿನ ಚಿಗಳ್ಳಿ ಚಕ್ ಡ್ಯಾಮ್ ಒಡೆದಿದ್ದು, ಡ್ಯಾಂ ಕೆಳ ಪ್ರದೇಶದ 5000 ಎಕರೆ ಕೃಷಿ ಭೂಮಿ ಮುಳುಗಡೆ ಆಗುವ ಭೀತಿ ಹುಟ್ಟಿಸುವ ಎದುರಾಗಿದೆ.

Body:ತುಂಬಾ ಹಳೆಯದಾದ ಚಿಗಳ್ಳಿ ಡ್ಯಾಂ
2009 ರಲ್ಲಿ ಒಡೆದಿತ್ತು . ಈಗ ಎರಡನೇ ಬಾರಿ ಒಡೆದಿದ್ದು, ಚಿಗಳ್ಳಿ, ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆ ಆಗುವ ಸಾಧ್ಯತೆಯಿದೆ.

ತಹಶಿಲ್ದಾರರ್ ಸೇರಿದಂತೆ ರೆಸ್ಕೂ ಟೀಮ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಳ್ಳಿಗಳ ಜನರನ್ನು ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಹರೀಶ್,
ಜನಪ್ರದೆಶಕ್ಕೆ ಯಾವುದೇ ತೊಂದರೆ ಇಲ್ಲ. ಕೃಷಿ ಭೂಮಿ ಮುಳುಗಡೆ ಆಗಲಿದೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳೂ ಸುತ್ತಮುತ್ತ ಇರುವುದರಿಂದ ಯಾವುದೇ ತೊಂದರೆಗಳಿಲ್ಲ ಎಂದು ತಿಳಿಸಿದ್ದಾರೆ.
......‌‌‌
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.