ETV Bharat / state

ಅಂಗಡಿಯೊಳಗೆ ಅಕ್ರಮ ಪ್ರವೇಶ, ಜೀವ ಬೆದರಿಕೆ ಆರೋಪ: 6 ಜನರ ವಿರುದ್ಧ ದೂರು

author img

By

Published : Jun 12, 2020, 11:48 AM IST

ದೂರುದಾರನಾದ ತಾಲೂಕಿನ ಹೊಸಳ್ಳಿಯ ದೇವೇಂದ್ರ ಶೆಟ್ಟಿ ಅವರಿಗೆ ಸೇರಿದ ಅಂಗಡಿಯ ಬೀಗ ಒಡೆದ ಆರೋಪಿಗಳು, ಒಳಗಿದ್ದ 25 ಸಾವಿರ ಮೌಲ್ಯದ ವಸ್ತುಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ ಮತ್ತೊಮ್ಮೆ ಇಲ್ಲಿ ಬಂದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಂಗಡಿಗೆ ಅಕ್ರಮ ಪ್ರವೇಶಿಸಿ ಜೀವ ಬೆದರಿಕೆ ಆರೋಪ
ಅಂಗಡಿಗೆ ಅಕ್ರಮ ಪ್ರವೇಶಿಸಿ ಜೀವ ಬೆದರಿಕೆ ಆರೋಪ

ಶಿರಸಿ: ವ್ಯಕ್ತಿಯೊಬ್ಬರಿಗೆ ಸೇರಿದ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ತಾಲೂಕಿನ ಭೈರುಂಭೆ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಹಾಗೂ ಪಿಡಿಒ ಸೇರಿ ಒಟ್ಟು 6 ಜನರ ವಿರುದ್ಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ಅಕ್ರಮ ಪ್ರವೇಶಿಸಿ ಜೀವ ಬೆದರಿಕೆ ಆರೋಪ

ಭೈರುಂಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಿ ಶಂಕರ ಗೌಡ (38), ಪಿಡಿಒ ಜೈವೀರ ಭಟ್ಟ (55) ಹಾಗೂ ತಾಲೂಕಿನ ಬೆಳಲೆ ಗ್ರಾಮದ ನಾಗೇಶ ನಾಯ್ಕ, ಸಚಿನ್ ನಾಯ್ಕ, ರಾಘವೇಂದ್ರ ನಾಯ್ಕ ಹಾಗು ಮಹಾಂತೇಶ ನಾಯ್ಕ ಆರೋಪಿಗಳಾಗಿದ್ದಾರೆ.

ದೂರುದಾರನಾದ ತಾಲೂಕಿನ ಹೊಸಳ್ಳಿಯ ದೇವೇಂದ್ರ ಶೆಟ್ಟಿ ಅವರಿಗೆ ಸೇರಿದ ಅಂಗಡಿಯ ಬೀಗ ಒಡೆದ ಆರೋಪಿಗಳು, ಒಳಗಿದ್ದ 25 ಸಾವಿರ ಮೌಲ್ಯದ ವಸ್ತುಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ ಮತ್ತೊಮ್ಮೆ ಇಲ್ಲಿ ಬಂದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಿರಸಿ: ವ್ಯಕ್ತಿಯೊಬ್ಬರಿಗೆ ಸೇರಿದ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ, ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ತಾಲೂಕಿನ ಭೈರುಂಭೆ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಹಾಗೂ ಪಿಡಿಒ ಸೇರಿ ಒಟ್ಟು 6 ಜನರ ವಿರುದ್ಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ಅಕ್ರಮ ಪ್ರವೇಶಿಸಿ ಜೀವ ಬೆದರಿಕೆ ಆರೋಪ

ಭೈರುಂಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಿ ಶಂಕರ ಗೌಡ (38), ಪಿಡಿಒ ಜೈವೀರ ಭಟ್ಟ (55) ಹಾಗೂ ತಾಲೂಕಿನ ಬೆಳಲೆ ಗ್ರಾಮದ ನಾಗೇಶ ನಾಯ್ಕ, ಸಚಿನ್ ನಾಯ್ಕ, ರಾಘವೇಂದ್ರ ನಾಯ್ಕ ಹಾಗು ಮಹಾಂತೇಶ ನಾಯ್ಕ ಆರೋಪಿಗಳಾಗಿದ್ದಾರೆ.

ದೂರುದಾರನಾದ ತಾಲೂಕಿನ ಹೊಸಳ್ಳಿಯ ದೇವೇಂದ್ರ ಶೆಟ್ಟಿ ಅವರಿಗೆ ಸೇರಿದ ಅಂಗಡಿಯ ಬೀಗ ಒಡೆದ ಆರೋಪಿಗಳು, ಒಳಗಿದ್ದ 25 ಸಾವಿರ ಮೌಲ್ಯದ ವಸ್ತುಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ ಮತ್ತೊಮ್ಮೆ ಇಲ್ಲಿ ಬಂದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.