ETV Bharat / state

ಈ ಕರುಣಾಮಯಿಗೆ ನೂರಾರು ಮಕ್ಕಳು.. ಹೆತ್ತವರ ಪ್ರೀತಿ ಕಾಣದವಳು ಪ್ರಾಣಿಗಳಿಗೆ ಮಾತ್ರ ಹೆತ್ತಬ್ಬೆ!!

author img

By

Published : May 10, 2020, 2:07 PM IST

ಹೆತ್ತವರು ಬಾಲ್ಯದಿಂದಲೇ ಜತೆಗಿರಲಿಲ್ಲ. ಸಾಕಿ ಸಲುಹಿದ ಅಜ್ಜಿಯೂ ಕೊನೆಯುಸಿರೆಳೆದಾಗ ಆ ಹೆಣ್ಣು ಜೀವಕ್ಕೆ ಬಂಧು-ಬಳಗವಾಗಿದ್ದೇ ಮೂಕಪ್ರಾಣಿಗಳು. ತನ್ನ ನೋವಿಗೆ, ಕಷ್ಟಕ್ಕೆ ಖುಷಿಗೂ ಮೂಕ ಪ್ರಾಣಿಗಳ ಜತೆಗೆ ಸಂವಹನ ನಡೆಸ್ತಿದ್ದ ತಾಯಿ ಅವಳು. ಮನಸು ಮಗು ತರ ಇರುವ ಅದೇ ಮಹಾಮಾತೆಗೆ ಈಗ ನೂರಾರು ಮಕ್ಕಳಿವೆ. ಅವುಗಳನ್ನ ಸಾಕೋದರಲ್ಲಿಯೇ ಆಕೆಗೆ ಎಲ್ಲಿಲ್ಲದ ಖುಷಿ, ಜೀವನ ಸಾರ್ಥಕತೆ.

mothers day special
ಲತಾ ಹುಲುಸ್ವಾರ

ಕಾರವಾರ: ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲವೆಂದೇ ತಾಯಿ ಸೃಷ್ಟಿಸಿದನಂತೆ. ಆ ಮಾತು ಈ ಹೆತ್ತಬ್ಬೆ ನೋಡಿದ್ರೆ ನಿಜವೆನಿಸುತ್ತೆ. ಹೊನ್ನಾವರ ತಾಲೂಕಿನ ಅರೇ ಅಂಗಡಿಯ ತಾಯಿ ಲತಾ ಹುಲಸ್ವಾರ ಅವರಿಗೆ ಚಿಕ್ಕಂದಿನಿಂದಲೇ ಪ್ರಾಣಿಗಳೇ ಪ್ರಪಂಚ, ಬಂಧು-ಬಳಗ ಎಲ್ಲ. ಬೀದಿ ಬದಿ ಅನಾಥ ಪ್ರಾಣಿಗಳು ಕಂಡ್ರೆ ತನ್ನ ಹೆತ್ತ ಮಕ್ಕಳೇ ವೇದನೆ ಪಡ್ತಿವೆಯೇನೋ ಅನ್ನೋ ರೀತಿ ಬಾಧೆ ಪಡ್ತಾರೆ.

ಮಮತಾಮಯಿ, ಕರುಣಾಮಯಿ ಈ ತಾಯಿಗೆ ನೂರಾರು ಮಕ್ಕಳು..

ಮದುವೆ ಬಳಿಕ ಇವರು, ಅಪಘಾತವೋ ಇಲ್ಲ ಯಾರೋ ಬಿಟ್ಟು ಹೋದ ಅನಾಥ ಹಸು, ಎಮ್ಮೆ, ನಾಯಿ, ಬೆಕ್ಕುಗಳನ್ನು ಮನೆಗೆ ತಂದು ಆರೈಕೆ ಮಾಡ್ತಿದಾರೆ. ಬಿಡಾಡಿ ದನಗಳನ್ನು ಯಾರೋ ರಾತ್ರೋರಾತ್ರಿ ಸಾಗಿಸುವಾಗ ಮಗ ಲೋಹಿತ್ ಜೊತೆ ಸೇರಿ ರಕ್ಷಿಸಿದ್ದಾರೆ.‌ ತನ್ನ ಮಗನಂತೆಯೇ ಈ ಮೂಕ ಜೀವಿಗಳನ್ನ ಕಾಣ್ತಿದ್ದಾರೆ.

ಇವರೇನೂ ಶ್ರೀಮಂತರೇನು ಅಲ್ಲ.‌ ಅಡಿಕೆ, ಗೋಡಂಬಿ ವ್ಯಾಪಾರ ಮಾಡುವ ಮಗ ಲೋಹಿತ್​ನಿಂದಾಗಿ ಇವುಗಳನ್ನ ಸಾಕಲೆಂದೇ ಒಂದಿಷ್ಟು ಸಮಯ ಮೀಸಲಿಟ್ಟಿದಾರೆ. ಹಾಗಾಗಿ ಜಾಗವೇ ಇಲ್ಲದಂತೆ ಮನೆ ತುಂಬಾ ಪ್ರಾಣಿಗಳಿವೆ. ಹಾಗಾಗಿ ಪ್ರಾಣಿ ಸಾಕಲೆಂದೇ ಒಂದು ಮನೆ ಕಟ್ಟಿಸಲೂ ಮುಂದಾಗಿದ್ದಾರೆ. ಇವರನ್ನ ಕಂಡ್ರೆ ನೆರೆಹೊರೆಯವರಿಗೆ ಬಲು ಅಭಿಮಾನ.

ಇವುಗಳನ್ನ ಸಾಕಲು ನಿತ್ಯ ಸಾವಿರಾರು ರೂ. ಖರ್ಚು ಮಾಡ್ತಿದ್ದಾರೆ. 50ಕ್ಕೂ ಹೆಚ್ಚು ಹಸು, ಎಮ್ಮೆ, ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳು, ಕೋಳಿಗಳನ್ನ ಸಾಕುತ್ತಿರುವ ಲತಾ ಅವರಿಗೆ ಆರ್ಥಿಕ ನೆರವು ಬೇಕಿದೆ. ದಾನಿಗಳು ಮೊಬೈಲ್ ಸಂಖ್ಯೆ 8762421411 ಸಂಪರ್ಕಿಸಲೂ ಮನವಿ ಮಾಡಿದ್ದಾರೆ.

ಕಾರವಾರ: ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲವೆಂದೇ ತಾಯಿ ಸೃಷ್ಟಿಸಿದನಂತೆ. ಆ ಮಾತು ಈ ಹೆತ್ತಬ್ಬೆ ನೋಡಿದ್ರೆ ನಿಜವೆನಿಸುತ್ತೆ. ಹೊನ್ನಾವರ ತಾಲೂಕಿನ ಅರೇ ಅಂಗಡಿಯ ತಾಯಿ ಲತಾ ಹುಲಸ್ವಾರ ಅವರಿಗೆ ಚಿಕ್ಕಂದಿನಿಂದಲೇ ಪ್ರಾಣಿಗಳೇ ಪ್ರಪಂಚ, ಬಂಧು-ಬಳಗ ಎಲ್ಲ. ಬೀದಿ ಬದಿ ಅನಾಥ ಪ್ರಾಣಿಗಳು ಕಂಡ್ರೆ ತನ್ನ ಹೆತ್ತ ಮಕ್ಕಳೇ ವೇದನೆ ಪಡ್ತಿವೆಯೇನೋ ಅನ್ನೋ ರೀತಿ ಬಾಧೆ ಪಡ್ತಾರೆ.

ಮಮತಾಮಯಿ, ಕರುಣಾಮಯಿ ಈ ತಾಯಿಗೆ ನೂರಾರು ಮಕ್ಕಳು..

ಮದುವೆ ಬಳಿಕ ಇವರು, ಅಪಘಾತವೋ ಇಲ್ಲ ಯಾರೋ ಬಿಟ್ಟು ಹೋದ ಅನಾಥ ಹಸು, ಎಮ್ಮೆ, ನಾಯಿ, ಬೆಕ್ಕುಗಳನ್ನು ಮನೆಗೆ ತಂದು ಆರೈಕೆ ಮಾಡ್ತಿದಾರೆ. ಬಿಡಾಡಿ ದನಗಳನ್ನು ಯಾರೋ ರಾತ್ರೋರಾತ್ರಿ ಸಾಗಿಸುವಾಗ ಮಗ ಲೋಹಿತ್ ಜೊತೆ ಸೇರಿ ರಕ್ಷಿಸಿದ್ದಾರೆ.‌ ತನ್ನ ಮಗನಂತೆಯೇ ಈ ಮೂಕ ಜೀವಿಗಳನ್ನ ಕಾಣ್ತಿದ್ದಾರೆ.

ಇವರೇನೂ ಶ್ರೀಮಂತರೇನು ಅಲ್ಲ.‌ ಅಡಿಕೆ, ಗೋಡಂಬಿ ವ್ಯಾಪಾರ ಮಾಡುವ ಮಗ ಲೋಹಿತ್​ನಿಂದಾಗಿ ಇವುಗಳನ್ನ ಸಾಕಲೆಂದೇ ಒಂದಿಷ್ಟು ಸಮಯ ಮೀಸಲಿಟ್ಟಿದಾರೆ. ಹಾಗಾಗಿ ಜಾಗವೇ ಇಲ್ಲದಂತೆ ಮನೆ ತುಂಬಾ ಪ್ರಾಣಿಗಳಿವೆ. ಹಾಗಾಗಿ ಪ್ರಾಣಿ ಸಾಕಲೆಂದೇ ಒಂದು ಮನೆ ಕಟ್ಟಿಸಲೂ ಮುಂದಾಗಿದ್ದಾರೆ. ಇವರನ್ನ ಕಂಡ್ರೆ ನೆರೆಹೊರೆಯವರಿಗೆ ಬಲು ಅಭಿಮಾನ.

ಇವುಗಳನ್ನ ಸಾಕಲು ನಿತ್ಯ ಸಾವಿರಾರು ರೂ. ಖರ್ಚು ಮಾಡ್ತಿದ್ದಾರೆ. 50ಕ್ಕೂ ಹೆಚ್ಚು ಹಸು, ಎಮ್ಮೆ, ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳು, ಕೋಳಿಗಳನ್ನ ಸಾಕುತ್ತಿರುವ ಲತಾ ಅವರಿಗೆ ಆರ್ಥಿಕ ನೆರವು ಬೇಕಿದೆ. ದಾನಿಗಳು ಮೊಬೈಲ್ ಸಂಖ್ಯೆ 8762421411 ಸಂಪರ್ಕಿಸಲೂ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.