ಕಾರವಾರ: ಬ್ರಿಟನ್ನಿಂದ ಆಗಮಿಸಿದವರ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಇದ್ದು, ಎಲ್ಲರಿಗೂ ಕ್ವಾರಂಟೈನ್ ಇರಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಬ್ರಿಟನ್ನಿಂದ ವಾಪಸಾದವರ ಪಟ್ಟಿ ಪರಿಶೀಲಿಸಿದಾಗ ಬೇರೆ ಬೇರೆ ದಿನಾಂಕಗಳಂದು ಬಂದ ಒಟ್ಟು 12 ಮಂದಿ ಇರುವ ಬಗ್ಗೆ ಗೊತ್ತಾಗಿದೆ. ಈ ಪೈಕಿ ಮುಂಡಗೋಡದ 8, ದಾಂಡೇಲಿಯ 2 ಹಾಗೂ ಕುಮಟಾದ ಇಬ್ಬರು ಇದ್ದಾರೆ. ಆದರೆ, ಎಲ್ಲರೂ ಈ ಹಿಂದೆಯೇ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದೆ. ಇದೀಗ 12 ಮಂದಿಯನ್ನು ಮತ್ತೆ ಸಂಪರ್ಕಿಸಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು ಎಂದರು.
ಎಲ್ಲರಿಗೂ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಲು ಸೂಚಿಸಲಾಗುವುದು ಎಂದು ಹೇಳಿದರು.