ಉಡುಪಿ: ಕೊರೊನಾ ವೈರಸ್ ಕಾರಣ ಸಾಹಿತಿ ವೈದೇಹಿ(ಜಾನಕಿ ಶ್ರೀನಿವಾಸ ಮೂರ್ತಿ) ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲ್ಪಟ್ಟಿದೆ.
ಈ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬ್ರಹ್ಮಾವರದ ಹಂಗಾರಕಟ್ಟೆಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆದಿತ್ತು. ಇಡೀ ಜಿಲ್ಲಾದ್ಯಂತ ಆಮಂತ್ರಣ ಪತ್ರಿಕೆಯನ್ನು ವಿತರಿಸಿ, ಊಟದ ವ್ಯವಸ್ಥೆ, ಚಪ್ಪರ, ವೇದಿಕೆ ಎಲ್ಲವೂ ಸಿದ್ಧವಾಗಿತ್ತು. ಆದ್ರೆ ಕೊರೊನಾ ಸಂಬಂಧ ಸರ್ಕಾರದ ಆದೇಶದನ್ವಯ ಸಮ್ಮೇಳನವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.