ETV Bharat / state

ವಿದ್ಯಾರ್ಥಿನಿಯರ ದಾರಿ ತಪ್ಪಿಸುವವರು ಇನ್ನಾದರೂ ನಿಮ್ಮ ಕೆಲಸ ನಿಲ್ಲಿಸಿ: ಉಡುಪಿ ಕಾಲೇಜು ಪ್ರಾಶುಂಪಾಲರ ಆಗ್ರಹ

author img

By

Published : Feb 11, 2022, 8:49 PM IST

Updated : Feb 11, 2022, 9:38 PM IST

ಉಡುಪಿ ಕಾಲೇಜಿನಿಂದ ಆರಂಭವಾದ ಹಿಜಾಬ್​ ವಿವಾದ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿವಾದ ಆರಂಭವಾದ ಬಗ್ಗೆ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Udupi college principal Rudregowda statement on hijab controversy
ಉಡುಪಿ ಕಾಲೇಜು ಪ್ರಾಶುಂಪಾಲ ರುದ್ರೆಗೌಡ ಪ್ರತಿಕ್ರಿಯೆ

ಉಡುಪಿ: ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ನಿಮ್ಮ ಕೆಲಸ ನಿಲ್ಲಿಸಿ ಎಂದು ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಮನವಿ ಮಾಡಿದ್ದಾರೆ.

ಉಡುಪಿ ಕಾಲೇಜು ಪ್ರಾಶುಂಪಾಲರಾದ ರುದ್ರೇಗೌಡ ಪ್ರತಿಕ್ರಿಯೆ

ಕಾಲೇಜಿನ ಶಿಸ್ತಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿದೆ. ಈ ಕುರಿತಂತೆ ಅವರಿಗೆ, ಪೋಷಕರಿಗೆ ತಿಳಿ ಹೇಳಿದ್ದೇವೆ. ಆದರೆ, ಅವರ ಅಶಿಸ್ತಿನ ವರ್ತನೆಯನ್ನು ತಾಳ್ಮೆಯಿಂದ ಕಾಲೇಜಿನ ಆಡಳಿತ ಮಂಡಳಿ ಸಹಿಸಿಕೊಂಡು ಬಂದಿದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ನಮ್ಮ ಕಾಲೇಜಿನಲ್ಲಿದ್ದಾರೆ. ಅದರಲ್ಲಿ 100 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಈ ನಾಲ್ಕು ವಿದ್ಯಾರ್ಥಿನಿಯರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನಾವು ತರಗತಿಯಲ್ಲಿ ಹಿಜಾಬ್​- ಬುರ್ಕಾಗೆ ಅನುಮತಿ ನೀಡಿದ್ದೆವು ಎಂದರು.

ನಮ್ಮ ಕಾಲೇಜ್ ಕ್ಯಾಂಪಸ್​​​​ನೊಳಗೆ ಎಬಿವಿಪಿ, ಸಿಎಫ್​​​ಐಗೆ ಪ್ರವೇಶ ಇಲ್ಲ. ನಾವು ಯಾವುದೇ ಸಂಘಟನೆಯನ್ನು ಎಂಟರ್ಟೈನ್ ಮಾಡೋದಿಲ್ಲ. ಶಿಸ್ತಿನಲ್ಲಿ ಇದ್ದ ಕಾಲೇಜಿನಲ್ಲಿ ಅಶಿಸ್ತು ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜು ಚರ್ಚೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಗಲಭೆ, ಗಲಾಟೆ, ಅಶಿಸ್ತು ಇಲ್ಲದೇ ಸಂಸ್ಥೆ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿನಿಯರು ಯಾವುದೇ ಭಯವಿಲ್ಲದೇ ಶಿಸ್ತಿನಿಂದ ಕಾಲೇಜಿನಲ್ಲಿ ಪಾಠ - ಪ್ರವಚನ ನಡೆಸುತ್ತಿದ್ದರು. ಆದರೆ, ಕಳೆದೊಂದು ತಿಂಗಳಿಂದ ನಮ್ಮ ಸಂಸ್ಥೆಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಬೇಸರದ ಸಂಗತಿ ಎಂದರು.

ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ಅವರನ್ನು ಮಕ್ಕಳಂತೆ ನೋಡಿಕೊಂಡಿದ್ದೇವೆ. ವಿದ್ಯಾರ್ಥಿಯರು ಮಾಧ್ಯಮಗಳಲ್ಲಿ ಯಾವುದೇ ಆರೋಪ ಮಾಡಿದರು. ನಾವು ತೆಲೆಗೆ ತೆಗೆದುಕೊಳ್ಳಲಿಲ್ಲ. ಅವರು ನಮ್ಮ ಮಕ್ಕಳೆ, ಅವರ ಬಗ್ಗೆ ನಮಗೆ ಅನುಕಂಪ ಇದೆ. ಅವರು ಅಮಾಯಕರು. ಅವರ ಹಿಂದೆ ಇದ್ದು ದಾರಿ ತಪ್ಪಿಸುವ ಕೆಲಸ ಮಾಡಿದ್ದರೆ ನಿಲ್ಲಿಸಲಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: 49 weds 18: ಮಗಳ ವಯಸ್ಸಿನ ಹುಡುಗಿ ಜೊತೆ ವಿವಾಹವಾದ ಪಾಕಿಸ್ತಾನ ಸಂಸದ!!

ಉಡುಪಿ: ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ನಿಮ್ಮ ಕೆಲಸ ನಿಲ್ಲಿಸಿ ಎಂದು ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಮನವಿ ಮಾಡಿದ್ದಾರೆ.

ಉಡುಪಿ ಕಾಲೇಜು ಪ್ರಾಶುಂಪಾಲರಾದ ರುದ್ರೇಗೌಡ ಪ್ರತಿಕ್ರಿಯೆ

ಕಾಲೇಜಿನ ಶಿಸ್ತಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿದೆ. ಈ ಕುರಿತಂತೆ ಅವರಿಗೆ, ಪೋಷಕರಿಗೆ ತಿಳಿ ಹೇಳಿದ್ದೇವೆ. ಆದರೆ, ಅವರ ಅಶಿಸ್ತಿನ ವರ್ತನೆಯನ್ನು ತಾಳ್ಮೆಯಿಂದ ಕಾಲೇಜಿನ ಆಡಳಿತ ಮಂಡಳಿ ಸಹಿಸಿಕೊಂಡು ಬಂದಿದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ನಮ್ಮ ಕಾಲೇಜಿನಲ್ಲಿದ್ದಾರೆ. ಅದರಲ್ಲಿ 100 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಈ ನಾಲ್ಕು ವಿದ್ಯಾರ್ಥಿನಿಯರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನಾವು ತರಗತಿಯಲ್ಲಿ ಹಿಜಾಬ್​- ಬುರ್ಕಾಗೆ ಅನುಮತಿ ನೀಡಿದ್ದೆವು ಎಂದರು.

ನಮ್ಮ ಕಾಲೇಜ್ ಕ್ಯಾಂಪಸ್​​​​ನೊಳಗೆ ಎಬಿವಿಪಿ, ಸಿಎಫ್​​​ಐಗೆ ಪ್ರವೇಶ ಇಲ್ಲ. ನಾವು ಯಾವುದೇ ಸಂಘಟನೆಯನ್ನು ಎಂಟರ್ಟೈನ್ ಮಾಡೋದಿಲ್ಲ. ಶಿಸ್ತಿನಲ್ಲಿ ಇದ್ದ ಕಾಲೇಜಿನಲ್ಲಿ ಅಶಿಸ್ತು ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜು ಚರ್ಚೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಗಲಭೆ, ಗಲಾಟೆ, ಅಶಿಸ್ತು ಇಲ್ಲದೇ ಸಂಸ್ಥೆ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿನಿಯರು ಯಾವುದೇ ಭಯವಿಲ್ಲದೇ ಶಿಸ್ತಿನಿಂದ ಕಾಲೇಜಿನಲ್ಲಿ ಪಾಠ - ಪ್ರವಚನ ನಡೆಸುತ್ತಿದ್ದರು. ಆದರೆ, ಕಳೆದೊಂದು ತಿಂಗಳಿಂದ ನಮ್ಮ ಸಂಸ್ಥೆಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಬೇಸರದ ಸಂಗತಿ ಎಂದರು.

ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ಅವರನ್ನು ಮಕ್ಕಳಂತೆ ನೋಡಿಕೊಂಡಿದ್ದೇವೆ. ವಿದ್ಯಾರ್ಥಿಯರು ಮಾಧ್ಯಮಗಳಲ್ಲಿ ಯಾವುದೇ ಆರೋಪ ಮಾಡಿದರು. ನಾವು ತೆಲೆಗೆ ತೆಗೆದುಕೊಳ್ಳಲಿಲ್ಲ. ಅವರು ನಮ್ಮ ಮಕ್ಕಳೆ, ಅವರ ಬಗ್ಗೆ ನಮಗೆ ಅನುಕಂಪ ಇದೆ. ಅವರು ಅಮಾಯಕರು. ಅವರ ಹಿಂದೆ ಇದ್ದು ದಾರಿ ತಪ್ಪಿಸುವ ಕೆಲಸ ಮಾಡಿದ್ದರೆ ನಿಲ್ಲಿಸಲಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: 49 weds 18: ಮಗಳ ವಯಸ್ಸಿನ ಹುಡುಗಿ ಜೊತೆ ವಿವಾಹವಾದ ಪಾಕಿಸ್ತಾನ ಸಂಸದ!!

Last Updated : Feb 11, 2022, 9:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.