ಉಡುಪಿ: ಶ್ರೀ ಕ್ರಷ್ಣನಿಗೆ ಅದಮಾರು ಶ್ರೀಗಳಿಂದ ಸುವರ್ಣ ಛತ್ರ ಅರ್ಪಣೆ ಕಾರ್ಯಕ್ರಮ ನಡೆಯಿತು.
ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಂಕಲ್ಪದಂತೆ, 50 ಲಕ್ಷ ರೂಪಾಯಿ ವೆಚ್ಚದ 2.5 ಕೆ.ಜಿ ಚಿನ್ನದಿಂದ ನಿರ್ಮಿಸಿದ "ಸುವರ್ಣ ಛತ್ರ" ವನ್ನು ಅಷ್ಟಮಠಾಧೀಶರೊಡಗೂಡಿ ಪರ್ಯಾಯ ಶ್ರೀಪಾದರು ಶ್ರೀಕೃಷ್ಣ ದೇವರಿಗೆ ಅರ್ಪಿಸಿದರು.