ಉಡುಪಿ: ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ಕಾರ್ಕಳ ಕಸಬಾ ಗ್ರಾಮದ ಸಾಲ್ಮರದಲ್ಲಿ ಬುಧವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಾಲ್ಮರ ಗೋಪಾಲಕೃಷ್ಣ ಲೇನ್ ನಿವಾಸಿ ಅರವಿಂದ ಶೆಣೈ ಅವರ ಪತ್ನಿ ಚೈತ್ರಾ (27) ಹಾಗೂ ಪುತ್ರ ಅಥರ್ವ (3) ನಾಪತ್ತೆಯಾದವರು.
ಬುಧವಾರ ಸಂಜೆ ಮನೆಯಿಂದ ತೆರಳಿದ್ದ ತಾಯಿ, ಮಗು ವಾಪಸ್ ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ. ಇನ್ನು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.