ETV Bharat / state

ತುಮಕೂರು : ವಿದ್ಯುತ್ ತಂತಿ ತುಂಡಾಗಿ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿ 4 ಎಮ್ಮೆ ಸಾವು..

author img

By

Published : Aug 23, 2021, 8:53 PM IST

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ವೃತ್ತ ಪೊಲೀಸ್ ನಿರೀಕ್ಷಕ ರಾಮಕೃಷ್ಣಯ್ಯ, ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಎಮ್ಮೆ
ಎಮ್ಮೆ

ತುಮಕೂರು : ವಿದ್ಯುತ್ ತಂತಿ ತುಂಡಾಗಿ ಮೇಲೆ ಬಿದ್ದ ಪರಿಣಾಮ ನಾಲ್ಕು ಎಮ್ಮೆಗಳು ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊರಟಗೆರೆ ತಾಲೂಕಿನ ಚಿಕ್ಕ ಸಾಗ್ಗೆರೆಯಲ್ಲಿ ನಡೆದಿದೆ. ಗೌರಮ್ಮ(50) ಎಂಬುವರು ಮೃತ ಮಹಿಳೆ.

ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಹಾಗೂ ನಾಲ್ಕು ಎಮ್ಮೆ ಸಾವು..

ಮೃತ ಎಮ್ಮೆಗಳು ಚೋಳಪ್ಪ ಎಂಬುವರ ಹೊಲದಲ್ಲಿ ಮೇಯುತ್ತಿದ್ದವು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ತಂತಿ ತುಂಡಾಗಿ ಎಮ್ಮೆಗಳ ಮೇಲೆ ಬಿದ್ದು, ಒದ್ದಾಡುತ್ತಿದ್ದವು. ಎಮ್ಮೆಗಳು ಒದ್ದಾಡುತ್ತಿರುವುದನ್ನು ಗಮನಿಸಿದ ಗೌರಮ್ಮ, ಏನಾಗಿದೆ ಎಂದು ಹತ್ತಿರ ಹೋಗಿ ನೋಡಿದ್ದಾಳೆ. ಆಗ ವಿದ್ಯುತ್ ತಂತಿ ಸ್ಪರ್ಶಿಸಿ ಆಕೆಯೂ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಚೋಳಪ್ಪ ಎಂಬುವರ ಜಮೀನಿನಲ್ಲಿ ತೋಟಕ್ಕೆ ಅಳವಡಿಸಿದ್ದ ಸುಮಾರು‌ 11,000 ಕೀ.ವ್ಯಾಟ್ ವಿದ್ಯುತ್ ತಂತಿ ಅನೇಕ ದಿನಗಳಿಂದ ಬಾಗಿತ್ತು. ಇಂದು ಏಕಾಏಕಿ ತುಂಡಾಗಿ ಬಿದ್ದು‌ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಮೂಗ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ವೃತ್ತ ಪೊಲೀಸ್ ನಿರೀಕ್ಷಕ ರಾಮಕೃಷ್ಣಯ್ಯ, ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು : ವಿದ್ಯುತ್ ತಂತಿ ತುಂಡಾಗಿ ಮೇಲೆ ಬಿದ್ದ ಪರಿಣಾಮ ನಾಲ್ಕು ಎಮ್ಮೆಗಳು ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊರಟಗೆರೆ ತಾಲೂಕಿನ ಚಿಕ್ಕ ಸಾಗ್ಗೆರೆಯಲ್ಲಿ ನಡೆದಿದೆ. ಗೌರಮ್ಮ(50) ಎಂಬುವರು ಮೃತ ಮಹಿಳೆ.

ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಹಾಗೂ ನಾಲ್ಕು ಎಮ್ಮೆ ಸಾವು..

ಮೃತ ಎಮ್ಮೆಗಳು ಚೋಳಪ್ಪ ಎಂಬುವರ ಹೊಲದಲ್ಲಿ ಮೇಯುತ್ತಿದ್ದವು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ತಂತಿ ತುಂಡಾಗಿ ಎಮ್ಮೆಗಳ ಮೇಲೆ ಬಿದ್ದು, ಒದ್ದಾಡುತ್ತಿದ್ದವು. ಎಮ್ಮೆಗಳು ಒದ್ದಾಡುತ್ತಿರುವುದನ್ನು ಗಮನಿಸಿದ ಗೌರಮ್ಮ, ಏನಾಗಿದೆ ಎಂದು ಹತ್ತಿರ ಹೋಗಿ ನೋಡಿದ್ದಾಳೆ. ಆಗ ವಿದ್ಯುತ್ ತಂತಿ ಸ್ಪರ್ಶಿಸಿ ಆಕೆಯೂ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಚೋಳಪ್ಪ ಎಂಬುವರ ಜಮೀನಿನಲ್ಲಿ ತೋಟಕ್ಕೆ ಅಳವಡಿಸಿದ್ದ ಸುಮಾರು‌ 11,000 ಕೀ.ವ್ಯಾಟ್ ವಿದ್ಯುತ್ ತಂತಿ ಅನೇಕ ದಿನಗಳಿಂದ ಬಾಗಿತ್ತು. ಇಂದು ಏಕಾಏಕಿ ತುಂಡಾಗಿ ಬಿದ್ದು‌ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಮೂಗ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ವೃತ್ತ ಪೊಲೀಸ್ ನಿರೀಕ್ಷಕ ರಾಮಕೃಷ್ಣಯ್ಯ, ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.