ETV Bharat / state

ರೈತರೇ ಅಗ್ನಿ ಅವಘಡಗಳಿಂದ ದೂರ ಇರೋದು ಹೇಗೆ ಗೊತ್ತಾ?  ಇಲ್ಲಿದೆ ಟಿಪ್ಸ್​

ಬೇಸಿಗೆ ಬಂತೆಂದ್ರೆ ಅಗ್ನಿ ಅವಘಡಗಳು ಹೆಚ್ಚಗಾತೊಡಗುತ್ತವೆ. ಅದ್ರಲ್ಲೂ ಇಂತಹ ಅವಘಡಗಳಿಂದ ಹೆಚ್ಚಾಗಿ ನಷ್ಟ ಹೊಂದುವುದು ರೈತಾಪಿ ವರ್ಗ. ತುಮಕೂರು ಜಿಲ್ಲೆಯಲ್ಲೂ ಈ ಬಾರಿ ಕಳೆದ ಬಾರಿಗಿಂತ ಅಪಾರ ಪ್ರಮಾಣದಲ್ಲಿ ದವಸ ಧಾನ್ಯದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ.

author img

By

Published : May 30, 2019, 10:03 PM IST

Tumkur

ತುಮಕೂರು: ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಗುಡಿಸಲು, ಬಣವೆ, ಬೇಲಿ, ತೋಟಗಳಲ್ಲಿನ ಅಗ್ನಿ ಅವಘಡಗಳು ಹೇರಳವಾಗಿ ಸಂಭವಿಸಿವೆ. ಈ ವರ್ಷದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಹೆಚ್ಚು.

Tumkur
ಒಣಹುಲ್ಲಿಗೆ ಬೆಂಕಿ ಹತ್ತಿರುವುದು

ಜನವರಿ ತಿಂಗಳಿನಿಂದ ಈವರೆಗೆ 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರೋ ಪ್ರಕರಣಗಳು ದಾಖಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ತುರುವೇಕೆರೆ ತಾಲೂಕಿನ ಸಂಕಲಾಪುರದಲ್ಲಿ ಬಣವೆಗಳಿಗೆ ಒಂದಾದರೊಂದಂತೆ ಬೆಂಕಿ ಹೊತ್ತಿಕೊಂಡು ಸುಮಾರು 10 ಬಣವೆಗಳು ಒಂದೇ ಬಾರಿ ಸುಟ್ಟು ಭಸ್ಮವಾಗಿವೆ. ತೇವಾಂಶ ಇದ್ದ ವೇಳೆಯಲ್ಲಿಯೇ ಬೆಳೆಯನ್ನು ಬಣವೆಗಳಿಗೆ ಹಾಕಲಾಗುತ್ತಿದೆ. ಇದ್ರಿಂದ ಉಷ್ಣಾಂಶ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಅಗ್ನಿ ಅವಘಡಗಳ ಸಂಖ್ಯೆ

ಬೆಂಕಿಯಿಂದ ಬಣವೆ ರಕ್ಷಣೆ ಹೇಗೆ?

ಪೂರ್ಣವಾಗಿ ಒಣಗಿಸಿ ಹುಲ್ಲನ್ನು ಬಣವೆಗಳಿಗೆ ಹಾಕಬೇಕು. ಬಣವೆಯ ಎತ್ತರ 6 ಅಡಿಗಿಂತ ಹೆಚ್ಚು ಇರಬಾರದು. 20 ಟನ್ ಹೆಚ್ಚು ಇರದಂತೆ ರೈತರು ನೋಡಿಕೊಳ್ಳಬೇಕು. 20 ಮೀಟರ್ ಅಂತರದಲ್ಲಿ ಬಣವೆಗಳನ್ನು ನಿರ್ಮಿಸಬೇಕು. ಬಣವೆಗಳ ಒಳಗಡೆ ಎರಡು ಕಡೆ ಬಿದಿರನ್ನು ಹಾಕಬೇಕು ಇದ್ರಿಂದ ಬಣವೆಗಳಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಜಿಲ್ಲಾ ಅಗ್ನಿ ಶಾಮಕ ಠಾಣೆ ಜಿಲ್ಲಾ ಅಧಿಕಾರಿ ಮಾಲಿಂಗಪ್ಪ ಲಂಗೋಟಿ.

2018 ರಲ್ಲಿ ಜಿಲ್ಲೆಯಲ್ಲಿ 29 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು ಈ ವರ್ಷ ಜನವರಿಯಿಂದ ಇದುವರೆಗೆ 13 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ಹೋದ ವರ್ಷ 14 ಕಾರ್ಖಾನೆಗಳಿಗೆ ಬೆಂಕಿ ತಗುಲಿದ್ದರೆ ಈ ವರ್ಷ ಈಗಾಗಲೇ 11 ಕಾರ್ಖಾನೆಗಳಿಗೆ ಬೆಂಕಿ ತಗುಲಿದೆ. ಕೃಷಿಗೆ ಸಂಬಂಧಿಸಿದಂತೆ ಈ ವರ್ಷ ಈಗಾಗಲೇ 150 ಕ್ಕೂ ಹೆಚ್ಚು ಅಗ್ನಿ ಆಕಸ್ಮಿಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ತುಮಕೂರು: ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಗುಡಿಸಲು, ಬಣವೆ, ಬೇಲಿ, ತೋಟಗಳಲ್ಲಿನ ಅಗ್ನಿ ಅವಘಡಗಳು ಹೇರಳವಾಗಿ ಸಂಭವಿಸಿವೆ. ಈ ವರ್ಷದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಹೆಚ್ಚು.

Tumkur
ಒಣಹುಲ್ಲಿಗೆ ಬೆಂಕಿ ಹತ್ತಿರುವುದು

ಜನವರಿ ತಿಂಗಳಿನಿಂದ ಈವರೆಗೆ 150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರೋ ಪ್ರಕರಣಗಳು ದಾಖಲಾಗಿದೆ. ಈ ಬಾರಿ ಬೇಸಿಗೆಯಲ್ಲಿ ತುರುವೇಕೆರೆ ತಾಲೂಕಿನ ಸಂಕಲಾಪುರದಲ್ಲಿ ಬಣವೆಗಳಿಗೆ ಒಂದಾದರೊಂದಂತೆ ಬೆಂಕಿ ಹೊತ್ತಿಕೊಂಡು ಸುಮಾರು 10 ಬಣವೆಗಳು ಒಂದೇ ಬಾರಿ ಸುಟ್ಟು ಭಸ್ಮವಾಗಿವೆ. ತೇವಾಂಶ ಇದ್ದ ವೇಳೆಯಲ್ಲಿಯೇ ಬೆಳೆಯನ್ನು ಬಣವೆಗಳಿಗೆ ಹಾಕಲಾಗುತ್ತಿದೆ. ಇದ್ರಿಂದ ಉಷ್ಣಾಂಶ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಅಗ್ನಿ ಅವಘಡಗಳ ಸಂಖ್ಯೆ

ಬೆಂಕಿಯಿಂದ ಬಣವೆ ರಕ್ಷಣೆ ಹೇಗೆ?

ಪೂರ್ಣವಾಗಿ ಒಣಗಿಸಿ ಹುಲ್ಲನ್ನು ಬಣವೆಗಳಿಗೆ ಹಾಕಬೇಕು. ಬಣವೆಯ ಎತ್ತರ 6 ಅಡಿಗಿಂತ ಹೆಚ್ಚು ಇರಬಾರದು. 20 ಟನ್ ಹೆಚ್ಚು ಇರದಂತೆ ರೈತರು ನೋಡಿಕೊಳ್ಳಬೇಕು. 20 ಮೀಟರ್ ಅಂತರದಲ್ಲಿ ಬಣವೆಗಳನ್ನು ನಿರ್ಮಿಸಬೇಕು. ಬಣವೆಗಳ ಒಳಗಡೆ ಎರಡು ಕಡೆ ಬಿದಿರನ್ನು ಹಾಕಬೇಕು ಇದ್ರಿಂದ ಬಣವೆಗಳಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಜಿಲ್ಲಾ ಅಗ್ನಿ ಶಾಮಕ ಠಾಣೆ ಜಿಲ್ಲಾ ಅಧಿಕಾರಿ ಮಾಲಿಂಗಪ್ಪ ಲಂಗೋಟಿ.

2018 ರಲ್ಲಿ ಜಿಲ್ಲೆಯಲ್ಲಿ 29 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು ಈ ವರ್ಷ ಜನವರಿಯಿಂದ ಇದುವರೆಗೆ 13 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ಹೋದ ವರ್ಷ 14 ಕಾರ್ಖಾನೆಗಳಿಗೆ ಬೆಂಕಿ ತಗುಲಿದ್ದರೆ ಈ ವರ್ಷ ಈಗಾಗಲೇ 11 ಕಾರ್ಖಾನೆಗಳಿಗೆ ಬೆಂಕಿ ತಗುಲಿದೆ. ಕೃಷಿಗೆ ಸಂಬಂಧಿಸಿದಂತೆ ಈ ವರ್ಷ ಈಗಾಗಲೇ 150 ಕ್ಕೂ ಹೆಚ್ಚು ಅಗ್ನಿ ಆಕಸ್ಮಿಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

Intro:ಬೇಸಿಗೆಯ ಬಿಸಿ….ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರೋ ಅಗ್ನಿ ಅವಘಡಗಳ ಸಂಖ್ಯೆ…..

ತುಮಕೂರು ಜಿಲ್ಲೆಯಲ್ಲಿ ಬೇಸಿಗೆ ಬಂತೆಂದ್ರೆ ಅಗ್ನಿ ಅವಘಡಗಳು ಹೆಚ್ಚ ತೊಡಗುತ್ತವೆ. ಅದ್ರಲ್ಲೂ ಇಂತಹ ಅವಘಡಗಳಿಂದ ಹೆಚ್ಚಾಗಿ ನಷ್ಟ ಹೊಂದುವುದು ರೈತಾಪಿ ವಗಱದವರು. ಹೌದು ಜಿಲ್ಲೆಯಲ್ಲಿ ಈ ಬಾರಿ ಕಳೆದ ಬಾರಿಗಿಂತ ಅಪಾರ ಪ್ರಮಾಣದಲ್ಲಿ ದವಸಧಾನ್ಯದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಕ್ಷಣಾಧಱದಲ್ಲಿ ಹೊತ್ತಿಕೊಳ್ಳುವ ಬೆಂಕಿ ನಂದಿಸಲು ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೃಷಿಗೆ ಸಂಬಂದಿಸಿದಂತೆ ಗುಡಿಸಲು, ಬಣವೆ, ಬೇಲಿ, ತೋಟಗಳಲ್ಲಿನ ಅಗ್ನಿ ಅವಘಡಗಳಿಗೆ ಹೇರಳವಾಗಿದೆ. ಈ ವಷಱದ ಬೇಸಿಗೆ ಸಂದಭಱದಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೆ ಹೆಚ್ಚು. ಜನವರಿ ತಿಂಗಳಿನಿಂದ ಈವರೆಗೆ 150 ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರೋ ಪ್ರಕರಣಗಳು ದಾಖಲಾಗಿದೆ.
2018ರಲ್ಲಿ 29 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು ಈ ವಷಱ ಜನವರಿಯಿಂದ ಇದುವರೆಗೆ 13ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಹೋದ ವಷಱ 14 ಕಾಖಾಱನೆಗಳಿಗೆ ಬೆಂಕಿ ತಗುಲಿದ್ದರೆ ಈ ವಷಱ ಈಗಾಗಲೇ 11 ಕಾಖಾಱನೆಗಳಿಗೆ ಬೆಂಕಿ ತಗುಲಿದೆ. ಕೃಷಿಗೆ ಸಂಬಂಧಿಸಿದ ಅಗ್ನಿ ಅವಘಡಗಳಲ್ಲಿ ಕಳೆದ 542 ಪ್ರಕರಣಗಳು ದಾಖಲಾಗಿದ್ದರೆ, ಈ ವಷಱ ಈಗಾಗಲೇ 150ಕ್ಕೂ ಹೆಚ್ಚು ಅಗ್ನಿ ಆಕಸ್ಮಿಕ ಪ್ರಕರಣಗಳು ದಾಖಲಾಗಿವೆ.
ಈ ಬಾರಿ ಬೇಸಿಗೆಯಲ್ಲಿ ತುರುವೆಕೆರೆ ತಾಲೂಕಿನ ಸಂಕಲಾಪುರದಲ್ಲಿ ಬಣವೆಗಳಿಗೆ ಒಂದಾದರೊಂದಂತೆ ಬೆಂಕಿ ಹೊತ್ತಿಕೊಂಡು ಸುಮಾರು 10 ಬಣವೆಗಳು ಒಂದೇ ಸುಟ್ಟು ಭಸ್ಮವಾಗಿವೆ. ತೇವಾಂಶ ಇದ್ದ ವೇಳೆಯಲ್ಲಿಯೇ ಬೆಳೆಯನ್ನು ಬಣವೆಗಳಿಗೆ ಹಾಕಲಾಗುತ್ತಿದೆ. ಇದ್ರಿಂದ ಉಷ್ಣಾಂಶ ಹೆಚ್ಚಿ ಬೆಂಕಿ ಹೊತ್ತಿಕೊಳ್ಳಲಿದೆ. ಪೂಣಱ ಒಣಗಿಸಿ ಹುಲ್ಲನ್ನು ಬಣವೆಗಳಿಗೆ ಹಾಕಬೇಕು. ಬಣವೆಯ ಎತ್ತರ 6 ಅಡಿಗಿಂತ ಹೆಚ್ಚು ಇರಬಾರದು. 20 ಟನ್ ಹೆಚ್ಚು ಇರದಂತೆ ರೈತರು ನೋಡಿಕೊಳ್ಳಬೇಕು. 20 ಮೀಟರ್ ಅಂತರದಲ್ಲಿ ಬಣವೆಗಳನ್ನು ನಿಮಿಱಸಬೇಕು. ಬಣವೆಗಳ ಒಳಗಡೆ ಎರಡು ಕಡೆ ಬಿದಿರನ್ನು ಹಾಕಬೇಕು ಇದ್ರಿಂದ ಬಣವೆಗಳಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ಜಿಲ್ಲಾ ಅಗ್ನಿ ಶಾಮಕ ಠಾಣೆ ಜಿಲ್ಲಾ ಅಧಿಕಾರಿ ಮಾಲಿಂಗಪ್ಪ ಲಂಗೋಟಿ.
ಬೈಟ್ : ಮಾಲಿಂಗಪ್ಪ ಲಂಗೋಟಿ, ಜಿಲ್ಲಾ ಅಗ್ನಿ ಶಾಮಕ ಠಾಣೆ ಜಿಲ್ಲಾ ಅಧಿಕಾರಿ.
Body:tumakuruConclusion:null

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.