ETV Bharat / state

ಭಾರತದ ಸೊಸೆ ಸೋನಿಯಾ ಗಾಂಧಿಯಿಂದಲೇ ಪೌರತ್ವ ಕಾಯ್ದೆಗೆ ವಿರೋಧ: ಸೊಗಡು ಶಿವಣ್ಣ - sogadu shivanna latest pressmeet in tumkur news

ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

tumkur
ಸೊಗಡು ಶಿವಣ್ಣ ಸುದ್ದಿಗೋಷ್ಠಿ
author img

By

Published : Dec 22, 2019, 5:42 PM IST

ತುಮಕೂರು: ಭಾರತ ದೇಶದ ಸೊಸೆ ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ ಮರ್ಯಾದೆ ಇಲ್ಲದ ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆ ಮಾಡುವ ರೀತಿಯಲ್ಲಿ ಪೌರತ್ವದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಾಡುವ ಮೂಲಕ ದೇಶ ವಿಭಜನೆ ಮಾಡುವ ಕಾರ್ಯ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದರು.

ಭಾರತ ದೇಶದ ಮುಸಲ್ಮಾನರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಪೌರತ್ವದ ಬಗ್ಗೆ ಮನಮೋಹನ್ ಸಿಂಗ್ ಅಂದಿನ ಕಾಲದಲ್ಲಿಯೇ ಕಾಯ್ದೆಗಳನ್ನು ರೂಪಿಸಿದ್ದರು. ಆದರೆ ಈಗ ಅದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ ಅಷ್ಟೇ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ನಮ್ಮ ದೇಶದ ಸೊಸೆಯಾಗಿ ಬಂದಾಗ ದೇಶದ ಪೌರತ್ವವನ್ನು ನೀಡಿದೆವು. ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸೊಗಡು ಶಿವಣ್ಣ ಸುದ್ದಿಗೋಷ್ಟಿ

ತುಮಕೂರು: ಭಾರತ ದೇಶದ ಸೊಸೆ ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ ಮರ್ಯಾದೆ ಇಲ್ಲದ ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆ ಮಾಡುವ ರೀತಿಯಲ್ಲಿ ಪೌರತ್ವದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಾಡುವ ಮೂಲಕ ದೇಶ ವಿಭಜನೆ ಮಾಡುವ ಕಾರ್ಯ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದರು.

ಭಾರತ ದೇಶದ ಮುಸಲ್ಮಾನರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಪೌರತ್ವದ ಬಗ್ಗೆ ಮನಮೋಹನ್ ಸಿಂಗ್ ಅಂದಿನ ಕಾಲದಲ್ಲಿಯೇ ಕಾಯ್ದೆಗಳನ್ನು ರೂಪಿಸಿದ್ದರು. ಆದರೆ ಈಗ ಅದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ ಅಷ್ಟೇ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ನಮ್ಮ ದೇಶದ ಸೊಸೆಯಾಗಿ ಬಂದಾಗ ದೇಶದ ಪೌರತ್ವವನ್ನು ನೀಡಿದೆವು. ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸೊಗಡು ಶಿವಣ್ಣ ಸುದ್ದಿಗೋಷ್ಟಿ
Intro:ತುಮಕೂರು: ಭಾರತ ದೇಶದ ಸೊಸೆ ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಾಡುವ ಮೂಲಕ ದೇಶ ವಿಭಜನೆ ಮಾಡುವ ಕಾರ್ಯ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದರು.


Body:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾನ ಮರ್ಯಾದೆ ಇಲ್ಲದ ಕಾಂಗ್ರೆಸ್ ಪಕ್ಷದವರು ದೇಶ ವಿಭಜನೆ ಮಾಡುವ ರೀತಿಯಲ್ಲಿ ಪೌರತ್ವದ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತ ದೇಶದ ಮುಸಲ್ಮಾನರಿಗೆ ಪೌರತ್ವ ದಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ, ಪೌರತ್ವದ ಬಗ್ಗೆ ಮನಮೋಹನ್ ಸಿಂಗ್ ಅಂದಿನ ಕಾಲದಲ್ಲಿಯೇ ಕಾಯ್ದೆಗಳನ್ನು ರೂಪಿಸಿದ್ದರು, ಆದರೆ ಈಗ ಅದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ನಮ್ಮ ದೇಶದ ಸೊಸೆಯಾಗಿ ಬಂದಾಗ ದೇಶದ ಪೌರತ್ವವನ್ನು ನೀಡಿದೆವು. ಮಾನ, ಮರ್ಯಾದೆ ಇದ್ದರೆ ಸೋನಿಯಾ ಗಾಂಧಿ ಪೌರತ್ವದ ಪರವಾಗಿ ಮಾತನಾಡುವ ಬದಲು ಪೌರತ್ವದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಇನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮಾಡುವ ಮೂಲಕ ದೇಶ ವಿಭಜನೆ ಮಾಡುವ ಕಾರ್ಯ ಮಾಡಿದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಹರಿಹಾಯ್ದರು.
ತುಮಕೂರಿನಲ್ಲಿರುವ ಮಕಾನ್ ನಲ್ಲಿ ಕಳೆದ ರಾತ್ರಿ ಮಾಜಿ ಶಾಸಕರು ಸಭೆ ಸೇರಿ, ಮುಸ್ಲಿಮರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ತುಮಕೂರಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರಿಗೆ ಯಾವುದಾದರೂ ತೊಂದರೆಯಾದರೆ ಅದಕ್ಕೆ ಆ ಮಾಜಿ ಶಾಸಕರು ಕಾರಣರಾಗುತ್ತಾರೆ ಎಂದರು.
ಬೈಟ್: ಸೊಗಡು ಶಿವಣ್ಣ, ಮಾಜಿ ಸಚಿವ.


Conclusion:ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.