ETV Bharat / state

ಕಲ್ಪತರು ನಾಡಿಗೆ ಬಂತು ಕಸ ಗುಡಿಸೋ ಯಂತ್ರ : ಇನ್ನಾದರೂ ಈ ಸ್ಮಾರ್ಟ್​ ಸಿಟಿ ಆಗಲಿದೆಯಾ ಕ್ಲೀನ್​​​?

author img

By

Published : Oct 15, 2019, 9:12 PM IST

Updated : Oct 16, 2019, 6:02 AM IST

ನಗರವನ್ನು ಸ್ವಚ್ಛವಾಗಿಡುವಲ್ಲಿ ಮೂರು ಯಂತ್ರಗಳ ಕೆಲಸವನ್ನು ಇದೊಂದೇ ಯಂತ್ರ ನಿರ್ವಹಿಸುತ್ತದೆ, ಅಲ್ಲದೇ ಬೇರೆ ಮಷಿನ್​ಗಳಿಗೆ 20 ಲೀಟರ್​ ಡಿಸೇಲ್​ನಲ್ಲಿ ಮಾಡುವ ಕಾರ್ಯ ಕೇವಲ 5 ಲೀಟರ್​ನಲ್ಲಿ ಮಾಡಿ ಮುಗಿಸುತ್ತದೆ. ಇದರ ವೆಚ್ಚ ಬರೊಬ್ಬ 1 ಕೋಟಿಯಿಂದ 2 ಕೋಟಿ ಅಂತೆ.

ಕಲ್ಪತರು ನಾಡಿಗೆ ಬಂತು ಕಸ ಗುಡಿಸುವ ಯಂತ್ರ

ತುಮಕೂರು : ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ವರ್ಷಗಳೇ ಕಳೆದಿದೆ. ಆದರೆ, ನಗರದಲ್ಲಿ ಯಾವುದೂ ಸ್ಮಾರ್ಟ್ ಆಗೇ ಇಲ್ಲ. ಸದ್ಯ ನಗರವನ್ನು ಸ್ವಚ್ಛವಾಗಿಡಲು ಮುಂದಾಗಿರುವ ಮಹಾನಗರ ಪಾಲಿಕೆ ವಿನೂತನ ಯಂತ್ರದ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ.

ನಗರದಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕಂತೆ ಕೆಲಸಗಳು ಮಾತ್ರ ನಡೆಯುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಅದರಲ್ಲೂ ಕಸ ಹಾಗೂ ಧೂಳಿನ ಸಮಸ್ಯೆಯಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಶಾಪ ಹಾಕುವುದು ಕಡಿಮೆಯಾಗಿಲ್ಲ. ಹಾಗಾಗಿ ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮಹಾನಗರ ಪಾಲಿಕೆ ವಿನೂತನವಾದ ಯಂತ್ರದ ಪ್ರಾಯೋಗಿಕ ಪ್ರದರ್ಶನವನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ನಡೆಸಿತು.

ಕಲ್ಪತರು ನಾಡಿಗೆ ಬಂತು ಕಸ ಗುಡಿಸೋ ಯಂತ್ರ

ನಗರವನ್ನು ಸ್ವಚ್ಛವಾಗಿಡುವಲ್ಲಿ ಮೂರು ಯಂತ್ರಗಳ ಕೆಲಸವನ್ನು ಇದೊಂದೇ ಯಂತ್ರ ನಿರ್ವಹಿಸುತ್ತದೆ, ಅಲ್ಲದೆ ಬೇರೆ ಮಷಿನ್​ಗಳಿಗೆ 20 ಲೀಟರ್​ ಡಿಸೇಲ್​ನಲ್ಲಿ ಮಾಡುವ ಕಾರ್ಯ ಕೇವಲ 5 ಲೀಟರ್​ನಲ್ಲಿ ಮಾಡಿ ಮುಗಿಸುತ್ತದೆ. ಇದರ ವೆಚ್ಚ ಬರೋಬರಿ 1 ಕೋಟಿಯಿಂದ 2 ಕೋಟಿಯವರೆಗೂ ಇದೆಯಂದು ಸಂಸ್ಥೆಯ ಅಧ್ಯಕ್ಷ ಓಂ ಪ್ರಕಾಶ್ ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆಯ ಮೇಯರ್ ಲಲಿತಾ ರವೀಶ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು. ಈಗಾಗಲೇ ದೆಹಲಿ, ಬೆಂಗಳೂರು, ಜೈಪುರ, ಹೈದರಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ತುಮಕೂರಿಗೆ ಆಗಮಿಸಿದೆ. ಮುಂದಿನ ದಿನಗಳಲ್ಲಿ ನಗರವನ್ನು ಸ್ವಚ್ಛವಾಗಿಡುವ ಮೂಲಕ ಕಸ ಹಾಗೂ ಧೂಳಿನಿಂದ ತುಮಕೂರು ನಗರ ಬದಲಾಗುವುದಾ ಕಾದು ನೋಡಬೇಕಿದೆ.

ತುಮಕೂರು : ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ವರ್ಷಗಳೇ ಕಳೆದಿದೆ. ಆದರೆ, ನಗರದಲ್ಲಿ ಯಾವುದೂ ಸ್ಮಾರ್ಟ್ ಆಗೇ ಇಲ್ಲ. ಸದ್ಯ ನಗರವನ್ನು ಸ್ವಚ್ಛವಾಗಿಡಲು ಮುಂದಾಗಿರುವ ಮಹಾನಗರ ಪಾಲಿಕೆ ವಿನೂತನ ಯಂತ್ರದ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ.

ನಗರದಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕಂತೆ ಕೆಲಸಗಳು ಮಾತ್ರ ನಡೆಯುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಅದರಲ್ಲೂ ಕಸ ಹಾಗೂ ಧೂಳಿನ ಸಮಸ್ಯೆಯಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಶಾಪ ಹಾಕುವುದು ಕಡಿಮೆಯಾಗಿಲ್ಲ. ಹಾಗಾಗಿ ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮಹಾನಗರ ಪಾಲಿಕೆ ವಿನೂತನವಾದ ಯಂತ್ರದ ಪ್ರಾಯೋಗಿಕ ಪ್ರದರ್ಶನವನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ನಡೆಸಿತು.

ಕಲ್ಪತರು ನಾಡಿಗೆ ಬಂತು ಕಸ ಗುಡಿಸೋ ಯಂತ್ರ

ನಗರವನ್ನು ಸ್ವಚ್ಛವಾಗಿಡುವಲ್ಲಿ ಮೂರು ಯಂತ್ರಗಳ ಕೆಲಸವನ್ನು ಇದೊಂದೇ ಯಂತ್ರ ನಿರ್ವಹಿಸುತ್ತದೆ, ಅಲ್ಲದೆ ಬೇರೆ ಮಷಿನ್​ಗಳಿಗೆ 20 ಲೀಟರ್​ ಡಿಸೇಲ್​ನಲ್ಲಿ ಮಾಡುವ ಕಾರ್ಯ ಕೇವಲ 5 ಲೀಟರ್​ನಲ್ಲಿ ಮಾಡಿ ಮುಗಿಸುತ್ತದೆ. ಇದರ ವೆಚ್ಚ ಬರೋಬರಿ 1 ಕೋಟಿಯಿಂದ 2 ಕೋಟಿಯವರೆಗೂ ಇದೆಯಂದು ಸಂಸ್ಥೆಯ ಅಧ್ಯಕ್ಷ ಓಂ ಪ್ರಕಾಶ್ ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆಯ ಮೇಯರ್ ಲಲಿತಾ ರವೀಶ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು. ಈಗಾಗಲೇ ದೆಹಲಿ, ಬೆಂಗಳೂರು, ಜೈಪುರ, ಹೈದರಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ತುಮಕೂರಿಗೆ ಆಗಮಿಸಿದೆ. ಮುಂದಿನ ದಿನಗಳಲ್ಲಿ ನಗರವನ್ನು ಸ್ವಚ್ಛವಾಗಿಡುವ ಮೂಲಕ ಕಸ ಹಾಗೂ ಧೂಳಿನಿಂದ ತುಮಕೂರು ನಗರ ಬದಲಾಗುವುದಾ ಕಾದು ನೋಡಬೇಕಿದೆ.

Intro:ತುಮಕೂರು: ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ವರ್ಷಗಳೇ ಕಳೆದಿದೆ ಆದರೆ ತುಮಕೂರು ನಗರದಲ್ಲಿ ಯಾವುದು ಸ್ಮಾರ್ಟ್ ಆಗಿಲ್ಲ ಆದರೆ ಈಗ ತುಮಕೂರು ನಗರವನ್ನು ಸ್ವಚ್ಛವಾಗಿಡಲು ಅತಿಥಿಯೊಂದು ನಗರಕ್ಕೆ ಆಗಮಿಸಿದೆ ಅದೇನು ಅಂತಿರಾ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.


Body:ತುಮಕೂರು ನಗರ ಸ್ಮಾರ್ಟ್ ಸಿಟಿ ಏನು ಆಗಿದೆ, ಆದರೆ ಸ್ಮಾರ್ಟ್ ಸಿಟಿ ಗೆ ತಕ್ಕಂತೆ ಕೆಲಸಗಳು ಮಾತ್ರ ನಡೆಯುತ್ತಿಲ್ಲ ಎಂಬ ಅಸಮಧಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ, ಅದರಲ್ಲೂ ಕಸದ ಹಾಗೂ ದೂಳಿನ ಸಮಸ್ಯೆಯಿಂದ ವಾಹನ ಸವಾವರರೂ ಅಧಿಕಾರಿಗಳ ವಿರುದ್ಧ ಶಾಪ ಹಾಕುವುದು ಕಡಿಮೆಯಾಗಿಲ್ಲ, ಹಾಗಾಗಿ ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮಹಾನಗರ ಪಾಲಿಕೆ ವಿನೂತನವಾದ ಯಂತ್ರದ ಪ್ರಾಯೋಗಿಕ ಪ್ರದರ್ಶನವನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ನಡೆಸಿತು.
ಯಂತ್ರದ ಮೂಲಕ ಯಾವುದೇ ರೀತಿಯ ಕಸವನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ ಮೂರು ಯಂತ್ರಗಳ ಕಾರ್ಯವನ್ನು ಇದೊಂದೇ ಯಂತ್ರ ಕಾರ್ಯನಿರ್ವಹಿಸುತ್ತದೆ, ಯಾವುದೇ ಕಸವನ್ನು ಕೂಡ ಸ್ವಚ್ಛ ಮಾಡುತ್ತದೆ.
ಈ ಯಂತ್ರವನ್ನು ನಿರ್ವಹಿಸಲು ಯಾವುದೇ ಕಷ್ಟವಗುವುದಿಲ್ಲ, ಬೇರೆ ಮೆಷಿನ್ ಗಳಿಗೆ 20 ಲೀಟರ್ ನಲ್ಲಿ ಮಾಡುವ ಕಾರ್ಯವನ್ನು ಕೇವಲ 5 ಲೀಟರ್ ಡೀಸೆಲ್ ನಲ್ಲಿ ಈ ಯಂತ್ರ ಮಾಡಿ ಮುಗಿಸುತ್ತದೆ, ಅಲ್ಲದೆ ಸ್ವಚ್ಛಗೊಳಿಸಿದ ನಂತರ ಯಾವುದೇ ದುರ್ವಾಸನೆ ಇಲ್ಲದಂತೆ ನಾವು ಆರಾಮಾಗಿ ಅಲ್ಲಿ ಒಡಾಡಬಹುದಾಗಿದೆ, ವಾಹನದ ಸಾಮರ್ಥ್ಯ ದ ಮೇಲೆ ಇದರ ಬೆಲೆ 1 ಕೋಟೆಯಿಂದ 2 ಕೋಟಿವರೆಗೂ ಇದೆಯೆಂದು ಸಂಸ್ಥೆಯ ಅಧ್ಯಕ್ಷ ಓಂ ಪ್ರಕಾಶ್ ತಿಳಿಸಿದರು.
ಬೈಟ್: ಓಂಪ್ರಕಾಶ್, ಅಧ್ಯಕ್ಷ, ಅಮೇರಿಕನ್ ರೋಡ್ ಟೆಕ್ನಾಲಜಿ ಅಂಡ್ ಸಲೂಶನ್


Conclusion: ಈಗಾಗಲೇ ದೆಹಲಿ, ಬೆಂಗಳೂರು, ಜೈಪುರ, ಹೈದರಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದ್ದು ಇದೀಗ ತುಮಕೂರಿಗೆ ಆಗಮನವಾಗಿದೆ. ಮುಂದಿನ ದಿನಗಳಲ್ಲಿ ನಗರವನ್ನು ಸ್ವಚ್ಛವಾಗಿಡುವ ಮೂಲಕ ಕಸ ಹಾಗೂ ದೂಳಿನಿಂದ ತುಮಕೂರು ನಗರ ಬದಲಾಗುವುದಾ ಕಾದು ನೋಡಬೇಕಿದೆ.
ಇದೇ ವೇಳೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆಯ ಮೇಯರ್ ಲಲಿತಾ ರವೀಶ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು.

ವರದಿ
ಸುಧಾಕರ
Last Updated : Oct 16, 2019, 6:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.