ETV Bharat / state

ಶಾಸಕ ಮಾಧುಸ್ವಾಮಿ ನೀಚ ಹೇಳಿಕೆಗಳನ್ನು ನೀಡುತ್ತಿದ್ದಾರೆ: ಸಚಿವ ಶ್ರೀನಿವಾಸ್ ಆಕ್ರೋಶ

author img

By

Published : Apr 3, 2019, 10:43 PM IST

ಬಿಜೆಪಿ ಶಾಸಕ ಮಾಧುಸ್ವಾಮಿ ತಲೆ ಕೆಟ್ಟವರ ರೀತಿ ನೀಚ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಶ್ರೀನಿವಾಸ್ ಆಕ್ರೋಶ- ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದೇವೇಗೌಡರನ್ನು ಗೆಲ್ಲಿಸಬೇಕೆಂದು ಕರೆ

ಸಚಿವ ಶ್ರೀನಿವಾಸ್

ತುಮಕೂರು: ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ತಲೆ ಕೆಟ್ಟವರ ರೀತಿ ಮಾತನಾಡುತ್ತಿದ್ದು, ನೀಚ ಹೇಳಿಕೆ ನೀಡುತ್ತಿದ್ದಾರೆ. ಇವರಿಗೇನು ಮಾನ ಮರ್ಯಾದೆ ಇದೆಯೇ ಎಂದು ಸಚಿವ ಶ್ರೀನಿವಾಸ್ ಗುಡುಗಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುರೇಶ್ ಬಾಬು ಕಳೆದ 5 ವರ್ಷಗಳಿಂದ ಮುಖ್ಯಮಂತ್ರಿಗೆ ತಲೆಹಿಡುಕ ಕೆಲಸ ಮಾಡಿದ್ದಾರೆ ಎಂದು ಶಾಸಕ ಮಾಧುಸ್ವಾಮಿ ನೀಚ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಶ್ರೀನಿವಾಸ್

ತುಮಕೂರು ಜಿಲ್ಲೆಯ ಮಾನ ಮರ್ಯಾದೆ ಉಳಿಯಬೇಕಿದೆ. ಅದಕ್ಕಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದೇವೇಗೌಡರನ್ನು ಗೆಲ್ಲಿಸಬೇಕಿದೆ. ಅಲ್ಲದೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಕೈ ಬಲಪಡಿಸಲು ಇದು ಒಂದು ಒಳ್ಳೆಯ ಅವಕಾಶ. ಮಾಜಿ ಪ್ರಧಾನಿ ದೇವೇಗೌಡರು ಕಣದಲ್ಲಿದ್ದು, ಅವರನ್ನು ಗೆಲ್ಲಿಸಿ ಕಳುಹಿಸಿದರೆ ಜಿಲ್ಲೆಗೇ ಕೀರ್ತಿ ಬರುತ್ತದೆ. ಅಕಸ್ಮಾತ್ ಅವರನ್ನು ಸೋಲಿಸಿದರೆ ಇಡೀ ದೇಶದಲ್ಲಿ ಮಾಜಿ ಪ್ರಧಾನಿಯನ್ನು ಸೋಲಿಸಿದ ಅಪಕೀರ್ತಿ ಸುತ್ತಿಕೊಳ್ಳಲಿದೆ ಎಂದು ಸಚಿವ ಶ್ರೀನಿವಾಸ ಹೇಳಿದರು.

ತುಮಕೂರು: ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ತಲೆ ಕೆಟ್ಟವರ ರೀತಿ ಮಾತನಾಡುತ್ತಿದ್ದು, ನೀಚ ಹೇಳಿಕೆ ನೀಡುತ್ತಿದ್ದಾರೆ. ಇವರಿಗೇನು ಮಾನ ಮರ್ಯಾದೆ ಇದೆಯೇ ಎಂದು ಸಚಿವ ಶ್ರೀನಿವಾಸ್ ಗುಡುಗಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುರೇಶ್ ಬಾಬು ಕಳೆದ 5 ವರ್ಷಗಳಿಂದ ಮುಖ್ಯಮಂತ್ರಿಗೆ ತಲೆಹಿಡುಕ ಕೆಲಸ ಮಾಡಿದ್ದಾರೆ ಎಂದು ಶಾಸಕ ಮಾಧುಸ್ವಾಮಿ ನೀಚ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಶ್ರೀನಿವಾಸ್

ತುಮಕೂರು ಜಿಲ್ಲೆಯ ಮಾನ ಮರ್ಯಾದೆ ಉಳಿಯಬೇಕಿದೆ. ಅದಕ್ಕಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದೇವೇಗೌಡರನ್ನು ಗೆಲ್ಲಿಸಬೇಕಿದೆ. ಅಲ್ಲದೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಕೈ ಬಲಪಡಿಸಲು ಇದು ಒಂದು ಒಳ್ಳೆಯ ಅವಕಾಶ. ಮಾಜಿ ಪ್ರಧಾನಿ ದೇವೇಗೌಡರು ಕಣದಲ್ಲಿದ್ದು, ಅವರನ್ನು ಗೆಲ್ಲಿಸಿ ಕಳುಹಿಸಿದರೆ ಜಿಲ್ಲೆಗೇ ಕೀರ್ತಿ ಬರುತ್ತದೆ. ಅಕಸ್ಮಾತ್ ಅವರನ್ನು ಸೋಲಿಸಿದರೆ ಇಡೀ ದೇಶದಲ್ಲಿ ಮಾಜಿ ಪ್ರಧಾನಿಯನ್ನು ಸೋಲಿಸಿದ ಅಪಕೀರ್ತಿ ಸುತ್ತಿಕೊಳ್ಳಲಿದೆ ಎಂದು ಸಚಿವ ಶ್ರೀನಿವಾಸ ಹೇಳಿದರು.

Intro:ಶಾಸಕ ಮಧು ಸ್ವಾಮಿ ನೀಚ ಹೇಳಿಕೆಗಳನ್ನು ನೀಡುತ್ತಿದ್ದಾರೆ....
ಸಚಿವ ಎಸ್ಆರ್ ಶ್ರೀನಿವಾಸ್ ಆಕ್ರೋಶ......

ತುಮಕೂರು
ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಮಾಧುಸ್ವಾಮಿ ತಲೆ ಕೆಟ್ಟವರ ರೀತಿ ಮಾತನಾಡುತ್ತಿದ್ದು ನೀಚ ಹೇಳಿಕೆ ನೀಡುತ್ತಿದ್ದು. ಬಿಜೆಪಿ ಮುಖಂಡರಿಗೆ ಇವರಿಗೆನೋ ಮಾನ ಮರ್ಯಾದೆ ಇದೆಯೇ ಎಂದು ಸಚಿವ ಶ್ರೀನಿವಾಸ್ ಗುಡುಗಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸುರೇಶ್ ಬಾಬು ಕಳೆದ 5 ವರ್ಷಗಳಿಂದ ಮುಖ್ಯಮಂತ್ರಿಗೆ ತಲೆಹಿಡುಕ ಕೆಲಸ ಮಾಡಿದ್ದಾರೆ ಎಂದು ಶಾಸಕ ಮಾಧುಸ್ವಾಮಿ ಎಂಬ ನೀಚ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲೆಯ ಮಾನ ಮರ್ಯಾದೆ ಉಳಿಯಬೇಕಿದೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಕಣದಲ್ಲಿದ್ದು ಅವರನ್ನು ಗೆಲ್ಲಿಸಿ ಕಳುಹಿಸಿದರೆ ಕೀರ್ತಿ ಜಿಲ್ಲೆಯ ಜನರಿಗೆ ಬರುತ್ತದೆ. ಅಕಸ್ಮಾತ್ ಅವರನ್ನು ಸೋಲಿಸಿದರೆ ಜಿಲ್ಲೆಯ ಜನರಿಗೆ ಇಡೀ ದೇಶದಲ್ಲಿ ಮಾಜಿ ಪ್ರಧಾನಿಯನ್ನು ಸೋಲಿಸಿದ ಅಪಕೀರ್ತಿ ಬರಲಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡರ ಗೆಲುವು ಮುಖ್ಯವಾಗಿದೆ. ಅಲ್ಲದೆ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಕೈ ಬಲಪಡಿಸಲು ಇದು ಒಂದು ಅವಕಾಶ ಸಿಗಲಿದೆ ಎಂದು ತಿಳಿಸಿದರು.




Body:ತುಮಕೂರು


Conclusion:

For All Latest Updates

TAGGED:

tumkur
ETV Bharat Logo

Copyright © 2024 Ushodaya Enterprises Pvt. Ltd., All Rights Reserved.