ETV Bharat / state

ತುಮಕೂರಿನಲ್ಲಿ ಬಾಪು 150ನೇ ಜಯಂತಿ ಪ್ರಯುಕ್ತ ಪ್ಲಾಸ್ಟಿಕ್‌ಗೆ ಮುಕ್ತಿ ಹಾಡಲು ಶವಯಾತ್ರೆ..

author img

By

Published : Sep 25, 2019, 8:25 PM IST

ತುಮಕೂರು ಪಟ್ಟಣ ಪುರಸಭೆ ವತಿಯಿಂದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಪ್ರಯುಕ್ತ ಇಂದು ಪ್ಲಾಸ್ಟಿಕ್ ಅಂತಿಮ ಶವಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ಹಲವು ಸಾಮಾಗ್ರಿಗಳ ಅಂತಿಮ ಶವ ಯಾತ್ರೆ ನಡೆಸಲಾಯ್ತು.

ತುಮಕೂರಿನಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನ ಪ್ರಯುಕ್ತ ಪ್ಲಾಸ್ಟಿಕ್ ಅಂತಿಮ ಶವಯಾತ್ರೆ

ತುಮಕೂರು: ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಯುವಜನತೆ, ಅಂಗಡಿ ವ್ಯಾಪಾರಿಗಳು, ಸಾರ್ವಜನಿಕರು, ಪ್ಲಾಸ್ಟಿಕ್​ ಬಳಕೆ ತ್ಯಜಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನ ಇಂದಿನಿಂದಲೇ ಮಾಡಬೇಕಿದೆಯೆಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

ತುಮಕೂರಿನಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನ ಪ್ರಯುಕ್ತ ಪ್ಲಾಸ್ಟಿಕ್ ಅಂತಿಮ ಶವಯಾತ್ರೆ

ಪಟ್ಟಣದ ಪುರಸಭೆ ವತಿಯಿಂದ ಇಂದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಅಂತಿಮ ಶವಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವೆಂಕಟರಮಣಪ್ಪ ಅವರು, ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತವಾಗಿ ನಿಲ್ಲಿಸಬೇಕೆಂದರು. ಜೊತೆಗೆ, ಪ್ಲಾಸ್ಟಿಕ್ ಬಳಕೆಯಿಂದ ಮಾರಾಣಾಂತಿಕ ರೋಗಗಳು ಹರಡುತ್ತಿವೆ, ಭೂಮಿಯು ಇಂದು ರಾಸಾಯನಿಕಗಳಿಂದ ತುಂಬಿ ವಿಷಕಾರಿಯಾಗಿದೆ. ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಲೂ ಕೂಡ ಪ್ಲಾಸ್ಟಿಕ್ ಕಾರಣವಾಗಿದೆ. ಹಾಗಾಗಿ ಇಂದಿನಿಂದ ಯಾರು ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪ್ಲಾಸ್ಟಿಕ್ ಮುಕ್ತ ಪಾವಗಡಕ್ಕೆ ಇಂದಿನಿಂದಲೇ ಪಣ ತೊಡಬೇಕೆಂದರು.

ತಹಶೀಲ್ದಾರ್​ ವರದರಾಜು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಇಂದಿನಿಂದ ಅಕ್ಟೋಬರ್ 2ರವರೆಗೂ ಪಟ್ಟಣದ ಪ್ರತಿ ವಾರ್ಡ್‍ಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಗ್ರಾಪಂ ಮಟ್ಟದಲ್ಲೂ ಕೂಡ ಪ್ಲಾಸ್ಟಿಕ್ ಬಳಕೆ ವಿರುದ್ಧದ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಬೇಕಿದೆ ಎಂದರು. ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಸಹಕರಿಸಬೇಕು. ನಿಯಮ ಮೀರಿ ಉಪಯೋಗಿಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ. ಇದರಿಂದಾಗುವ ಅನಾಹುತಗಳನ್ನು ತಪ್ಪಿಸಿ ಆರೋಗ್ಯಕರ ಪರಿಸರಕ್ಕೆ ಇಂದು ಪ್ಲಾಸ್ಟಿಕ್ ಮುಕ್ತ ಭಾರತ ಅವಶ್ಯ ಎಂದರು.

ಇದೇ ವೇಳೆ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ಹಲವು ಸಾಮಾಗ್ರಿಗಳನ್ನು ತಳ್ಳುವ ಗಾಡಿಯಲ್ಲಿಟ್ಟು ಅಂತಿಮ ಶವ ಯಾತ್ರೆಯನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ತುಮಕೂರು: ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಯುವಜನತೆ, ಅಂಗಡಿ ವ್ಯಾಪಾರಿಗಳು, ಸಾರ್ವಜನಿಕರು, ಪ್ಲಾಸ್ಟಿಕ್​ ಬಳಕೆ ತ್ಯಜಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನ ಇಂದಿನಿಂದಲೇ ಮಾಡಬೇಕಿದೆಯೆಂದು ಮಾಜಿ ಸಚಿವ ವೆಂಕಟರಮಣಪ್ಪ ತಿಳಿಸಿದರು.

ತುಮಕೂರಿನಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನ ಪ್ರಯುಕ್ತ ಪ್ಲಾಸ್ಟಿಕ್ ಅಂತಿಮ ಶವಯಾತ್ರೆ

ಪಟ್ಟಣದ ಪುರಸಭೆ ವತಿಯಿಂದ ಇಂದು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಅಂತಿಮ ಶವಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವೆಂಕಟರಮಣಪ್ಪ ಅವರು, ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತವಾಗಿ ನಿಲ್ಲಿಸಬೇಕೆಂದರು. ಜೊತೆಗೆ, ಪ್ಲಾಸ್ಟಿಕ್ ಬಳಕೆಯಿಂದ ಮಾರಾಣಾಂತಿಕ ರೋಗಗಳು ಹರಡುತ್ತಿವೆ, ಭೂಮಿಯು ಇಂದು ರಾಸಾಯನಿಕಗಳಿಂದ ತುಂಬಿ ವಿಷಕಾರಿಯಾಗಿದೆ. ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಲೂ ಕೂಡ ಪ್ಲಾಸ್ಟಿಕ್ ಕಾರಣವಾಗಿದೆ. ಹಾಗಾಗಿ ಇಂದಿನಿಂದ ಯಾರು ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪ್ಲಾಸ್ಟಿಕ್ ಮುಕ್ತ ಪಾವಗಡಕ್ಕೆ ಇಂದಿನಿಂದಲೇ ಪಣ ತೊಡಬೇಕೆಂದರು.

ತಹಶೀಲ್ದಾರ್​ ವರದರಾಜು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಇಂದಿನಿಂದ ಅಕ್ಟೋಬರ್ 2ರವರೆಗೂ ಪಟ್ಟಣದ ಪ್ರತಿ ವಾರ್ಡ್‍ಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಗ್ರಾಪಂ ಮಟ್ಟದಲ್ಲೂ ಕೂಡ ಪ್ಲಾಸ್ಟಿಕ್ ಬಳಕೆ ವಿರುದ್ಧದ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಬೇಕಿದೆ ಎಂದರು. ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಸಹಕರಿಸಬೇಕು. ನಿಯಮ ಮೀರಿ ಉಪಯೋಗಿಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ. ಇದರಿಂದಾಗುವ ಅನಾಹುತಗಳನ್ನು ತಪ್ಪಿಸಿ ಆರೋಗ್ಯಕರ ಪರಿಸರಕ್ಕೆ ಇಂದು ಪ್ಲಾಸ್ಟಿಕ್ ಮುಕ್ತ ಭಾರತ ಅವಶ್ಯ ಎಂದರು.

ಇದೇ ವೇಳೆ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ಹಲವು ಸಾಮಾಗ್ರಿಗಳನ್ನು ತಳ್ಳುವ ಗಾಡಿಯಲ್ಲಿಟ್ಟು ಅಂತಿಮ ಶವ ಯಾತ್ರೆಯನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

Intro:Body:ತುಮಕೂರು / ಪಾವಗಡ

ಪ್ಲಾಸ್ಟಿಕ್ ಮುಕ್ತ ದೇಶಕ್ಕಾಗಿ ಯುವಜನತೆ ,ಅಂಗಡಿ ವ್ಯಾಪಾರಿಗಳು , ಸಾರ್ವಜನಿಕರು ,
ಬಳಕೆ ತ್ಯೆಜಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನ ಇಂದಿನಿಂದ ಮಾಡಬೇಕಿದೆ ಎಂದು ಮಾಜಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.

ಪಟ್ಟಣದ ಪುರಸಭೆ ವತಿಯಿಂದ ಬುದವಾರ ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನದ ಪ್ರಯುಕ್ತ ಅಮ್ಮಿಕೊಂಡಿದ್ದಾ ಪ್ಲಾಸ್ಟಿಕ್ ಅಂತಮ ಶವಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ,ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಪ್ರತಿಯೋಬ್ಬರು ಸ್ವಯಂ ಪ್ರೇರಿತವಾಗಿ ನಿಲ್ಲಿಸಬೇಕೆಂದರು.

ಪ್ಲಾಸ್ಟಿಕ್ ಬಳಕೆಯಿಂದ ಮಾರಾಣಾಂತಿಕ ರೋಗಗಳು ಹರಡುತ್ತಿವೆ ,ಭೂಮಿಯು ಇಂದು ರಾಸಾಯನಿಕಗಳಿಂದ ತುಂಭಿ ವಿಷಕಾರಿಯಾಗಿದೆ ,ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚರು ಕೂಡ ಪ್ಲಾಸ್ಟಿಕ್ ಕಾರಣವಾಗಿದ್ದು ,ಇಂದಿನಿಂದ ಯಾರು ಪ್ಲಾಸ್ಟಿಕ್ ಬಳಕೆ ಮಾಡದೇ ,ಪ್ಲಾಸ್ಟಿಕ್ ಮುಕ್ತ ಪಾವಗಡಕ್ಕೆ ಇದು ಕೊನೆಯದಿನವಾಗಿದೆ ಎಂದರು.

ತಹಶೀಲ್ದರ್ ವರದರಾಜು ಮಾತನಾಡಿ ,ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಇಂದಿನಿಂದ ಆಕ್ಟೋಬರ್ 2 ರವರೆಗೂ ಪಟ್ಟನದ ಪ್ರತಿ ವಾರ್ಡ್‍ಗಳಲ್ಲಿ ,ಶಾಲಾ ಕಾಲೇಜುಗಳಲ್ಲಿ ಗ್ರಾಪಂ ಮಟ್ಟದಲ್ಲೂ ಕೂಡ ಪ್ಲಾಸ್ಟಿಕ್ ಮುಕ್ತಕ್ಕಾಗಿ ಕಾರ್ಯಕ್ರಮದ ಮೂಲಕ ಹರಿವು ಮೂಡಿಸಿ ಪ್ಲಾಸ್ಟಿಕ್ ಭಾರತಕ್ಕೆ ಕೈಜೋಡಿಸಬೇಕೆಂದರು.

ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ ,ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಸಹಕರಿಸಬೇಕು ,ನಿಯಮವನ್ನು ಮೀರಿ ಉಪಯೋಗಿಸಿದರೆ ಕಾನೂನು ಕ್ರಮ ತಪ್ಪಿದ್ದಲ್ಲ ,ಇದರಿಂದ ಆಗುವಾ ಆನಾಹುತಗಳನ್ನು ತಪ್ಪಿಸಿ ಆರೋಗ್ಯಕರವಾದ ಪರಿಸರಕ್ಕೆ ಇಂದು ಪ್ಲಾಸ್ಟಿಕ್ ಮುಕ್ತ ಭಾರತ ಆವಶ್ಯಕವಾಗಿದೆ ಎಂದರು.

ಇದೇ ವೇಳೆ ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ಹಲವು ಸಾಮಾಗ್ರಿಗಳನ್ನು ಆಂತಿಮ ಯಾತ್ರೆಯಲ್ಲಿ ತಳ್ಳುವ ಗಾಡಿಯಲ್ಲಿ ಪಟ್ಟನದ ಪ್ರಮುಖ ಬೀದಿಗಳಲ್ಲಿ ಮೇರವಣೆಗೆಯ ಮೂಲಕ ಆಂತಿಮ ಶವಯಾತ್ರೆ ನಡೆಸಲಾಯಿತ್ತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.