ETV Bharat / state

ಕೊರೊನಾ ಸೋಂಕು ನಿರ್ಮೂಲನೆಗೆ ಡ್ರೋನ್ ಬಳಸಿ ಬಯೋಕೆಮಿಕಲ್ ಸಿಂಪಡನೆ - ತುಮಕೂರು ಲೇಟೆಸ್ಟ್​ ಸುದ್ದಿ

ರಾಜ್ಯದ ಮೂಲೆ ಮೂಲೆಯಲ್ಲೂ ಕೊರೊನಾ ಸೋಂಕು ಹಬ್ಬುತ್ತಿದೆ. ಹೀಗಾಗಿ ತುಮಕೂರಲ್ಲಿ ಕೊರೊನಾ ನಿಯಂತ್ರಣ ಮಾಡಲು ಡ್ರೋನ್​ ಬಳಸಿ ಸ್ಯಾನಿಟೈಸ್​ ಮಾಡಲಾಗುತ್ತಿದೆ.

tumkur
tumkur
author img

By

Published : May 18, 2021, 7:47 PM IST

Updated : May 18, 2021, 8:38 PM IST

ತುಮಕೂರು: ಕೊರೊನಾ ಹರಡದಂತೆ ನಿಯಂತ್ರಿಸಲು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಬಯೋಕೆಮಿಕಲ್ ಅನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡಲಾಯ್ತು.

ಈಗಾಗಲೇ ಕೊರೊನಾ ಸೋಂಕು ನಿರ್ಮೂಲನೆ ಮಾಡಲು ಹೈಪಾಕ್ಸಿ ಕ್ಲೋರೈಡ್, ಬ್ಲೀಚಿಂಗ್ ಪೌಡರ್ ಬಳಸಿ ಬಹುತೇಕ ಎಲ್ಲಾ ನಗರಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿತ್ತು. ಸಮಗ್ರ ಸೇವಾ ಟ್ರಸ್ಟ್ ವತಿಯಿಂದ ಈ ಕಾರ್ಯ ನಡೆಸಲಾಗುತ್ತಿದೆ.

ಕೊರೊನಾ ಸೋಂಕು ನಿರ್ಮೂಲನೆಗೆ ಡ್ರೋನ್ ಬಳಸಿ ಬಯೋಕೆಮಿಕಲ್ ಸಿಂಪಡನೆ

ನಿತ್ಯ 4 ಡ್ರೋನ್​ಗಳನ್ನು ಬಳಸಿ ಬಯೋಕೆಮಿಕಲ್ ಅನ್ನು ಪಟ್ಟಣದಾದ್ಯಂತ ಸಿಂಪಡನೆ ಮಾಡಲಾಗುತ್ತಿದೆ. ಬಯೋಕಲ್ಚರ್ ಬಳಸಿ ವೈರಸ್ ನಿರ್ಮೂಲನೆ ಮಾಡುವ ಕೆಮಿಕಲ್ ತಯಾರಿಸಲಾಗಿದೆ. ಸಾಮಾನ್ಯವಾಗಿ ಈಗಾಗಲೇ ಬಳಸಲಾಗುತ್ತಿರುವ ಹೈಪಾಕ್ಸಿ ಕ್ಲೋರೈಡ್, ಬ್ಲೀಚಿಂಗ್ ಪೌಡರ್ ಬಳಸಿದಾಗ ವೈರಸ್​ಗಳನ್ನು ನಿರ್ಮೂಲನೆ ಮಾಡಬಹುದು. ಆದರೆ ಅದು ಮನುಷ್ಯನ ಮೇಲೆ ಸಹಜವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೇವಾ ಟ್ರಸ್ಟ್ ವತಿಯಿಂದ ಸಿಂಪಡಿಸಲಾಗುತ್ತಿರೋ ಬಯೋಕೆಮಿಕಲ್ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ. ಶೇ.100ರಷ್ಟು ಸುರಕ್ಷಿತವಾದುದಾಗಿದೆ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಹೇಳಲಾಗಿದೆ.

ಇದರ ದರ ಕೂಡ ಅತಿ ಕಡಿಮೆಯದ್ದಾಗಿದೆ. ಅಲ್ಲದೆ ವೈರಾಣು ನಾಶ ಮಾಡುವ ಶಕ್ತಿ ಹೊಂದಿದೆ ಎಂದು ಪಾವಗಡ ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹೇಳಿದ್ದಾರೆ.

ತುಮಕೂರು: ಕೊರೊನಾ ಹರಡದಂತೆ ನಿಯಂತ್ರಿಸಲು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಬಯೋಕೆಮಿಕಲ್ ಅನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡಲಾಯ್ತು.

ಈಗಾಗಲೇ ಕೊರೊನಾ ಸೋಂಕು ನಿರ್ಮೂಲನೆ ಮಾಡಲು ಹೈಪಾಕ್ಸಿ ಕ್ಲೋರೈಡ್, ಬ್ಲೀಚಿಂಗ್ ಪೌಡರ್ ಬಳಸಿ ಬಹುತೇಕ ಎಲ್ಲಾ ನಗರಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿತ್ತು. ಸಮಗ್ರ ಸೇವಾ ಟ್ರಸ್ಟ್ ವತಿಯಿಂದ ಈ ಕಾರ್ಯ ನಡೆಸಲಾಗುತ್ತಿದೆ.

ಕೊರೊನಾ ಸೋಂಕು ನಿರ್ಮೂಲನೆಗೆ ಡ್ರೋನ್ ಬಳಸಿ ಬಯೋಕೆಮಿಕಲ್ ಸಿಂಪಡನೆ

ನಿತ್ಯ 4 ಡ್ರೋನ್​ಗಳನ್ನು ಬಳಸಿ ಬಯೋಕೆಮಿಕಲ್ ಅನ್ನು ಪಟ್ಟಣದಾದ್ಯಂತ ಸಿಂಪಡನೆ ಮಾಡಲಾಗುತ್ತಿದೆ. ಬಯೋಕಲ್ಚರ್ ಬಳಸಿ ವೈರಸ್ ನಿರ್ಮೂಲನೆ ಮಾಡುವ ಕೆಮಿಕಲ್ ತಯಾರಿಸಲಾಗಿದೆ. ಸಾಮಾನ್ಯವಾಗಿ ಈಗಾಗಲೇ ಬಳಸಲಾಗುತ್ತಿರುವ ಹೈಪಾಕ್ಸಿ ಕ್ಲೋರೈಡ್, ಬ್ಲೀಚಿಂಗ್ ಪೌಡರ್ ಬಳಸಿದಾಗ ವೈರಸ್​ಗಳನ್ನು ನಿರ್ಮೂಲನೆ ಮಾಡಬಹುದು. ಆದರೆ ಅದು ಮನುಷ್ಯನ ಮೇಲೆ ಸಹಜವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೇವಾ ಟ್ರಸ್ಟ್ ವತಿಯಿಂದ ಸಿಂಪಡಿಸಲಾಗುತ್ತಿರೋ ಬಯೋಕೆಮಿಕಲ್ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ. ಶೇ.100ರಷ್ಟು ಸುರಕ್ಷಿತವಾದುದಾಗಿದೆ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಹೇಳಲಾಗಿದೆ.

ಇದರ ದರ ಕೂಡ ಅತಿ ಕಡಿಮೆಯದ್ದಾಗಿದೆ. ಅಲ್ಲದೆ ವೈರಾಣು ನಾಶ ಮಾಡುವ ಶಕ್ತಿ ಹೊಂದಿದೆ ಎಂದು ಪಾವಗಡ ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹೇಳಿದ್ದಾರೆ.

Last Updated : May 18, 2021, 8:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.