ETV Bharat / state

'ಗೌರಿಶಂಕರ್ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ, ಪ್ರಮಾಣ ಮಾಡಿ ಹೇಳಲು ಸಿದ್ಧ'

author img

By

Published : Nov 27, 2022, 10:39 AM IST

ನನ್ನ ಕೊಲೆಗೆ ಶಾಸಕ ಡಿ ಸಿ ಗೌರಿಶಂಕರ್ ಸುಪಾರಿ ನೀಡಿರುವುದು ನಿಜ. ಈ ಕುರಿತು ಒಂದೂವರೆ ತಿಂಗಳ ಹಿಂದೆಯೇ ನಾನು ದೂರು ಕೊಟ್ಟಿದ್ದೇನೆ. ಯಾವ ದೇವರ ಮುಂದೆ ಬೇಕಾದ್ರೂ ಪ್ರಮಾಣ ಮಾಡಿ ಹೇಳಲು ಸಿದ್ಧನಿದ್ದೇನೆ ಎಂದು ಬಿಜೆಪಿ ಮಾಜಿ ಶಾಸಕ ಬಿ ಸುರೇಶ್‌ ಗೌಡ ಹೇಳಿದರು.

b suresh gowda
ಬಿ ಸುರೇಶ್‌ ಗೌಡ

ತುಮಕೂರು: ಶಾಸಕ ಡಿ ಸಿ ಗೌರಿಶಂಕರ್ ನನ್ನ ಕೊಲೆಗೆ ಸುಪಾರಿ ನೀಡಿರುವುದು ನಿಜ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಿ ಹೇಳಲು ಸಿದ್ಧನಿದ್ದೇನೆ, ಸುಳ್ಳು ಹೇಳಿದ್ದರೆ ನಾನು ನಾಶವಾಗಲಿ ಎಂದು ಮಾಜಿ ಶಾಸಕ ಬಿ ಸುರೇಶ್‌ ಗೌಡ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಿ ಸುರೇಶ್‌ ಗೌಡ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗೌರಿಶಂಕರ್ ಅವರನ್ನು ನಾನು ರಾಜಕೀಯವಾಗಿ ವಿರೋಧ ಮಾಡುತ್ತೇನೆ. ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ರಾಜಕಾರಣಿಗಳು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗೌರಿಶಂಕರ್ ಮೊದಲು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಬೇಕು. ನನ್ನ ಕೊಲೆಗೆ ಸುಪಾರಿ ನೀಡಲು ನೇರವಾಗಿ ಅವರು ಭಾಗಿಯಾಗಿದ್ದರಿಂದ ಒಂದೂವರೆ ತಿಂಗಳ ಹಿಂದೆಯೇ ನಾನು ದೂರು ಕೊಟ್ಟಿದ್ದೇನೆ ಎಂದರು.

ಇದನ್ನೂ ಓದಿ: ಮಾಜಿ ಶಾಸಕ ಸುರೇಶ್​ ಕೊಲೆಗೆ ಸಂಚು ಆರೋಪ: ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ಎಫ್​ಐಆರ್

ಗೌರಿಶಂಕರ್ ವಿರುದ್ಧ ಹೈಕೋರ್ಟ್‌ನಲ್ಲಿ ಚುನಾವಣೆ ತಕರಾರು ಅರ್ಜಿ ಹಾಕಿದ್ದೇನೆ. ಅವರ ಮೇಲೆ ಸಿಒಡಿ ವರದಿಯಾಗಿದೆ. ಜನರಿಗೆ ನಕಲಿ ಕೋವಿಡ್ ಲಸಿಕೆ ಹಾಕಿಸಿರುವ ಆರೋಪವಿದೆ. ಈಗ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಈ ಎಲ್ಲಾ ವಿಷಯಗಳಿಂದ ಅವರು ಹತಾಶರಾಗಿದ್ದು, ಯಾವುದೇ ದಾಖಲೆ ಇಲ್ಲದಿದ್ದರೂ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಚಲುವರಾಯಸ್ವಾಮಿ 'ರಾತ್ರಿ ಹೊತ್ತು ಬಿಜೆಪಿ, ಬೆಳಗ್ಗೆ ಹೊತ್ತು ಕಾಂಗ್ರೆಸ್​'​ನವರು: ಶಾಸಕ ಸುರೇಶ್‌ ಗೌಡ ವಾಗ್ದಾಳಿ

ತುಮಕೂರು: ಶಾಸಕ ಡಿ ಸಿ ಗೌರಿಶಂಕರ್ ನನ್ನ ಕೊಲೆಗೆ ಸುಪಾರಿ ನೀಡಿರುವುದು ನಿಜ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಿ ಹೇಳಲು ಸಿದ್ಧನಿದ್ದೇನೆ, ಸುಳ್ಳು ಹೇಳಿದ್ದರೆ ನಾನು ನಾಶವಾಗಲಿ ಎಂದು ಮಾಜಿ ಶಾಸಕ ಬಿ ಸುರೇಶ್‌ ಗೌಡ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಿ ಸುರೇಶ್‌ ಗೌಡ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗೌರಿಶಂಕರ್ ಅವರನ್ನು ನಾನು ರಾಜಕೀಯವಾಗಿ ವಿರೋಧ ಮಾಡುತ್ತೇನೆ. ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ರಾಜಕಾರಣಿಗಳು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗೌರಿಶಂಕರ್ ಮೊದಲು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುವುದನ್ನು ಬಿಡಬೇಕು. ನನ್ನ ಕೊಲೆಗೆ ಸುಪಾರಿ ನೀಡಲು ನೇರವಾಗಿ ಅವರು ಭಾಗಿಯಾಗಿದ್ದರಿಂದ ಒಂದೂವರೆ ತಿಂಗಳ ಹಿಂದೆಯೇ ನಾನು ದೂರು ಕೊಟ್ಟಿದ್ದೇನೆ ಎಂದರು.

ಇದನ್ನೂ ಓದಿ: ಮಾಜಿ ಶಾಸಕ ಸುರೇಶ್​ ಕೊಲೆಗೆ ಸಂಚು ಆರೋಪ: ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ಎಫ್​ಐಆರ್

ಗೌರಿಶಂಕರ್ ವಿರುದ್ಧ ಹೈಕೋರ್ಟ್‌ನಲ್ಲಿ ಚುನಾವಣೆ ತಕರಾರು ಅರ್ಜಿ ಹಾಕಿದ್ದೇನೆ. ಅವರ ಮೇಲೆ ಸಿಒಡಿ ವರದಿಯಾಗಿದೆ. ಜನರಿಗೆ ನಕಲಿ ಕೋವಿಡ್ ಲಸಿಕೆ ಹಾಕಿಸಿರುವ ಆರೋಪವಿದೆ. ಈಗ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಈ ಎಲ್ಲಾ ವಿಷಯಗಳಿಂದ ಅವರು ಹತಾಶರಾಗಿದ್ದು, ಯಾವುದೇ ದಾಖಲೆ ಇಲ್ಲದಿದ್ದರೂ ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಚಲುವರಾಯಸ್ವಾಮಿ 'ರಾತ್ರಿ ಹೊತ್ತು ಬಿಜೆಪಿ, ಬೆಳಗ್ಗೆ ಹೊತ್ತು ಕಾಂಗ್ರೆಸ್​'​ನವರು: ಶಾಸಕ ಸುರೇಶ್‌ ಗೌಡ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.