ತುಮಕೂರು: ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 8,20,000 ರೂ. ಮೌಲ್ಯದ 183 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಹಾಗೂ 450 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಜುನಾಥ ಬಂಧಿತ ಆರೋಪಿ. ಈತ 2020ರ ಆಗಸ್ಟ್ 15ರಂದು ತುಮಕೂರಿನ ಹಳೇ ಭೀಮಸಂದ್ರ ಗ್ರಾಮದ ನಾಗರತ್ನಮ್ಮ ಎಂಬುವರ ಮನೆ ಬೀಗ ಒಡೆದು 68 ಗ್ರಾಂ ಚಿನ್ನಾಭರಣ ಮತ್ತು 6 ಸಾವಿರ ರೂ.ಹಣ ದೋಚಿದ್ದ.
ತುಮಕೂರು ನಗರ, ಕ್ಯಾತ್ಸಂದ್ರ, ಹೆಬ್ಬೂರು ಮತ್ತು ದಾಬಸ್ ಪೇಟೆ ಠಾಣೆ,ತಿಲಕ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 17 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಿಲಕ್ ಪಾರ್ಕ್ ಠಾಣೆ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.