ETV Bharat / state

ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ನೀರಿಗೆ ಬಿದ್ದು ಸಾವು

author img

By

Published : Jan 12, 2021, 7:38 PM IST

Updated : Jan 12, 2021, 8:32 PM IST

ಶಿವಮೊಗ್ಗದ ವಿನಾಯಕ ನಗರದ ವಿನಾಯಕ ಎಂಬ ಯುವಕ ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋಗಿದ್ದಾಗ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ಸಾವು
ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ಸಾವು

ಶಿವಮೊಗ್ಗ: ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗಾಜನೂರು ಬಳಿ ನಡೆದಿದೆ.

ಸೆಲ್ಫಿ ತೆಗೆಯಲು ಹೋದ ಯುವಕ ನೀರಿಗೆ ಬಿದ್ದು ಸಾವು

ಶಿವಮೊಗ್ಗದ ವಿನಾಯಕ ನಗರದ ವಿನಾಯಕ (22) ತನ್ನ ಕುಟುಂಬ ಹಾಗೂ ಸ್ನೇಹಿತರ ಜೊತೆ ಡ್ಯಾಂಗೆ ಹೋಗಿದ್ದ. ಡ್ಯಾಂನ ಮುಂಭಾಗ ಪವರ್ ಹೌಸ್​​ನಿಂದ ನೀರು ಹೋಗಲು ಇರುವ ಜಾಗದ ಬಳಿ ಸೆಲ್ಫಿ ಪಡೆಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಓದಿ:ತಾಯಿ-ಮಗಳ‌ನ್ನು ಒಂದು ಮಾಡಿದ ಸಾಗರ ಪೊಲೀಸರು !

ಈ ವೇಳೆ ಮಣ್ಣು ಕುಸಿತವಾಗಿ ವಿನಾಯಕ ನೀರಿಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬಸ್ಥರು ಹಾಗೂ ಸ್ನೇಹಿತರು ವಿನಾಯಕನನ್ನು ಬಚಾವ್ ಮಾಡಲು ಹೋಗಿದ್ರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ ಸತತ ಮೂರು ಗಂಟೆ ಪ್ರಯತ್ನದ ನಂತರ ಶವ ಪತ್ತೆಯಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ತುಂಗಾ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗಾಜನೂರು ಬಳಿ ನಡೆದಿದೆ.

ಸೆಲ್ಫಿ ತೆಗೆಯಲು ಹೋದ ಯುವಕ ನೀರಿಗೆ ಬಿದ್ದು ಸಾವು

ಶಿವಮೊಗ್ಗದ ವಿನಾಯಕ ನಗರದ ವಿನಾಯಕ (22) ತನ್ನ ಕುಟುಂಬ ಹಾಗೂ ಸ್ನೇಹಿತರ ಜೊತೆ ಡ್ಯಾಂಗೆ ಹೋಗಿದ್ದ. ಡ್ಯಾಂನ ಮುಂಭಾಗ ಪವರ್ ಹೌಸ್​​ನಿಂದ ನೀರು ಹೋಗಲು ಇರುವ ಜಾಗದ ಬಳಿ ಸೆಲ್ಫಿ ಪಡೆಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಓದಿ:ತಾಯಿ-ಮಗಳ‌ನ್ನು ಒಂದು ಮಾಡಿದ ಸಾಗರ ಪೊಲೀಸರು !

ಈ ವೇಳೆ ಮಣ್ಣು ಕುಸಿತವಾಗಿ ವಿನಾಯಕ ನೀರಿಗೆ ಬಿದ್ದಿದ್ದಾನೆ. ತಕ್ಷಣ ಕುಟುಂಬಸ್ಥರು ಹಾಗೂ ಸ್ನೇಹಿತರು ವಿನಾಯಕನನ್ನು ಬಚಾವ್ ಮಾಡಲು ಹೋಗಿದ್ರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ ಸತತ ಮೂರು ಗಂಟೆ ಪ್ರಯತ್ನದ ನಂತರ ಶವ ಪತ್ತೆಯಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 12, 2021, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.