ETV Bharat / state

ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

author img

By

Published : Aug 25, 2019, 8:21 PM IST

ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ಆಗಸ್ಟ್ 26ರಂದು ಸಾಗರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಹೇಳಿದರು.

ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರ ಆಗ್ರಹ

ಶಿವಮೊಗ್ಗ: ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಾಳೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಎಚ್ಚರಿಕೆ ನೀಡಿದರು.

ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರ ಆಗ್ರಹ

ಸಾಗರ ತಾಲೂಕಿನ ಮಜರೆಕುಂದೂರು ಬಳಿ ನಿರ್ಮಿಸಲು ಹೊರಟಿರುವ ಯೋಜನೆಯಿಂದ ನೂರಾರು ಕುಟುಂಬಗಳು ಅಲೆಮಾರಿಗಳಾಗುತ್ತವೆ. ಹಿಂದಿನ ಶರಾವತಿ ಯೋಜನೆಯಿಂದಾಗಿ ಸಂತ್ರಸ್ತರಾದವರೂ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಸರ್ಕಾರ ಮತ್ತೆ ನಮ್ಮನ್ನು ಬೀದಿಗೆ ತಳ್ಳುತ್ತದೆ ಎಂದು ದೂರಿದರು.

ಶಿವಮೊಗ್ಗ: ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಆಗ್ರಹಿಸಿ ನಾಳೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಕೆ.ಸಿ.ಟಾಕಪ್ಪ ಎಚ್ಚರಿಕೆ ನೀಡಿದರು.

ಅವೈಜ್ಞಾನಿಕ ಕಲ್ಲೋಡ್ಡು ಹಳ್ಳ ಯೋಜನೆ ಕೈಬಿಡುವಂತೆ ಗ್ರಾಮಸ್ಥರ ಆಗ್ರಹ

ಸಾಗರ ತಾಲೂಕಿನ ಮಜರೆಕುಂದೂರು ಬಳಿ ನಿರ್ಮಿಸಲು ಹೊರಟಿರುವ ಯೋಜನೆಯಿಂದ ನೂರಾರು ಕುಟುಂಬಗಳು ಅಲೆಮಾರಿಗಳಾಗುತ್ತವೆ. ಹಿಂದಿನ ಶರಾವತಿ ಯೋಜನೆಯಿಂದಾಗಿ ಸಂತ್ರಸ್ತರಾದವರೂ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಸರ್ಕಾರ ಮತ್ತೆ ನಮ್ಮನ್ನು ಬೀದಿಗೆ ತಳ್ಳುತ್ತದೆ ಎಂದು ದೂರಿದರು.

Intro:ಶಿವಮೊಗ್ಗ,
ಕಲ್ಲೋಡ್ಡು ಯೋಜನೆಗೆ ಭಾರಿ ವಿರೋಧ

ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯನ್ನು ವಿರೋಧಿಸಿ ಜಿಲ್ಲಾದ್ಯಂತ ಪ್ರತಿಭಟನೆಗಳು ಆದವು. ಈಗ ಮತ್ತೆ ಅದೇ ರೀತಿಯ ಹೋರಾಟಗಳು ಪ್ರಾರಂಭವಾಗುತ್ತಿವೆ.
ರಾಜ್ಯ ಸರ್ಕಾರ ಸಾಗರ ತಾಲೂಕಿನ ಮಜರೆ ಕುಂದೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ಕಲ್ಲೋಡ್ಡು ಹಳ್ಳ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಈ ಕುರಿತು ಮಾತನಾಡಿದ ಹೋರಾಟ ಸಮಿತಿಯ ಸದಸ್ಯರಾದ ನಾಗರಾಜ್
ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ .
ಸಾಗರ ತಾಲೂಕಿನ ಕಸಬಾ ಹೋಬಳಿಯ ಬರೂರು ಊರಬಾಗಿಲ ಕೆರೆಯಿಂದ ಕಲ್ಲೋಡ್ಡು ಹಳ್ಳ ಹರಿಯುತ್ತದೆ. ಈ ಹಳ್ಳವು ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ ಹಾಗಾಗಿ ಇಲ್ಲಿ ಆಣೆಕಟ್ಟು ಕಟ್ಟುವ ಯೋಜನೆಯೇ ಅವೈಜ್ಞಾನಿಕ ವಾಗಿದೆ. ಯೋಜನೆಯಿಂದ ಬರೂರು ಗ್ರಾಮಪಂಚಾಯಿತಿಯ 800 ರೈತ ಕುಟುಂಬಗಳು ಬೀದಿಗೆ ಬೀಳಲಿದೆ. ಈಗಾಗಲೇ ಶರಾವತಿ ಯೋಜನೆಯಿಂದಾಗಿ ಸಂತ್ರಸ್ತ ರಾಗಿದ್ದೇವೆ ಈಗ ಸರ್ಕಾರ ಮತ್ತೆ ನಮ್ಮನ್ನ ಅಲೆಮಾರಿಗಳನ್ನಾಗಿ ಬೀದಿಗೆ ತಳ್ಳುತ್ತಿದೆ ಹಾಗಾಗಿ ಯಾವುದೇ ಕಾರಣಕ್ಕೂ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.
ನಂತರದಲ್ಲಿ ಮಾತನಾಡಿದ ಕಲ್ಲೋಡ್ಡು ಹೋರಾಟ ಸಮಿತಿಯ ಅಧ್ಯಕ್ಷರಾದ ಕೆ.ಸಿ ಟಾಕಪ್ಪ ನೂರಾರು ವರ್ಷಗಳಿಂದ ಬದುಕನ್ನು ಕಟ್ಟಿಕೊಂಡು ಬಂದಿದ್ದೇವೆ. ಈ ಭಾಗದಲ್ಲಿ ಕೃಷಿ ಭೂಮಿಯನ್ನೇ ನಂಬಿಕೊಂಡು ಬದುಕುತ್ತಿದ್ದೆವೆ. ಈ ಯೋಜನೆ ಯಿಂದ 800ಕ್ಕೂ ಹೆಚ್ಚು ಕುಟುಂಬಗಳು ಬಿದಿಗೆ ಬರುತ್ತದೆ ಹಾಗಾಗಿ ಸರ್ಕಾರ ಈ ಕೂಡಲೇ ಈ ಯೋಜನೆ ಯನ್ನು ಕೈಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬೈಟ್ - ನಾಗರಾಜ್ ಹೋರಾಟ ಸಮಿತಿ ಯ ಸದಸ್ಯ
ಬೈಟ್- ಕೆ.ಸಿ ಟಾಕಪ್ಪ ಕಲ್ಲೋಡ್ಡು ಹೋರಾಟ ಸಮಿತಿಯ ಅದ್ಯಕ್ಷರು
ಭೀಮಾನಾಯ್ಕ ಎಸ್ ಶಿವಮೊಗ್ಗ



Body:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.