ಶಿವಮೊಗ್ಗ: ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವೀರಾಪುರದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂವತ್ತು ವರ್ಷಗಳಿಂದ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರದಲ್ಲಿ ಗ್ರಾಮಸ್ಥರು ವಾಸವಿದ್ದರು ಸಹ ಇಲ್ಲಿಯವರೆಗೂ ಖಾತೆ ಪಹಣಿ ಹಾಗೂ ಯಾವುದೇ ಮೂಲ ಸೌಕರ್ಯಗಳು ಇಲ್ಲ, ಸರಿಯಾದ ರೀತಿಯಲ್ಲಿ ವಿದ್ಯುತ್, ಶೌಚಾಲಯ, ಅಂಗನವಾಡಿ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಕೇವಲ ಚುನಾವಣೆಗೆ ಬಂದಾಗ ನೂರು ರೂ ಕೊಟ್ಟು ಓಟು ಗೆದ್ದುಕೊಂಡು ಹೋಗುವ ರಾಜಕಾರಣಿಗಳು ನಮ್ಮ ಸಮಸ್ಯೆಯನ್ನು ಒಗೆಹರಿಸಿಲ್ಲ ಎಂದು ಆಗ್ರಹಿಸಿದರು.
ಹಾಗಾಗಿ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ವೀರಾಪುರ ಗ್ರಾಮದ ಗ್ರಾಮ ಠಾಣಾ ಅಳತೆ ಮಾಡಿಕೊಡಬೇಕು ಹಾಗೂ ಗ್ರಾಮ ಠಾಣಾದಲ್ಲಿ ಅತಿಕ್ರಮಣ ಮಾಡಿಕೊಂಡು ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವವರನ್ನು ತೆರವುಗೊಳಿಸಿ ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.