ETV Bharat / state

ಶಿವಮೊಗ್ಗ: ಬರ್ತ್​ಡೇ ಆಚರಣೆಗೆ ಹೊರಟ ಸ್ನೇಹಿತರಿಬ್ಬರು ಅಪಘಾತದಲ್ಲಿ ಸಾವು

author img

By ETV Bharat Karnataka Team

Published : Jan 1, 2024, 11:46 AM IST

ಬೈಕ್​ ಹಾಗೂ ಬೊಲೆರೋ ವಾಹನದ ನಡುವಿನ ಅಪಘಾತದಲ್ಲಿ ಸ್ನೇಹಿತರಿಬ್ಬರು ಮೃತಪಟ್ಟ ಘಟನೆ ಭದ್ರಾವತಿಯಲ್ಲಿ ಸಂಭವಿಸಿದೆ.

two-youths-died-in-accident-at-bhadravati
ಶಿವಮೊಗ್ಗ: ಬರ್ತ್​ಡೇ ಆಚರಣೆಗೆ ಹೊರಟ ಸ್ನೇಹಿತರಿಬ್ಬರು ಅಪಘಾತದಲ್ಲಿ ಸಾವು

ಶಿವಮೊಗ್ಗ: ಹುಟ್ಟುಹಬ್ಬದ ದಿನವೇ ಯುವಕ ಹಾಗೂ ಆತನ ಸ್ನೇಹಿತ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಭದ್ರಾವತಿ ತಾಲೂಕು ಹೊನ್ನಾವಿಲೆ ಗ್ರಾಮದ ರಮೇಶ್ (23) ಹಾಗೂ ತನ್ನ ಸ್ನೇಹಿತ ಚೇತನ್ (23) ಮೃತಪಟ್ಟವರು ಎಂದು ತಿಳಿದುಬಂದಿದೆ.

ಯುವಕರು ಭದ್ರಾವತಿ ಪಟ್ಟಣಕ್ಕೆ ಹೋಗುವಾಗ ಅಲ್ಲಿನ ಹೊರವಲಯದ ಸೀಗೆಬಾಗಿ ಬಳಿ ಬೊಲೆರೋ ವಾಹನ ಹಾಗೂ ಯುವಕರಿದ್ದ ಬೈಕ್​ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಮೇಶ್ ಹಾಗೂ ಚೇತನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್​ಗೆ ಡಿಕ್ಕಿ ಹೊಡೆದ ಬೊಲೆರೋ ಪಲ್ಟಿಯಾಗಿದೆ. ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್​ಗೆ ನಿನ್ನೆ ಹುಟ್ಟಿದ ದಿನವಾಗಿತ್ತು. ಮನೆಯಲ್ಲೇ ಬರ್ತ್​ ಡೇ ಆಚರಿಸಿಕೊಳ್ಳುವಂತೆ ಪೋಷಕರು ತಿಳಿಸಿದ್ದರು. ಆದರೆ, ತಾನು ಸ್ನೇಹಿತರ ಜೊತೆ ಭದ್ರಾವತಿಗೆ ಹೋಗಿ ಬರುವುದಾಗಿ ಹೇಳಿ ರಾತ್ರಿ 7 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದ. ದುರದೃಷ್ಟವಶಾತ್ ರಮೇಶ್ ಹಾಗೂ ಆತನ ಸ್ನೇಹಿತ ಒಟ್ಟಿಗೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತರಿಬ್ಬರೂ ಕೂಡ ಬಡ ಕುಟುಂಬದವರಾಗಿದ್ದರು. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ, ಇಬ್ಬರೂ ಕೂಡ ತಮ್ಮ ಪೋಷಕರಿಗೆ ಒಬ್ಬರೇ ಗಂಡು ಮಕ್ಕಳಾಗಿದ್ದರು. ಅಪಘಾತದ ಕುರಿತು ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಪಾನಮತ್ತ ಸ್ನೇಹಿತರ ಗಲಾಟೆ; ಓರ್ವನ ಹತ್ಯೆ

ಶಿವಮೊಗ್ಗ: ಹುಟ್ಟುಹಬ್ಬದ ದಿನವೇ ಯುವಕ ಹಾಗೂ ಆತನ ಸ್ನೇಹಿತ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಭದ್ರಾವತಿ ತಾಲೂಕು ಹೊನ್ನಾವಿಲೆ ಗ್ರಾಮದ ರಮೇಶ್ (23) ಹಾಗೂ ತನ್ನ ಸ್ನೇಹಿತ ಚೇತನ್ (23) ಮೃತಪಟ್ಟವರು ಎಂದು ತಿಳಿದುಬಂದಿದೆ.

ಯುವಕರು ಭದ್ರಾವತಿ ಪಟ್ಟಣಕ್ಕೆ ಹೋಗುವಾಗ ಅಲ್ಲಿನ ಹೊರವಲಯದ ಸೀಗೆಬಾಗಿ ಬಳಿ ಬೊಲೆರೋ ವಾಹನ ಹಾಗೂ ಯುವಕರಿದ್ದ ಬೈಕ್​ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಮೇಶ್ ಹಾಗೂ ಚೇತನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್​ಗೆ ಡಿಕ್ಕಿ ಹೊಡೆದ ಬೊಲೆರೋ ಪಲ್ಟಿಯಾಗಿದೆ. ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್​ಗೆ ನಿನ್ನೆ ಹುಟ್ಟಿದ ದಿನವಾಗಿತ್ತು. ಮನೆಯಲ್ಲೇ ಬರ್ತ್​ ಡೇ ಆಚರಿಸಿಕೊಳ್ಳುವಂತೆ ಪೋಷಕರು ತಿಳಿಸಿದ್ದರು. ಆದರೆ, ತಾನು ಸ್ನೇಹಿತರ ಜೊತೆ ಭದ್ರಾವತಿಗೆ ಹೋಗಿ ಬರುವುದಾಗಿ ಹೇಳಿ ರಾತ್ರಿ 7 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದ. ದುರದೃಷ್ಟವಶಾತ್ ರಮೇಶ್ ಹಾಗೂ ಆತನ ಸ್ನೇಹಿತ ಒಟ್ಟಿಗೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತರಿಬ್ಬರೂ ಕೂಡ ಬಡ ಕುಟುಂಬದವರಾಗಿದ್ದರು. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ, ಇಬ್ಬರೂ ಕೂಡ ತಮ್ಮ ಪೋಷಕರಿಗೆ ಒಬ್ಬರೇ ಗಂಡು ಮಕ್ಕಳಾಗಿದ್ದರು. ಅಪಘಾತದ ಕುರಿತು ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಪಾನಮತ್ತ ಸ್ನೇಹಿತರ ಗಲಾಟೆ; ಓರ್ವನ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.