ETV Bharat / state

ಮಾನಸಿಕ ರೋಗಿಗಳನ್ನು ಅಣಕಿಸಬೇಡಿ, ತಾಳ್ಮೆಯಿಂದ ಅವರ ದುಗುಡ ಕೇಳಿ: ಡಾ.ಪ್ರಮೋದ್ ಹೆಚ್. ಎಲ್ - Treatment may prevent suicidal ideation

ಸ್ನೇಹಿತರು ಹಾಗೂ ಆಪ್ತರು ನಿಮ್ಮ ಬಳಿ ದು:ಖ ಹಾಗೂ ಆತ್ಮಹತ್ಯೆ ಸೂಚನೆಗಳ ಬಗ್ಗೆ ಮಾತನಾಡಿದಾಗ ನಿರ್ಲಕ್ಷಿಸದೆ ಅವರಿಗೆ ಧೈರ್ಯ ತುಂಬಬೇಕು ಎಂದು ಶಿವಮೊಗ್ಗದಲ್ಲಿ ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಸಲಹೆ ನೀಡಿದ್ದಾರೆ.

ಡಾ.ಪ್ರಮೋದ್ ಹೆಚ್. ಎಲ್
author img

By

Published : Sep 18, 2019, 8:25 PM IST

ಶಿವಮೊಗ್ಗ: ಹೆಚ್ಚಿನ ಆತ್ಮಹತ್ಯೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣವಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯಿಂದ ಕಾಪಾಡಬಹುದು ಎಂದು ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಹೇಳಿದರು.

ನಗರದಲ್ಲಿ ಖಾಸಗಿ ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶೇಕಡ 90% ರಷ್ಟು ಆತ್ಮಹತ್ಯೆಗಳು ಮನೋರೋಗದಿಂದ ಆದರೆ, ಇನ್ನೂ ಶೇಕಡ 10% ರಷ್ಟು ತಾಳ್ಮೆ ಇಲ್ಲದೆ ದುಡುಕಿನಿಂದ ತೆಗೆದುಕೊಳ್ಳುವ ನಿರ್ಧಾರಗಳಿಂದ ಆಗುತ್ತವೆ. ಈ ಕಾರಣದಿಂದಾಗಿ ಜೀವನದಲ್ಲಿ ತಾಳ್ಮೆ ಅಗತ್ಯ ಹಾಗೂ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಇದ್ದಾಗ ಅದನ್ನು ಆಪ್ತರೊಂದಿಗೆ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.

ರಸ್ತೆ ಅಪಘಾತಗಳನ್ನು ಹೊರತು ಪಡಿಸಿದರೆ ಯುವ ಜನತೆ ಹೆಚ್ಚಿನದಾಗಿ ಸಾವಿಗೀಡಾಗುತ್ತಿರುವುದು ಆತ್ಮಹತ್ಯೆಯಿಂದಾಗಿದೆ. ನಮ್ಮ ಜಿಲ್ಲೆಯಲ್ಲೆ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮನಸ್ಸಿನ ನೋವುಗಳು ಇನ್ನೊಬ್ಬರಿಗೆ ಹೇಳಿಕೊಂಡಾಗ ಕಡಿಮೆಯಾಗುತ್ತವೆ. ಆ ಕಾರಣದಿಂದ ಸಲಹೆಗಳನ್ನು ನೀಡಲೇ ಬೇಕೆಂದಿಲ್ಲ ತಾಳ್ಮೆಯಿಂದ ನಾವು ಕೇಳಿಸಿಕೊಂಡರು ಸಾಕು, ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಅವರ ಸಮಸ್ಯೆ ಹಾಗೂ ನ್ಯೂನ್ಯತೆಗಳನ್ನು ಅಣಕಿಸಬಾರದು ಎಂದು ಸಲಹೆ ನೀಡಿದರು.

ಶಿವಮೊಗ್ಗ: ಹೆಚ್ಚಿನ ಆತ್ಮಹತ್ಯೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣವಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯಿಂದ ಕಾಪಾಡಬಹುದು ಎಂದು ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಹೇಳಿದರು.

ನಗರದಲ್ಲಿ ಖಾಸಗಿ ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಶೇಕಡ 90% ರಷ್ಟು ಆತ್ಮಹತ್ಯೆಗಳು ಮನೋರೋಗದಿಂದ ಆದರೆ, ಇನ್ನೂ ಶೇಕಡ 10% ರಷ್ಟು ತಾಳ್ಮೆ ಇಲ್ಲದೆ ದುಡುಕಿನಿಂದ ತೆಗೆದುಕೊಳ್ಳುವ ನಿರ್ಧಾರಗಳಿಂದ ಆಗುತ್ತವೆ. ಈ ಕಾರಣದಿಂದಾಗಿ ಜೀವನದಲ್ಲಿ ತಾಳ್ಮೆ ಅಗತ್ಯ ಹಾಗೂ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಇದ್ದಾಗ ಅದನ್ನು ಆಪ್ತರೊಂದಿಗೆ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.

ರಸ್ತೆ ಅಪಘಾತಗಳನ್ನು ಹೊರತು ಪಡಿಸಿದರೆ ಯುವ ಜನತೆ ಹೆಚ್ಚಿನದಾಗಿ ಸಾವಿಗೀಡಾಗುತ್ತಿರುವುದು ಆತ್ಮಹತ್ಯೆಯಿಂದಾಗಿದೆ. ನಮ್ಮ ಜಿಲ್ಲೆಯಲ್ಲೆ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮನಸ್ಸಿನ ನೋವುಗಳು ಇನ್ನೊಬ್ಬರಿಗೆ ಹೇಳಿಕೊಂಡಾಗ ಕಡಿಮೆಯಾಗುತ್ತವೆ. ಆ ಕಾರಣದಿಂದ ಸಲಹೆಗಳನ್ನು ನೀಡಲೇ ಬೇಕೆಂದಿಲ್ಲ ತಾಳ್ಮೆಯಿಂದ ನಾವು ಕೇಳಿಸಿಕೊಂಡರು ಸಾಕು, ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಅವರ ಸಮಸ್ಯೆ ಹಾಗೂ ನ್ಯೂನ್ಯತೆಗಳನ್ನು ಅಣಕಿಸಬಾರದು ಎಂದು ಸಲಹೆ ನೀಡಿದರು.

Intro:ಶಿವಮೊಗ್ಗ,

ಚಿಕಿತ್ಸೆಯಿಂದ ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿಗಳ ಆತ್ಮಹತ್ಯೆ ತಡೆ ಸಾಧ್ಯ: ಡಾ. ಪ್ರಮೋದ್ ಹೆಚ್. ಎಲ್

ಹೆಚ್ಚಿನ ಆತ್ಮಹತ್ಯೆಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣವಾಗಿದ್ದು, ಅಂತಹ ವ್ಯಕ್ತಿಗಳಿಗೆ ಸೂಕ್ತ ಮನೋವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆ ಕೊಡಿಸುವುದರ ಮೂಲಕ ಗುಣಪಡಿಸಿ ಆತ್ಮಹತ್ಯೆಯಿಂದ ಕಾಪಾಡಬಹುದಾಗಿದೆ ಎಂದು ಖ್ಯಾತ ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಹೇಳಿದರು.
ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ಇವುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೇಕಡ 90% ರಷ್ಟು ಆತ್ಮಹತ್ಯೆಗಳು ಮನೋರೋಗದಿಂದ ಆದರೆ, ಇನ್ನೂ ಶೇಕಡ 10% ರಷ್ಟು ತಾಳ್ಮೆ ಇಲ್ಲದೆ ದುಡುಕಿನಿಂದ ತೆಗೆದುಕೊಳ್ಳುವ ನಿರ್ಧಾರಗಳಿಂದ ಆಗುತ್ತವೆ. ಈ ಕಾರಣದಿಂದಾಗಿ ಜೀವನದಲ್ಲಿ ತಾಳ್ಮೆ ಅಗತ್ಯ ಹಾಗೂ ಮಾನಸಿಕ ಸಮಸ್ಯೆಗಳ ಲಕ್ಷಣಗಳು ಇದ್ದಾಗ ಅದನ್ನು ಆಪ್ತರೊಂದಿಗೆ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಅವರು ಹೇಳಿದರು.
ರಸ್ತೆ ಅಪಘಾತಗಳನ್ನು ಹೊರತು ಪಡಿಸಿದರೆ ಯುವ ಜನತೆ ಹೆಚ್ಚಿನದಾಗಿ ಸಾವಿಗೀಡಾಗುತ್ತಿರುವುದು ಆತ್ಮಹತ್ಯೆಯಿಂದಾಗಿದೆ. ನಮ್ಮ ಜಿಲ್ಲೆಯಲ್ಲೇ ವರ್ಷಕ್ಕೆ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸ್ನೇಹಿತರು ಹಾಗೂ ಆಪ್ತರು ನಿಮ್ಮ ಬಳಿ ದು:ಖ ಹಾಗೂ ಆತ್ಮಹತ್ಯೆ ಸೂಚನೆಗಳ ಬಗ್ಗೆ ಮಾತನಾಡಿದಾಗ ನಿರ್ಲಕ್ಷಿಸದೆ ಅವರಿಗೆ ದೈರ್ಯ ತುಂಬಬೇಕು. ಮನಸ್ಸಿನ ನೋವುಗಳು ಇನ್ನೊಬ್ಬರಿಗೆ ಹೇಳಿಕೊಂಡಾಗ ಕಡಿಮೆಯಾಗುತ್ತವೆ. ಆ ಕಾರಣದಿಂದ ಸಲಹೆಗಳನ್ನು ನೀಡಲೇ ಬೇಕೆಂದಿಲ್ಲ ತಾಳ್ಮೆಯಿಂದ ನಾವು ಕೇಳಿಸಿಕೊಂಡರು ಸಾಕು, ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಅವರ ಸಮಸ್ಯೆ ಹಾಗೂ ನ್ಯೂನ್ಯತೆಗಳನ್ನು ಅಣಕಿಸುವುದು ಮಾಡಬಾರದು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ್ಯ ಜಿ. ಮಧು ಮಾತನಾಡಿ ಜೀವನದಲ್ಲಿನ ಸಮಸ್ಯೆಗಳ ಬಗ್ಗೆ ಯೋಚಿಸುವುದಕ್ಕಿಂತಲೂ ಅದನ್ನು ಬಗೆಹರಿಸುವ ಮಾರ್ಗದ ಬಗ್ಗೆ ಯೋಚಿಸಿದರೆ ನಮ್ಮ ಜೀವನ ಸುಲಭವಾಗುತ್ತದೆ. ಅಂದಿನ ಸಮಸ್ಯೆಗಳನ್ನು ಅಂದೇ ಬಗೆಹರಿಸಿಕೊಳ್ಳುವುದರ ಮೂಲಕ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಆಗ ನಮ್ಮ ಜೀವನದ ಆನಂದ ಹೆಚ್ಚುತ್ತದೆ ಎಂದರು.
ದಿನನಿತ್ಯದ ಜೀವನದಲ್ಲಿ ಧ್ಯಾನ ಹಾಗೂ ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದರ ಮೂಲಕ ಸಧೃಡ ದೇಹ ಹಾಗೂ ಮನಸ್ಸನ್ನು ನಿರ್ಮಿಸಿಕೊಳ್ಳಲು ಯುವ ಜನರಿಗೆ ಅವರು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ, ಜಿಲ್ಲಾ ಕುಷ್ಠರೋಗ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಶಮಾ ಬೇಗಂ ಫಕೃದ್ಧೀನ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮೀ ನಾರಾಯಣ ಭಟ್. ಕೆ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ ಪಾರ್ವತಮ್ಮ ಅಧ್ಯಕ್ಷತೆ ವಹಿಸಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.