ETV Bharat / state

ಅಧಿಕಾರಿಗಳ ಯಡವಟ್ಟಿಗೆ ಚುನಾವಣಾ ಅಭ್ಯರ್ಥಿಗಳ ಕಣ್ಣೀರು...ಎಲ್ಲಿ ಗೊತ್ತಾ? - Confusion of ballots due to election officials' mistake

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 6000 ಮತದಾರ ಪೈಕಿ 600 ಮಂದಿ ಮತ ಚಲಾಯಿಸಿದ್ದರು.ಆದರೆ ಚುನಾವಣಾ ಅಧಿಕಾರಿಗಳ ತಪ್ಪಿನಿಂದಾಗಿ ಮತಪತ್ರಗಳ ಗೊಂದಲ ಸೃಷ್ಟಿಯಾಯಿತು.

tears-of-election-candidates-by-fault-of-officials-in-shimoga
ಅಧಿಕಾರಿಗಳ ಯಡವಟ್ಟಿಗೆ ಚುನಾವಣಾ ಅಭ್ಯರ್ಥಿಗಳ ಕಣ್ಣೀರು
author img

By

Published : Dec 22, 2019, 8:54 PM IST

Updated : Dec 22, 2019, 11:58 PM IST

ಶಿವಮೊಗ್ಗ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 6000 ಮತದಾರ ಪೈಕಿ 600 ಮಂದಿ ಮತ ಚಲಾಯಿಸಿದ್ದರು.ಆದರೆ ಚುನಾವಣಾ ಅಧಿಕಾರಿಗಳ ತಪ್ಪಿನಿಂದಾಗಿ ಮತಪತ್ರಗಳ ಗೊಂದಲ ಸೃಷ್ಟಿಯಾಯಿತು.

ಅಧಿಕಾರಿಗಳ ಯಡವಟ್ಟಿಗೆ ಚುನಾವಣಾ ಅಭ್ಯರ್ಥಿಗಳ ಕಣ್ಣೀರು...ಎಲ್ಲಿ ಗೊತ್ತಾ?

ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಅಭ್ಯರ್ಥಿಗಳ ಪೋಟೋ, ಚಿಹ್ನೆ ಇರುವ ಸ್ಥಳದಲ್ಲಿ ಬೀದರ್ ಜಿಲ್ಲೆಯ ನಿರ್ದೇಶಕರ ಪೋಟೋ, ಚಿಹ್ನೆ ಇರುವ ಮತಪತ್ರಗಳಿದ್ದವು. ಇದರಿಂದಾಗಿ ಮತ ಕೇಂದ್ರದಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಕೂಡಲೆ ಮತಗಟ್ಟೆ ಬಳಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.

ಗೊಂದಲ ಆರಂಭವಾಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಲಾರಂಭಿಸಿದರು. ಆ ಕೂಡಲೇ 9 ಬೂತ್ ನಲ್ಲಿ ನಡೆಯುತ್ತಿದ್ದ ಮತದಾನ ಸ್ಥಗಿತಗೊಳಿಸಲಾಯಿತು. ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಮತ್ತೋಂದು ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಅಭ್ಯರ್ಥಿಗಳು ಹಾಗೂ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸಹ ಅಭ್ಯರ್ಥಿಗಳು, ಚುನಾವಣಾಧಿಕಾರಿ ಅವರನ್ನು ಪ್ರತ್ಯೇಕ್ಷ ಕೊಠಡಿಯಲ್ಲಿ ಕೂರಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿದರು. ಬಳಿಕ ಚುನಾವಣಾಧಿಕಾರಿಗಳು ಚುನಾವಣೆ ರದ್ದುಗೊಂಡಿದ್ದನ್ನು ಘೋಷಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಮಾಹಿತಿ ನೀಡಿದರು.

ಇನ್ನೂ ಚುನಾವಣೆಗಾಗಿ ಮನೆ ಮನೆ ಸುತ್ತಿ ಮತದಾರರನ್ನು ಮನವೊಲಿಸಿದ್ದ ಅಭ್ಯರ್ಥಿಯ ಕುಟುಂಬವೊಂದು ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿತು. ಅಭ್ಯರ್ಥಿಯ ಪತಿ ಶ್ರೀನಿವಾಸ್ ಅವರು ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. ಇದನ್ನು ನೋಡುತ್ತಿದ್ದಂತೆ ಅವರ ಪತ್ನಿ, ಅಭ್ಯರ್ಥಿ ಮಂಜುಳಾ ಮತ್ತು ಮಕ್ಕಳು ಸಹ ಕಣ್ಣೀರು ಹಾಕಲು ಆರಂಭಿಸಿದರು.

ಶಿವಮೊಗ್ಗ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 6000 ಮತದಾರ ಪೈಕಿ 600 ಮಂದಿ ಮತ ಚಲಾಯಿಸಿದ್ದರು.ಆದರೆ ಚುನಾವಣಾ ಅಧಿಕಾರಿಗಳ ತಪ್ಪಿನಿಂದಾಗಿ ಮತಪತ್ರಗಳ ಗೊಂದಲ ಸೃಷ್ಟಿಯಾಯಿತು.

ಅಧಿಕಾರಿಗಳ ಯಡವಟ್ಟಿಗೆ ಚುನಾವಣಾ ಅಭ್ಯರ್ಥಿಗಳ ಕಣ್ಣೀರು...ಎಲ್ಲಿ ಗೊತ್ತಾ?

ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಅಭ್ಯರ್ಥಿಗಳ ಪೋಟೋ, ಚಿಹ್ನೆ ಇರುವ ಸ್ಥಳದಲ್ಲಿ ಬೀದರ್ ಜಿಲ್ಲೆಯ ನಿರ್ದೇಶಕರ ಪೋಟೋ, ಚಿಹ್ನೆ ಇರುವ ಮತಪತ್ರಗಳಿದ್ದವು. ಇದರಿಂದಾಗಿ ಮತ ಕೇಂದ್ರದಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಕೂಡಲೆ ಮತಗಟ್ಟೆ ಬಳಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.

ಗೊಂದಲ ಆರಂಭವಾಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಲಾರಂಭಿಸಿದರು. ಆ ಕೂಡಲೇ 9 ಬೂತ್ ನಲ್ಲಿ ನಡೆಯುತ್ತಿದ್ದ ಮತದಾನ ಸ್ಥಗಿತಗೊಳಿಸಲಾಯಿತು. ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಮತ್ತೋಂದು ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಅಭ್ಯರ್ಥಿಗಳು ಹಾಗೂ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸಹ ಅಭ್ಯರ್ಥಿಗಳು, ಚುನಾವಣಾಧಿಕಾರಿ ಅವರನ್ನು ಪ್ರತ್ಯೇಕ್ಷ ಕೊಠಡಿಯಲ್ಲಿ ಕೂರಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿದರು. ಬಳಿಕ ಚುನಾವಣಾಧಿಕಾರಿಗಳು ಚುನಾವಣೆ ರದ್ದುಗೊಂಡಿದ್ದನ್ನು ಘೋಷಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಮಾಹಿತಿ ನೀಡಿದರು.

ಇನ್ನೂ ಚುನಾವಣೆಗಾಗಿ ಮನೆ ಮನೆ ಸುತ್ತಿ ಮತದಾರರನ್ನು ಮನವೊಲಿಸಿದ್ದ ಅಭ್ಯರ್ಥಿಯ ಕುಟುಂಬವೊಂದು ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿತು. ಅಭ್ಯರ್ಥಿಯ ಪತಿ ಶ್ರೀನಿವಾಸ್ ಅವರು ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. ಇದನ್ನು ನೋಡುತ್ತಿದ್ದಂತೆ ಅವರ ಪತ್ನಿ, ಅಭ್ಯರ್ಥಿ ಮಂಜುಳಾ ಮತ್ತು ಮಕ್ಕಳು ಸಹ ಕಣ್ಣೀರು ಹಾಕಲು ಆರಂಭಿಸಿದರು.

Intro:ಶಿವಮೊಗ್ಗ,
ಫಾರ್ಮೆಟ್: ಪ್ಯಾಕೇಜ್
ಸ್ಲಗ್: ಅಧಿಕಾರಿಗಳ ಯಡವಟ್ಟಿಗೆ ಚುನಾವಣಾ ಅಭ್ಯರ್ಥಿಗಳ ಕಣ್ಣೀರು.

ಆ್ಯಂಕರ್..........................
ಅಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ರಾಜ್ಯ ಕುರುಬರ ಸಂಘದ ಚುನಾವಣೆ ನಡೆಯಬೇಕಿತ್ತು. ಆದರೇ ಅಲ್ಲಿ ಅಧಿಕಾರಿಗಳ ಒಂದು ಯಡವಟ್ಟಿನಿಂದಾಗಿ ಚುನಾವಣಾ ಸ್ಫರ್ಧೀಸಿದ್ದ ಅಭ್ಯರ್ಥಿಗಳು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿ, ಕೊನೆಗೆ ಚುನಾವಣೆಯೇ ರದ್ದುಗೊಂಡಿದೆ. ಅರೇ ದೀಡೀರನೇ ಚುನಾವಣೆ ಮುಂದಕ್ಕೆ ಹೋಗಿದ್ದಾದರೂ ಯಾಕೇ, ಅಧಿಕಾರಿಗಳು ಮಾಡಿದ ಅಂತಹ ಯಡವಟ್ಟಾದರೂ ಏನೂ ಅಂತೀರಾ... ಹಾಗಾದ್ರೇ ಈ ಸ್ಟೋರಿ ನೋಡಿ.....

ವಾಯ್ಸ್ ಓವರ್............1
ಹೌದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಕುರುಬರ ಸಂಘದ ರಾಜ್ಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅದರಂತೆ ಶಿವಮೊಗ್ಗದಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಮತದಾನ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸುಮಾರು 6000 ಮತದಾರ ಪೈಕಿ 600 ಮಂದಿ ಮತ ಚಲಾಯಿಸಿದ್ದರು.ಆದರೆ ಚುಣಾವಣಾ ಅಧಿಕಾರಿಗಳ ತಪ್ಪಿನಿಂದಾಗಿ ಮತಪತ್ರಗಳ ಗೊಂದಲ ಸೃಷ್ಟಿಯಾಯಿತು. ಶಿವಮೊಗ್ಗ ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇಲ್ಲಿನ ಅಭ್ಯರ್ಥೀಗಳ ಪೋಟೋ, ಚಿಹ್ನೆ ಇರುವ ಸ್ಥಳದಲ್ಲಿ ಬೀದರ್ ಜಿಲ್ಲೆಯ ನಿರ್ದೇಶಕರ ಪೋಟೋ, ಚಿಹ್ನೆ ಇರುವ ಮತಪತ್ರಗಳಿದ್ದವು. ಇದರಿಂದಾಗಿ ಮತ ಕೇಂದ್ರದಲ್ಲಿ ಗೊಂದಲ ಶುರುವಾಯಿತು. ಪೊಲೀಸರು ಕೂಡಲೆ ಮತಗಟ್ಟೆ ಬಳಿ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.
ಬೈಟ್.....1
ಶರತ್. ಎಂ : ಚುನಾವಣೆಗೆ ಸ್ಫರ್ಧಿಸಿದ್ದ ಅಭ್ಯರ್ಥಿ.

ವಾಯ್ಸ್ ಓವರ್.........2
ಇನ್ನು, ಗೊಂದಲ ಆರಂಭವಾಗುತ್ತಿದ್ದಂತೆ ಕೆಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಲಾರಂಭಿಸಿದರು. ಆ ಕೂಡಲೇ 9 ಬೂತ್ ನಲ್ಲಿ ನಡೆಯುತ್ತಿದ್ದ ಮತದಾನ ಸ್ಥಗಿತಗೊಳಿಸಲಾಯಿತು. ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ದುರ್ಗಿಗುಡಿ ಸರ್ಕಾರಿ ಶಾಲೆ ಆವರಣದಲ್ಲಿ ಮತ್ತೋಂದು ಹೈಡ್ರಾಮಾ ನಡೆಯಿತು. ಕೆಲವು ಅಭ್ಯರ್ಥಿಗಳು, ಬೆಂಬಲಿಗರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಪ್ರಸನ್ನಕುಮಾರ್, ಅಭ್ಯರ್ಥಿಗಳು ಹಾಗೂ ಚುನಾವಣಾಧಿ ಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸಹ ಅಭ್ಯರ್ಥಿಗಳು, ಚುನಾವಣಾಧಿಕಾರಿ ಅವರನ್ನು ಪ್ರತ್ಯೇಕ್ಷ ಕೊಠಡಿಯಲ್ಲಿ ಕೂರಿಸಿ ಸಭೆ ನಡೆಸಿ, ಸಮಸ್ಯೆ ಬಗೆಹರಿಸಿದರು.. ಬಳಿಕ ಚುನಾವಣಾಧಿಕಾರಿಗಳು ಚುನಾವಣೆ ರದ್ದುಗೊಂಡಿದ್ದನ್ನು ಘೋಷಿಸಿ, ಮುಂದಿನ ದಿನಾಂಕ ತಿಳಿಸುವುದಾಗಿ ಮಾಹಿತಿ ನೀಡಿದರು.
ಬೈಟ್ ....2
ಎಸ್.ಎಲ್. ರಂಗನಾಥ್ : ಚುನಾವಣೆಗೆ ಸ್ಫರ್ಧಿಸಿದ್ದ ಅಭ್ಯರ್ಥಿ
ಬೈಟ್....3
ಸುಧೀರ್ ಪಾಷಾ : ಚುನಾವಣಾಧಿಕಾರಿ

ವಾಯ್ಸ್ ಓವರ್..........3
ಇನ್ನೂ ಚುನಾವಣೆಗಾಗಿ ಮನೆ ಮನೆ ಸುತ್ತಿ ಮತದಾರರನ್ನು ಮನವೊಲಿಸಿದ್ದ ಅಭ್ಯರ್ಥಿಯ ಕುಟುಂಬವೊಂದು ಚುನಾವಣೆ ರದ್ದುಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿತು. ಅಭ್ಯರ್ಥಿಯ ಪತಿ ಶ್ರೀನಿವಾಸ್ ಅವರು ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ದುಃಖ ತಡೆಯಲಾಗದೆ ಕಣ್ಣೀರು ಹಾಕಿದರು. ಇದನ್ನು ನೋಡುತ್ತಿದ್ದಂತೆ ಅವರ ಪತ್ನಿ, ಅಭ್ಯರ್ಥಿ ಮಂಜುಳಾ ಮತ್ತು ಮಕ್ಕಳು ಸಹ ಕಣ್ಣೀರು ಹಾಕಲು ಆರಂಭಿಸಿದರು. ಕೂಡಲೆ ಮತದಾರರೇ ಇವರನ್ನು ಸಂತೈಸಿ, ಸಮಾಧಾನ ಮಾಡಿದರು ಕಣ್ಣೀರು ಹಾಕುತ್ತಲೇ ಮತದಾರರತ್ತ ಕೈ ಮುಗಿದು ನಿಂತ ಅಭ್ಯರ್ಥಿ ಮಂಜಳಾ ಶ್ರೀನಿವಾಸ್, ದಯವಿಟ್ಟು ತಮ್ಮನ್ನು ಕ್ಷಮಿಸಿಬಿಡಿ. ಇದು ತಮ್ಮಿಂದ ಆದ ತಪ್ಪಲ್ಲ. ಆದರೆ ಮತದಾನಕ್ಕಾಗಿ ಇಲ್ಲಿಯವರೆಗೂ ಬಂದು ಸಮಾಜವನ್ನು ಬೆಂಬಲಿಸಿದ್ದೀರ ಎಂದು ಕಣ್ಣೀರಾದರು.


ಕನ್ ಕ್ಲೂಷನ್ .................
ಒಟ್ಟಾರೆಯಾಗಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಚುನಾವಣೆ ಮುಂದೂಡಲಾಗಿದೆ. ತಿಂಗಳುಗಳ ಕಾಲ ಮತ ಪ್ರಚಾರ ಮಾಡಿದ ಅಭ್ಯರ್ಥಿಗಳು ಮತ್ತೊಮ್ಮೆ ಮತ ಪ್ರಚಾರ ಮಾಡುವ ಪರಿಸ್ಥಿತಿ ಎದುರಾಗಿದ್ದು, ಮತದಾರರನ್ನು ಇನ್ನೋಮ್ಮೆ ಓಲೈಸುವ ಕೆಲಸ ಮಾಡಬೇಕಿದೆ...

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
Last Updated : Dec 22, 2019, 11:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.