ETV Bharat / state

ಶಿವಮೊಗ್ಗ : ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಮೂವರ ಮೇಲೆ ಇರಿತ - Stabbing over 3 people in Shimoga

ಪ್ರಶಾಂತ ಉಡುಪಿಯಲ್ಲಿ ಅಪರಾಧ ಕೃತ್ಯ ಎಸಗಿ ಕೋರ್ಟ್​ನಲ್ಲಿ ನ್ಯಾಯಾಧೀಶರಿಗೆ ನಿಂದಿಸಿ, ಶಿಕ್ಷೆಗೆ ಒಳಗಾಗಿದ್ದಾನೆ. ಈತ ಸ್ವಲ್ಪ‌ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ..

central prison at shimoga
ಕೇಂದ್ರ ಕಾರಾಗೃಹ
author img

By

Published : Dec 20, 2020, 7:04 PM IST

ಶಿವಮೊಗ್ಗ : ಕೇಂದ್ರ ಕಾರಾಗೃಹದ ಓರ್ವ ಕೈದಿ ಮೂವರು ಸಜಾ ಬಂಧಿಗಳ ಮೇಲೆ ಚಮಚದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಪ್ರಕರಣ ಬೆಳಕಿದೆ ಬಂದಿದೆ.

ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಹಲ್ಲೆ : ಕೇಂದ್ರ ಕಾರಾಗೃಹದಲ್ಲಿ ಉಡುಪಿಯಿಂದ ಬಂದಿರುವ ಪ್ರಶಾಂತ ಎಂಬ ಕೈದಿ ಇಂದು ಅಡುಗೆ ಮನೆಯಲ್ಲಿ ಊಟದ ಕೋಣೆಯಲ್ಲಿ ನೀರು ಕುಡಿಯುವ ವಿಚಾರದಲ್ಲಿ ಕೂಗಾಡಿದ್ದಾನೆ.

ಈ ವೇಳೆ ಸಜಾ ಕೈದಿಗಳು ಆತನನ್ನು ಸಮಾಧಾನ ಮಾಡಲು ಮುಂದಾದಾಗ ಕೋಪದಲ್ಲಿ ಬೆನಕಪ್ಪ, ದೇವೆಂದ್ರಪ್ಪ ಹಾಗೂ ಪರಮೇಶ್ವರಪ್ಪ ಎಂಬುವರ ಕೈಗೆ ಚಮಚದಿಂದ ಗಾಯಗೊಳಿಸಿದ್ದಾನೆ.

ಪ್ರಶಾಂತ ಉಡುಪಿಯಲ್ಲಿ ಅಪರಾಧ ಕೃತ್ಯ ಎಸಗಿ ಕೋರ್ಟ್​ನಲ್ಲಿ ನ್ಯಾಯಾಧೀಶರಿಗೆ ನಿಂದಿಸಿ, ಶಿಕ್ಷೆಗೆ ಒಳಗಾಗಿದ್ದಾನೆ. ಈತ ಸ್ವಲ್ಪ‌ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ ಎನ್ನಲಾಗಿದೆ. ಪ್ರಶಾಂತ ಏಕಾಏಕಿ ಸಹ ಕೈದಿಗಳ ನಡುವೆ ಜಗಳವಾಡುವುದು, ಇತರರಿಗೆ ನಿಂದಿಸುವುದು ಆಗಾಗ ಮಾಡುತ್ತಿರುತ್ತಾನೆ.

ಓದಿ: ಪೇಜಾವರ ಮಠದ ವಿಶ್ವೇಶತೀರ್ಥರ ಹಾದಿಯಲ್ಲೇ ಅವರ ಶಿಷ್ಯ: ಹೊಸ ಕಾಂತ್ರಿಗೆ ನಾಂದಿ

ಈತನ ಬಗ್ಗೆ ಸಹ ಕೈದಿಗಳು ಹಾಗೂ ಜೈಲಿನ ಅಧಿಕಾರಿಗಳು ಸಹ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ದೂರು‌ ನೀಡಿದ್ದರು. ಸದ್ಯ ಮೂವರು ಸಜಾ ಬಂಧಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ : ಕೇಂದ್ರ ಕಾರಾಗೃಹದ ಓರ್ವ ಕೈದಿ ಮೂವರು ಸಜಾ ಬಂಧಿಗಳ ಮೇಲೆ ಚಮಚದಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಪ್ರಕರಣ ಬೆಳಕಿದೆ ಬಂದಿದೆ.

ಕೇಂದ್ರ ಕಾರಾಗೃಹದಲ್ಲಿ ಕೈದಿಯಿಂದ ಹಲ್ಲೆ : ಕೇಂದ್ರ ಕಾರಾಗೃಹದಲ್ಲಿ ಉಡುಪಿಯಿಂದ ಬಂದಿರುವ ಪ್ರಶಾಂತ ಎಂಬ ಕೈದಿ ಇಂದು ಅಡುಗೆ ಮನೆಯಲ್ಲಿ ಊಟದ ಕೋಣೆಯಲ್ಲಿ ನೀರು ಕುಡಿಯುವ ವಿಚಾರದಲ್ಲಿ ಕೂಗಾಡಿದ್ದಾನೆ.

ಈ ವೇಳೆ ಸಜಾ ಕೈದಿಗಳು ಆತನನ್ನು ಸಮಾಧಾನ ಮಾಡಲು ಮುಂದಾದಾಗ ಕೋಪದಲ್ಲಿ ಬೆನಕಪ್ಪ, ದೇವೆಂದ್ರಪ್ಪ ಹಾಗೂ ಪರಮೇಶ್ವರಪ್ಪ ಎಂಬುವರ ಕೈಗೆ ಚಮಚದಿಂದ ಗಾಯಗೊಳಿಸಿದ್ದಾನೆ.

ಪ್ರಶಾಂತ ಉಡುಪಿಯಲ್ಲಿ ಅಪರಾಧ ಕೃತ್ಯ ಎಸಗಿ ಕೋರ್ಟ್​ನಲ್ಲಿ ನ್ಯಾಯಾಧೀಶರಿಗೆ ನಿಂದಿಸಿ, ಶಿಕ್ಷೆಗೆ ಒಳಗಾಗಿದ್ದಾನೆ. ಈತ ಸ್ವಲ್ಪ‌ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಾನೆ ಎನ್ನಲಾಗಿದೆ. ಪ್ರಶಾಂತ ಏಕಾಏಕಿ ಸಹ ಕೈದಿಗಳ ನಡುವೆ ಜಗಳವಾಡುವುದು, ಇತರರಿಗೆ ನಿಂದಿಸುವುದು ಆಗಾಗ ಮಾಡುತ್ತಿರುತ್ತಾನೆ.

ಓದಿ: ಪೇಜಾವರ ಮಠದ ವಿಶ್ವೇಶತೀರ್ಥರ ಹಾದಿಯಲ್ಲೇ ಅವರ ಶಿಷ್ಯ: ಹೊಸ ಕಾಂತ್ರಿಗೆ ನಾಂದಿ

ಈತನ ಬಗ್ಗೆ ಸಹ ಕೈದಿಗಳು ಹಾಗೂ ಜೈಲಿನ ಅಧಿಕಾರಿಗಳು ಸಹ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ದೂರು‌ ನೀಡಿದ್ದರು. ಸದ್ಯ ಮೂವರು ಸಜಾ ಬಂಧಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.