ETV Bharat / state

ಶಿವಮೊಗ್ಗದಲ್ಲಿ ಪ್ರಬಲ ಸಚಿವಾಕಾಂಕ್ಷಿಗಳು: ಆರಂಭವಾಗಿದೆ ಲಾಬಿ, ಲೆಕ್ಕಾಚಾರ

ಬಿಜೆಪಿಯ ಭದ್ರಕೋಟೆ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಸಚಿವ ಸ್ಥಾನದ ಆಕಾಂಕ್ಷಿಗಳ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸಚಿವ ಸ್ಥಾನದ ರೇಸ್​​ನಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳಿದಾರೆ. ಈ ಮೂವರಲ್ಲಿ ಯಾರಾಗ್ತಾರೆ ಮಿನಿಸ್ಟರ್ ಅನ್ನುವ ಲೆಕ್ಕಾಚಾರ ಆರಂಭವಾಗಿದೆ.

author img

By

Published : Aug 3, 2021, 6:45 PM IST

shimogga politics: aspirants for minister post
ಶಿವಮೊಗ್ಗದಲ್ಲಿ ಪ್ರಬಲ ಸಚಿವಾಕಾಂಕ್ಷಿಗಳು: ಆರಂಭವಾಗಿದೆ ಲಾಬಿ, ಲೆಕ್ಕಾಚಾರ

ಶಿವಮೊಗ್ಗ: ಈವರೆಗೂ ಬಿಜೆಪಿ ಸರ್ಕಾರದ ಪವರ್ ಸೆಂಟರ್ ಆಗಿದ್ದ ಶಿವಮೊಗ್ಗದಲ್ಲಿ ಸಚಿವಾಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಹೊಸ ಸಿಎಂ ಬಂದಿದ್ದು, ಹೊಸ ಸಂಪುಟ ರಚನೆಯಾಗುತ್ತಿದೆ. ಹಾಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಶಾಸಕರ ನಡುವೆ ಪೈಪೋಟಿ ಜೋರಾಗಿದೆ.

ಸಚಿವ ಸ್ಥಾನಕ್ಕಾಗಿ ಲಾಬಿ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮತ್ತೊಮ್ಮೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತೆರೆಮರೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಸಂಘ ಪರಿವಾರದ ಮುಖಂಡರನ್ನು ಭೇಟಿಯಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನೂ ಈಶ್ವರಪ್ಪ ಭೇಟಿಯಾಗಿದ್ದರು.

ಮತ್ತೊಂದೆಡೆ ಮಾಜಿ ಸಚಿವ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕೂಡ ಸಚಿವ ಸ್ಥಾನದ ರೇಸ್​ನಲ್ಲಿದ್ದಾರೆ. ಇವರಿಬ್ಬರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಅವರ ಬೆಂಬಲಿಗರಿಗಿದೆ.

ಹರತಾಳು ಹಾಲಪ್ಪ ಅವರು ಮೊದಲಿನಿಂದಲೂ ಯಡಿಯೂರಪ್ಪ ಅವರ ಪಾಳಯದಲ್ಲೇ ಗುರುತಿಸಿಕೊಂಡಿದ್ದು, ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಆರಗ ಜ್ಞಾನೇಂದ್ರ ಅವರು ಸಹ ಜಿಲ್ಲೆಯ ಹಿರಿಯ ಶಾಸಕರಾಗಿದ್ದು, ಅವರಿಗೆ ಮಂತ್ರಿಗಿರಿ ಸಾಧ್ಯತೆ ಹೆಚ್ಚಾಗಿದೆ.

ಯಡಿಯೂರಪ್ಪ ಅವರ ಶ್ರೀರಕ್ಷೆ, ಹೈಕಮಾಂಡ್​​ನ ದೃಷ್ಟಿ ಯಾರ ಮೇಲಿರುತ್ತೋ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಲಿದೆ. ಹಾಗಾಗಿ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಅವರ ಮೂಲಕ ಸಂಪುಟ ಸೇರುವ ಪ್ರಯತ್ನಲ್ಲಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮಾತ್ರ ಸಂಘ ಪರಿವಾರದ ಕಡೆಯಿಂದ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುವ ಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈ ನಿವಾಸದೊಳಗೆ ಬಿರುಸುಗೊಂಡ ಸಚಿವಾಕಾಂಕ್ಷಿಗಳ ಲಾಬಿ.. ಹೊರಗಡೆ ಬೆಂಬಲಿಗರ ಪ್ರತಿಭಟನೆ

ಶಿವಮೊಗ್ಗ: ಈವರೆಗೂ ಬಿಜೆಪಿ ಸರ್ಕಾರದ ಪವರ್ ಸೆಂಟರ್ ಆಗಿದ್ದ ಶಿವಮೊಗ್ಗದಲ್ಲಿ ಸಚಿವಾಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ. ಹೊಸ ಸಿಎಂ ಬಂದಿದ್ದು, ಹೊಸ ಸಂಪುಟ ರಚನೆಯಾಗುತ್ತಿದೆ. ಹಾಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಶಾಸಕರ ನಡುವೆ ಪೈಪೋಟಿ ಜೋರಾಗಿದೆ.

ಸಚಿವ ಸ್ಥಾನಕ್ಕಾಗಿ ಲಾಬಿ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮತ್ತೊಮ್ಮೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತೆರೆಮರೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಸಂಘ ಪರಿವಾರದ ಮುಖಂಡರನ್ನು ಭೇಟಿಯಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನೂ ಈಶ್ವರಪ್ಪ ಭೇಟಿಯಾಗಿದ್ದರು.

ಮತ್ತೊಂದೆಡೆ ಮಾಜಿ ಸಚಿವ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕೂಡ ಸಚಿವ ಸ್ಥಾನದ ರೇಸ್​ನಲ್ಲಿದ್ದಾರೆ. ಇವರಿಬ್ಬರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಅವರ ಬೆಂಬಲಿಗರಿಗಿದೆ.

ಹರತಾಳು ಹಾಲಪ್ಪ ಅವರು ಮೊದಲಿನಿಂದಲೂ ಯಡಿಯೂರಪ್ಪ ಅವರ ಪಾಳಯದಲ್ಲೇ ಗುರುತಿಸಿಕೊಂಡಿದ್ದು, ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಆರಗ ಜ್ಞಾನೇಂದ್ರ ಅವರು ಸಹ ಜಿಲ್ಲೆಯ ಹಿರಿಯ ಶಾಸಕರಾಗಿದ್ದು, ಅವರಿಗೆ ಮಂತ್ರಿಗಿರಿ ಸಾಧ್ಯತೆ ಹೆಚ್ಚಾಗಿದೆ.

ಯಡಿಯೂರಪ್ಪ ಅವರ ಶ್ರೀರಕ್ಷೆ, ಹೈಕಮಾಂಡ್​​ನ ದೃಷ್ಟಿ ಯಾರ ಮೇಲಿರುತ್ತೋ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಲಿದೆ. ಹಾಗಾಗಿ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಅವರ ಮೂಲಕ ಸಂಪುಟ ಸೇರುವ ಪ್ರಯತ್ನಲ್ಲಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮಾತ್ರ ಸಂಘ ಪರಿವಾರದ ಕಡೆಯಿಂದ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುವ ಯತ್ನದಲ್ಲಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈ ನಿವಾಸದೊಳಗೆ ಬಿರುಸುಗೊಂಡ ಸಚಿವಾಕಾಂಕ್ಷಿಗಳ ಲಾಬಿ.. ಹೊರಗಡೆ ಬೆಂಬಲಿಗರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.