ETV Bharat / state

ಕುಷ್ಠರೋಗ ನಿರ್ಮೂಲನ ಜಾಥಾ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ವೈದ್ಯರು

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕುಷ್ಠರೋಗ ಪತ್ತೆ ಹಾಗೂ ನಿರ್ಮೂಲನ ಜಾಥಾವನ್ನು ಆರೋಗ್ಯ ಇಲಾಖೆ ವತಿಯಿಂದ ನಗರದಲ್ಲಿ ಇಂದು ನಡೆಸಲಾಯಿತು.

author img

By

Published : Nov 25, 2019, 7:02 PM IST

ಕುಷ್ಠರೋಗ ನಿರ್ಮೂಲನ ಜಾಥ: ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ವೈದ್ಯರು

ಶಿವಮೊಗ್ಗ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕುಷ್ಠರೋಗ ಪತ್ತೆ ಹಾಗೂ ನಿರ್ಮೂಲನ ಜಾಥಾವನ್ನು ಆರೋಗ್ಯ ಇಲಾಖೆ ವತಿಯಿಂದ ನಗರದಲ್ಲಿ ಇಂದು ನಡೆಸಲಾಯಿತು.

ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ. ಸಿದ್ದಪ್ಪ ಚಾಲನೆ ನೀಡಿದರು. ಬಳಿಕ ನಗರದಲ್ಲಿ ಸಂಚಾರ ಮಾಡಿ ಕುಷ್ಠರೋಗ, ಅದರ ಲಕ್ಷಣಗಳೇನು ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತು ಜಾಥಾದಲ್ಲಿ ತಿಳಿಸಲಾಯಿತು. ಜಾಥದಲ್ಲಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜೊತೆ‌ ಸೇರಿ ಮನೆ ಮನೆಗೆ ತೆರಳಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿದರು. ಮನೆಗಳಲ್ಲಿ ವಾಸ ಮಾಡುವವರ ಮೈ ಮೇಲೆ ಇರುವ ಬಿಳಿ ಕಲೆಗಳನ್ನು ಪತ್ತೆ ಮಾಡುವುದು. ಅದು ಕುಷ್ಠರೋಗದ ಲಕ್ಷಣವೇ ಎಂದು ಗುರುತಿಸಿ, ಅದಕ್ಕೆ ಚಿಕಿತ್ಸೆಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಸಿಕೊಡಲಾಯಿತು.

ಕುಷ್ಠರೋಗ ನಿರ್ಮೂಲನ ಜಾಥಾ: ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ವೈದ್ಯರು

ಕುಷ್ಠರೋಗವನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಪಲ್ಸ್ ಪೊಲಿಯೋ ಮಾದರಿಯಲ್ಲಿ ಆಂದೋಲನ ನಡೆದಲಾಗುತ್ತಿದೆ. ಇದಕ್ಕಾಗಿ ಇಂದಿನಿಂದ ಡಿಸಂಬರ್ 12ರ ತನಕ ಪ್ರತಿ ಜಿಲ್ಲೆ, ನಗರ, ಗ್ರಾಮದಲ್ಲಿ ಆಂದೋಲನ ನಡೆಸಲಾಗುತ್ತಿದೆ. ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯ ಡಾ. ಸಿದ್ದಪ್ಪ ತಿಳಿಸಿದರು.

ಶಿವಮೊಗ್ಗ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕುಷ್ಠರೋಗ ಪತ್ತೆ ಹಾಗೂ ನಿರ್ಮೂಲನ ಜಾಥಾವನ್ನು ಆರೋಗ್ಯ ಇಲಾಖೆ ವತಿಯಿಂದ ನಗರದಲ್ಲಿ ಇಂದು ನಡೆಸಲಾಯಿತು.

ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ. ಸಿದ್ದಪ್ಪ ಚಾಲನೆ ನೀಡಿದರು. ಬಳಿಕ ನಗರದಲ್ಲಿ ಸಂಚಾರ ಮಾಡಿ ಕುಷ್ಠರೋಗ, ಅದರ ಲಕ್ಷಣಗಳೇನು ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತು ಜಾಥಾದಲ್ಲಿ ತಿಳಿಸಲಾಯಿತು. ಜಾಥದಲ್ಲಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜೊತೆ‌ ಸೇರಿ ಮನೆ ಮನೆಗೆ ತೆರಳಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿದರು. ಮನೆಗಳಲ್ಲಿ ವಾಸ ಮಾಡುವವರ ಮೈ ಮೇಲೆ ಇರುವ ಬಿಳಿ ಕಲೆಗಳನ್ನು ಪತ್ತೆ ಮಾಡುವುದು. ಅದು ಕುಷ್ಠರೋಗದ ಲಕ್ಷಣವೇ ಎಂದು ಗುರುತಿಸಿ, ಅದಕ್ಕೆ ಚಿಕಿತ್ಸೆಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಸಿಕೊಡಲಾಯಿತು.

ಕುಷ್ಠರೋಗ ನಿರ್ಮೂಲನ ಜಾಥಾ: ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ವೈದ್ಯರು

ಕುಷ್ಠರೋಗವನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಪಲ್ಸ್ ಪೊಲಿಯೋ ಮಾದರಿಯಲ್ಲಿ ಆಂದೋಲನ ನಡೆದಲಾಗುತ್ತಿದೆ. ಇದಕ್ಕಾಗಿ ಇಂದಿನಿಂದ ಡಿಸಂಬರ್ 12ರ ತನಕ ಪ್ರತಿ ಜಿಲ್ಲೆ, ನಗರ, ಗ್ರಾಮದಲ್ಲಿ ಆಂದೋಲನ ನಡೆಸಲಾಗುತ್ತಿದೆ. ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯ ಡಾ. ಸಿದ್ದಪ್ಪ ತಿಳಿಸಿದರು.

Intro:ಭಾರತ ದೇಶದಿಂದ ಕುಷ್ಟರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕುಷ್ಠರೋಗ ಪತ್ತೆ ಹಾಗೂ ನಿರ್ಮೂಲನ ಆಂದೋಲನ ಜಾಥವನ್ನು ನಡೆಸಲಾಯಿತು. ನಗರದ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿದ್ದಪ್ಪ ಚಾಲನೆ ನೀಡಿದರು. ಜಾಥ ತುಂಗಾ ನಗರದಲ್ಲಿ ಸಂಚಾರ ಮಾಡಿ ಕುಷ್ಠರೋಗ ಎಂದರೇನು, ಅದರ ಲಕ್ಷಣಗಳೆಂದರೇನು ಹಾಗೂ ಅದಕ್ಕೆ ಇರುವ ಚಿಕಿತ್ಸೆಯನ್ನು ಜಾಥದಲ್ಲಿ ತಿಳಿಸಲಾಯಿತು.


Body:ಜಾಥದಲ್ಲಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಜೊತೆ‌ ಸೇರಿ ಮನೆ ಮನೆಗೆ ತಂಡಗಳಾಗಿ ತೆರಳಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಮನೆಗಳಲ್ಲಿ ವಾಸ ಮಾಡುವವರ ಮೈ ಮೇಲೆ ಇರುವ ಬಿಳಿ ಕಲೆ ಗಳನ್ನು ಪತ್ತೆ ಮಾಡುವುದು. ಅದು ಯಾವ ರೀತಿಯ ಕಲೆ ಎಂದು ಗುರುತಿಸಿ ಅದು ಕುಷ್ಠರೋಗದ ಲಕ್ಷಣವೇ ಎಂದು ಗುರುತಿಸಿ, ಅದಕ್ಕೆ ಚಿಕಿತ್ಸೆಯನ್ನು ಹೇಗೆ ಪಡೆಯುವುದು. ಯಾವ ರೀತಿಯ ಚಿಕಿತ್ಸೆ ಸಿಗುತ್ತದೆ ಎಂಬುದನ್ನು ತಿಳಿಸಿ ಕೊಡಲಾಯಿತು.


Conclusion:ಕುಷ್ಠರೋಗವನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಪಲ್ಸ್ ಪೊಲೀಯೊ ಮಾದರಿಯಲ್ಲಿ ಆಂದೋಲನವನ್ನು ನಡೆದಲಾಗುತ್ತಿದೆ. ಇದಕ್ಕಾಗಿ ಇಂದಿನಿಂದ ಡಿಸಂಬರ್ 12 ರ ತನಕ ಪ್ರತಿ ಜಿಲ್ಲೆಯ, ನಗರ, ಗ್ರಾಮ ದಲ್ಲಿ ಆಂದೋಲನ ನಡೆಸಲಾಗುತ್ತಿದೆ. ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ ವೈದ್ಯರಾದ ಡಾ.ಸಿದ್ದಪ್ಪನವರು..

ಬೈಟ್: ಡಾ. ಸಿದ್ದಪ್ಪ. ವೈದ್ಯಾಧಿಕಾರಿಗಳು ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.