ETV Bharat / state

ಸೋಮಶೇಖರ್‌ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹ : ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಎಸ್​ಪಿಗೆ ಮನವಿ

author img

By

Published : Jan 4, 2020, 11:03 PM IST

ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆ‌ ನೀಡಿದ್ದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಪೊಲೀಸ್​  ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Legal action against Somasekhar Reddy
ಸೋಮಶೇಖರ್‌ ರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ

ಶಿವಮೊಗ್ಗ: ಶಾಸಕ ಜಿ.ಸೋಮಶೇಖರ್‌ ರೆಡ್ಡಿಯವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸೋಮಶೇಖರ್‌ ರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ

ಜ.3ರಂದು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರಿಕರ ವೇದಿಕೆ, ಬಳ್ಳಾರಿ ಇವರು ಆಯೋಜಿಸಿದ್ದ, ಸಿಎಎ ಕಾಯ್ದೆ ಬೆಂಬಲಿಸಿ ನಡೆದ ಬೃಹತ್ ಸಭೆಯಲ್ಲಿ ಜಿ. ಸೋಮಶೇಖರ್‌ ರೆಡ್ಡಿಯವರು ಸಂವಿಧಾನ ಬದ್ದವಾದ ಜನ ಪ್ರತಿನಿಧಿಯಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ನಗರದಲ್ಲಿ ಶಾಂತಿ ಭಂಗ ಉಂಟು ಮಾಡುವಂತಹ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯನ್ನು ಸೃಷ್ಠಿಮಾಡುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವ ಇವರ ಮೇಲೆ ದೇಶದ್ರೋಹಿ ಎಂದು ದೂರು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ ಸಲ್ಲಿಸಿದರು.

ಶಿವಮೊಗ್ಗ: ಶಾಸಕ ಜಿ.ಸೋಮಶೇಖರ್‌ ರೆಡ್ಡಿಯವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸೋಮಶೇಖರ್‌ ರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ

ಜ.3ರಂದು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರಿಕರ ವೇದಿಕೆ, ಬಳ್ಳಾರಿ ಇವರು ಆಯೋಜಿಸಿದ್ದ, ಸಿಎಎ ಕಾಯ್ದೆ ಬೆಂಬಲಿಸಿ ನಡೆದ ಬೃಹತ್ ಸಭೆಯಲ್ಲಿ ಜಿ. ಸೋಮಶೇಖರ್‌ ರೆಡ್ಡಿಯವರು ಸಂವಿಧಾನ ಬದ್ದವಾದ ಜನ ಪ್ರತಿನಿಧಿಯಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ನಗರದಲ್ಲಿ ಶಾಂತಿ ಭಂಗ ಉಂಟು ಮಾಡುವಂತಹ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯನ್ನು ಸೃಷ್ಠಿಮಾಡುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವ ಇವರ ಮೇಲೆ ದೇಶದ್ರೋಹಿ ಎಂದು ದೂರು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ ಸಲ್ಲಿಸಿದರು.

Intro:ಶಿವಮೊಗ್ಗ,

ಶಾಸಕ ಜಿ.ಸೋಮಶೇಖರ್‌ರೆಡ್ಡಿ ಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ದಿ:03.01.2020ರಂದು ನಗರದ ಗಡಗಿ
ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರೀಕರ ವೇದಿಕೆ, ಬಳ್ಳಾರಿ ಇವರು ಆಯೋಜಿಸಿದ್ದ, ಸಿ.ಎ.ಎ. ಕಾಯ್ದೆ
ಪರವಾಗಿ ನಡೆದ ಬೃಹತ್ ಸಭೆಯಲ್ಲಿ ಜಿ.
ಸೋಮಶೇಖರ್‌ರೆಡ್ಡಿ ಯವರು ಸಂವಿಧಾನ ಬದ್ದವಾದ ಜನಪ್ರತಿನಿಧಿಯಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ
ನಗರದಲ್ಲಿ ಶಾಂತಿ ಭಂಗ ಉಂಟು ಮಾಡುವಂತಹ ಹಾಗೂ ಕೋಮು ಗಲಭೆ ಹರಡುವಂತಹ ಭಯದ
ವಾತಾವರಣವನ್ನು ನಿರ್ಮಾಣ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ "ಹೇ ಜಾಸ್ತಿ ನಕ್ರಾ ಮಾಡಿದ್ರೆ ಸರಿ ಇರಲ್ಲ, ಕಾಯ್ದೆ
ವಿರೋದಿಸಿದ್ರೆ ನಾವು ರೊಚ್ಚಿಗೇಳೇಕಾಗುತ್ತದೆ. ನಾವು ಇರೋದು 80% ನೀವು ಇರೋದು ಕೇವಲ 17 ಪರ್ಸೆಂಟ್,
ತೇಜಸ್ವಿ ಸೂರ್ಯ ಹೇಳಿದ್ದು, ನಿಜ ಇದೇ ಪಂಕ್ಚರ್ ಹಾಕೋರು ಓದಿರಲ್ಲ ಅದಕ್ಕೆ ಯಾರ್ ಏನು ಹೇಳಿದ್ರು
ನಂಬಬಾರದು. ನಕ್ರಾ ಮಾಡಿದ್ರೆ ನಾವು ಜಸ್ಟ್ ಉಶ್ ಅಂತಾ ಊದಿದ್ರೆ ನೀವು ಹಾರಿಹೋಗೀರ" ಎಂದು ಪೌರತ್ವ ಕಾಯ್ದೆ
ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಶಾಸಕ ಸೋಮಶೇಖರ್‌ರೆಡ್ಡಿ ಪ್ರಚೋಧನಕಾರಿಯಾಗಿ ಮಾತನಾಡಿದ್ದಾರೆ. ಜಿ.ಸೋಮಶೇಖರ್‌ರೆಡ್ಡಿ ಯವರು ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮದ್ಯೆ.
ವಿಷ ಬೀಜಗಳನ್ನು ಬಿತ್ತಿ, ಜಗಳವನ್ನು ಹಚ್ಚುವಂತಹ ಹೇಳಿಕೆಗಳನ್ನು ಕೊಟ್ಟು, ರಾಜ್ಯ ಮತ್ತು ದೇಶದಲ್ಲಿ |
ಅಶಾಂತಿಯನ್ನು ಸೃಷ್ಟಿಮಾಡುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುತ್ತಾರೆ, ಆದ್ದರಿಂದ ಇವರ ಮೇಲೆ
ದೇಶದ್ರೋಹಿ ಎಂದು ದೂರು ದಾಖಲಿಸಿ, ಕ್ರಮ ಕೈಗೋಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.

ಭೀಮಾನಾಯ್ಕ ಎಸ್Body:ಭೀಮಾನಾಯ್ಕ ಎಸ್ ಶಿವಮೊಗ್ಗConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.