ಶಿವಮೊಗ್ಗ: ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಟೆಂಡರ್ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ನಂತರ ಮರಳನ್ನು ಬ್ಲಾಕ್ನಲ್ಲಿ ಸಾಗಾಟ ನಡೆಸುತ್ತಿದ್ದದ್ದನ್ನು ಕಂಡ ಜಿಲ್ಲಾಡಳಿತ ಗುತ್ತಿಗೆಯನ್ನು ರದ್ದು ಮಾಡುವಂತೆ ಆದೇಶ ಮಾಡಿದೆ.

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.